ಕೆ.ಜಿ.ಎಫ್ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ದಸರಾ ಉತ್ಸವ

September 29, 2009

DSC02149

 

  •   ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ವಸತಿ ಗೃಹಗಳ ಆವರಣದಲ್ಲಿ ನೆಲೆಗೊಂಡಿರುವ  ಶ್ರೀ. ಚಾಮುಂಡೇಶ್ವರಿ ಅಮ್ಮನವರ  ದಸರ ಉತ್ಸವ ಕಾರ್ಯಕ್ರಮಗಳು ದಿನಾಂಕ: ೨೧-೦೯-೨೦೦೯ ರಿಂದ ೨೮-೦೯-೨೦೦೯ ರವರೆಗೆ ಪ್ರತಿ ದಿವಸ ಅಮ್ಮನವರಿಗೆ ಅಭಿಷೇಕ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದಿದ್ದು, ಈ ಪೂಜಾ ಕಾರ್ಯಕ್ರಮಕ್ಕೆ ಕೆ.ಜಿ.ಎಫ್ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಸಾರ್ವಜನಿಕರು ಪ್ರೋತ್ಸಾಹ ನೀಡಿ ಯಶಸ್ವಿಗೊಳಿಸಿರುತ್ತಾರೆ.
  • ದಿನಾಂಕ: ೨೮-೦೯-೨೦೦೯ ರಂದು ವಿಜಯದಶಮಿ ಅಂಗವಾಗಿ ದೇವಾಲಯದಲ್ಲಿ ಮಧ್ಯಾಹ್ನ ಪೂಜೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ನೆರವೇರಿದ್ದು, ಸಂಜೆ ಅಮ್ಮನವರ ಮೆರವಣಿಗೆಯನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆ ವಸತಿ ಗೃಹಗಳ ಸಮ್ಮುಚ್ಚಯದಲ್ಲಿ ನೆರೆವೇರಿದ್ದು ಈ ಕಾರ್ಯ ಕ್ರಮವನ್ನು ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ಶ್ರೀ. ದೇವಜ್ಯೋತಿ ರೇ, ಐ.ಪಿ.ಎಸ್ ರವರು ನೆರವೇರಿಸಿರುತ್ತಾರೆ.

“ಪೊಲೀಸ್ ಕುಸುಮಗಳು”

August 12, 2009

ಮಾನ್ಯ ಗೌರವಾನ್ವಿತರೇ,

            ನಾವು ” ಪೊಲೀಸ್ ಕುಸುಮಗಳು “ ಪೊಲೀಸ್ ಮಕ್ಕಳಾದ ನಮ್ಮನ್ನು ಪೊಲೀಸ್ ಕುಸುಮಗಳೆಂದು ಗುರುತಿಸಿ ದಿನಾಂಕ: ೧೦-೦೩-೨೦೦೭ ರಿಂದ ಪ್ರತಿ ತಿಂಗಳ ೨ನೇ ಶನಿವಾರದಂದು ಹಾಗೂ ಹಲವು ರಾಷ್ಟ್ರೀಯ ಹಬ್ಬಗಳಂದು ಸಂಜೆ ೪-೦೦ ಗಂಟೆಯಿಂದ ೬-೦೦ ಗಂಟೆಯವರೆಗೆ ಡಿ.ಎ.ಆರ್‍, ಕೆ.ಜಿ.ಎಫ್ ವಸತಿ ಗೃಹಗಳ ಸಮುಚ್ಚಯದ ಬಯಲಿನಲ್ಲಿ ಒಟ್ಟುಗೂಡಿಸಿ ಸಾಮಾನ್ಯ ಜ್ಞಾನ, ಮಿಮಿಕ್ರಿ, ಡ್ಯಾನ್ಸ್, ಹಾಡು, ಚರ್ಚೆ, ತಮಾಷೆ, ಗಾದೆ, ಒಗಟು, ಗಣಿತ, ಶಾಲಾ ಪಠ್ಯ ಮತ್ತಿತರೆ ಎಲ್ಲಾ ರಂಗಗಳಲ್ಲಿ ಬೆಳೆಯಲು ಪ್ರೋತ್ಸಾಹಿಸಿ ಬೆಳೆಸಿಕೊಂಡು ಬರಲಾಗುತ್ತಿದೆ. ನಾವು ಎಲ್.ಕೆ.ಜಿಯಿಂದ ಮೇಲ್ಪಟ್ಟು ಎಲ್ಲಾ ತರಗತಿಗಳ ವಿದ್ಯಾರ್ಥಿಗಳು ಜಮಾವಣೆ ಆಗಿ ಅನೇಕ ವಿಷಯಗಳನ್ನು ಕಲಿತುಕೊಂಡಿದ್ದೇವೆ; ಕಲಿತುಕೊಳ್ಳತ್ತಿದ್ದೇವೆ. ನಮಗೆ ಬಹಳ ಉಪಕಾರವಾಗುತ್ತಿದೆ. ಮೇಲ್ಕಂಡ ವಿಷಯಗಳ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದವರಿಗೆ ಅಂಕಗಳನ್ನು ನೀಡುವುದು ವಾಡಿಕೆಯಲ್ಲಿದ್ದು, ಅಂಕಗಳ ಆಧಾರದ ಮೇಲೆ ಪ್ರಥಮ, ದ್ವಿತಿಯ ಬಹುಮಾನಗಳನ್ನು ಅಂದಂದೇ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕೆಲ್ಲಾ ತಮ್ಮ ಪೋಷಕರು, ಹಿತೈಷಿಗಳು ಸಾಕ್ಷಿಯಾಗಿರುತ್ತಾರೆ.

          ನಮ್ಮ ” ಪೊಲೀಸ್ ಕುಸುಮಗಳು “ ಸಾಧಿಸಿರುವ ಮೊತ್ತೊಂದು ಮಹತ್ತೆರ ಸಾಧನೆಯೆಂದರೆ ೭, ೮, ೯ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿದಿನ ಸಂಜೆ ೬-೦೦ ರಿಂದ ೮-೦೦ ಗಂಟೆಯವರೆಗೆ ಹಾಗೂ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಳಿಗ್ಗೆ ೬-೩೦ ರಿಂದ ೮-೦೦ ಗಂಟೆಯವರೆಗೆ ಮತ್ತು ಸಂಜೆ ೬-೦೦ ರಿಂದ ೮-೦೦ ಗಂಟೆಯವರೆಗೆ ಉಚಿತ ತರಗತಿಗಳನ್ನು ನಡೆಸಲಾಗುತ್ತಿರುವುದಾಗಿರುತ್ತದೆ. ಇದಕ್ಕೆ ಬೋಧಕರು ನಮ್ಮ ಪೊಲೀಸ್ ಸಿಬ್ಬಂದಿಗಳೇ ಆಗಿರುತ್ತಾರೆ.

          ಈ ಸಾಧನೆಗಳನ್ನು ನೆನಪಿಸಿಗೊಳ್ಳಲು ಇದರೊಂದಿಗೆ ಲಗತ್ತಿಸಿರುವ ಆಮಂತ್ರಣ ಪತ್ರದಲ್ಲಿನ ದಿನಾಂಕದಂದು ೨ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲು ಉದ್ದೇಶಿಸಿದ್ದೇವೆ, ಇದರ ಅಂಗವಾಗಿ ಪ್ರಪ್ರಥಮವಾಗಿ ಈ ೨೦೦೯ನೇ ಸ್ವಾತಂತ್ಯ್ರ ದಿನಾಚರಣೆಯ ಸಂದರ್ಭದಲ್ಲಿ ಕೆ.ಜಿ.ಎಫ್ ನಗರಸಭೆ ಮೈಧಾನದಲ್ಲಿ ಬೆಳಿಗ್ಗೆ ನಮ್ಮಿಂದ ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಿಕೊಂಡಿದ್ದೇವೆ. ಇಲಾಖೆಯಿಂದ ಅಥವಾ ಪೋಷಕರಿಂದ ವಂತಿಗೆಗಳನ್ನು ಪಡೆಯದೇ ಇಷ್ಟೊಂದು ಮಗತ್ತರ ಸಾಧನೆ ಶ್ಲಾಘನೀಯವೆನಿಸಿದೆ.

       ಘನತವೇತ್ತರಾದ ತಾವು ನಮ್ಮ ಈ ೨ನೇ ವಾರ್ಷಿಕೋತ್ಸವ ಆಚರಣೆ ಕಾರ್ಯಕ್ರಮಗಳಿಗೆ ಆಗಮಿಸಿ ಆಶೀರ್ವದಿಸಬೇಕೆಂದು ಕೋರಿವ.

ತಮ್ಮ ಆಗಮನಾಭಿಲಾಷಿಗಳು,

 ಪೊಲೀಸ್ ಕುಸುಮಗಳು,

         ಕೆ.ಜಿ.ಎಫ್.

“ಕಾರ್ಯಕ್ರಮಗಳು”

ದಿನಾಂಕ: ೧೫-೦೮-೨೦೦೯ ರಂದು

ಬೆಳಿಗ್ಗೆ ೭-೦೦ ಗಂಟೆಗೆ ಪೊಲೀಸ್ ಕುಸುಮಗಳ ವ್ಯಾಸಂಗ ಕೇಂದ್ರದ ಬಳಿ ದ್ವಜಾರೋಹಣ.

ಬೆಳಿಗ್ಗೆ ೮-೦೦ ಗಂಟೆಗೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ದ್ವಜಾರೋಹಣ.

ಬೆಳಿಗ್ಗೆ ೯-೦೦ ಗಂಟೆಗೆ ಕೆ.ಜಿ.ಎಫ್ ನಗರ ಸಭೆ ಮೈದಾನದಲ್ಲಿ ಪಥ ಸಂಚಲನ

ಮತ್ತು ಸಂಜೆ ಡಿ.ಎ.ಆರ್‍. ಪೊಲೀಸ್ ಕುಸುಮಗಳ ವ್ಯಾಸಂಗ ಕೇಂದ್ರದ ಬಳಿ

ಪ್ರಾರ್ಥನೆ, ಸ್ವಾಗತ ಭಾಷಣ, ಪ್ರಸ್ತಾವಿಕೆ ತಂದೆ ತಾಯಿಗಳ ಅನಿಸಿಕೆ ಹಾಗೂ ಮಕ್ಕಳ ಅನಿಸಿಕೆಗಳು.

ಮುಖ್ಯ ಅತಿಥಿಗಳು: ಸನ್ಮಾನ್ಯ ಶ್ರೀ. ದೇವಜ್ಯೋತಿ ರೇ, ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು, ಕೆ.ಜಿ.ಎಫ್.

 

 

 

                                                                             


RED RIBBON EXPRESS

July 17, 2008

A SPECIAL TRAIN to create awareness on H.I.V. and AIDS and to remove myths and misconceptions of H.I.V. and AIDS is arriving on 21st July 2008 at Bangarpet Railway Station, in Kolar District, Karnataka, and will leave on 23rd July 2008. There is an exhibition in Coach No. 1 to 3. All are required to utilise this golden opportunity to know more about H.I.V. and AIDS. All are welcome for the exhibition.


RED RIBBON EXPRESS

July 10, 2008

A SPECIAL TRAIN to create awareness on H.I.V. and AIDS and to remove myths and misconceptions of H.I.V. and AIDS is arriving on 21st July 2008 at Bangarpet Railway Station, in Kolar District, Karnataka, and will leave on 22nd July 2008. There is an exhibition in Coach No. 1 to 3. All are required to utilise this golden opportunity to know more about H.I.V. and AIDS.

 

 


ಪೊಲೀಸ್ ಕುಸುಮಗಳ ಕಾರ್ಯಕ್ರಮದ ವಾರ್ಷಿಕ ಸಮಾರಂಭ

March 19, 2008
  •    ಕೆ.ಜಿ.ಎಫ್ ನಗರದ ಡಿ..ಆರ್. ಪೊಲೀಸ್ ವಸತಿಗೃಹಗಳ ಸಮುಚ್ಚಯದಲ್ಲಿ ಪೊಲೀಸ್ ಕುಸುಮಗಳ ಕಾರ್ಯಕ್ರಮವನ್ನು ಈಗ್ಗೆ ಸುಮಾರು ಒಂದು ವರ್ಷದಿಂದ ಅಂದರೆ ೨೦೦೭ ಮಾರ್ಚ್ ತಿಂಗಳಿಂದ ಪ್ರಾರಂಬಿಸಲಾಗಿತ್ತು. ಕಾರ್ಯಕ್ರಮವನ್ನು ಪ್ರತಿ ತಿಂಗಳ ೨ನೇ ಶನಿವಾರ ಮತ್ತು ರಾಷ್ಟ್ರೀಯ ಹಬ್ಬಗಳ ದಿನದಂದೂ ಸಹ ನಡೆಸಲಾಗುತ್ತಿದೆ.
  •   ಈ ಕಾರ್ಯಕ್ರಮದಲ್ಲಿ ಎಲ್.ಕೆ.ಜಿ. ಯಿಂದ ೧೦ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳ ಭಾಗವಹಿಸುತ್ತಿದ್ದು, ಅವರಿಗೆ ಪಠ್ಯಪುಸ್ತಕ ಜೊತೆಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿ ಅವರು ನೀಡುವ ಉತ್ತರದ ಆಧಾರದ ಮೇಲೆ ಅವರಿಗೆ ಅಂಕಗಳನ್ನು ನೀಡಿ ಬಹುಮಾನಗಳನ್ನು ನೀಡಲಾಗುತ್ತದೆ. ಜೊತೆಗೆ ಅವರಿಗೆ ಸಿಹಿ ತಿಂಡಿಯನ್ನು ನೀಡಲಾಗುತ್ತಿದೆ. ಮತ್ತು ವಿದ್ಯಾರ್ಥಿಗಳಿಂದ ಹಾಡು ಹೇಳುವುದು, ಹಾಸ್ಯ, ನೃತ್ಯ, ಗಾದೆ ಮುಂತಾದ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ನೈಪುಣ್ಯತೆಯನ್ನು ಹೊರ ತೆಗೆಯಲು ಮತ್ತು ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಹಾಗೂ ಎಲ್ಲಾ ಮಕ್ಕಳು ಭಯವಿಲ್ಲದೆ ಎದ್ದು ನಿಂತ್ತು ಧೈರ್ಯವಾಗಿ ಮಾತನಾಡುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮಕ್ಕಳ ಸ್ವಯಂ ಸ್ಪೂರ್ತಿಯೇ ಕಾರ್ಯಕ್ರಮದ ದಾರಿ ದೀಪವಾಗಿದೆ. ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಒಂದು ವೇದಿಕೆಯು ಅವಶ್ಯಕತೆ ಇದ್ದು ನಿಟ್ಟಿನಲ್ಲಿ ಪೊಲೀಸ್ ಕುಸುಮಗಳ ಕಾರ್ಯಕ್ರಮದ ಪ್ರಾರಂಭದಲ್ಲಿ 70-80 ಜನ ಇದ್ದ ಮಕ್ಕಳು ಈಗ್ ೭೦೮೦ ಜನ ಮಕ್ಕಳು ಕಾರ್ಯಕ್ರಮದಲ್ಲಿ ಬಂದು ಸೇರಿರುತ್ತಾರೆ. ಇದು ಮಕ್ಕಳಲ್ಲಿನ ಆಸಕ್ತಿಯನ್ನು ತೋರಿಸುತ್ತದೆ.
  •   ದಿನಾಂಕ: ೦೮-೦೩-೨೦೦೮ ರಂದು ಇಂತಹ ಕಾರ್ಯಕ್ರಮದ ಪ್ರಥಮ ವಾರ್ಷಿಕ ಸಮಾರಂಭವನ್ನು ಆಯೋಜಿಸಿದ್ದು, ಮಾನ್ಯ ಶ್ರೀ. ಎಂ.ವಿ. ಶೇಷನ್ ಪೊಲೀಸ್ ಉಪಾಧೀಕ್ಷಕರು, ಕೆ.ಜಿ.ಎಫ್ ರವರು ಉದ್ಘಾಟಿಸಿದ್ದು, ಅವರು ಮಾತನಾಡಿ ತಮ್ಮ ಪೊಲೀಸ್ ವಸತಿಗೃಹಗಳ ಸಮುಚ್ಚಿಯದಲ್ಲಿ ಮಕ್ಕಳ ಜ್ಞಾನಾರ್ಜನೆಗೆ ಸಹಾಯವಾಗುವ ಇಂತಹ ಕೆಲಸ ಮಾಡುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿರಲ್ಲದೆ, ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.
  •   ಗೃಹ ರಕ್ಷಕ ದಳದ ಸಮಾದೇಷ್ಟರಾದಂತಹ ಶ್ರೀ. ಪರುಶೋತ್ತಮ್ ರವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದು, ಮಕ್ಕಳ ಭವಿಷ್ಯಕ್ಕೆ ಅಗತ್ಯವಾಗಿರುವ ಮತ್ತು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡುವ ಇಂತಹ ಸಾಮಾಜಿಕ ಕಾರ್ಯಕ್ರಮ, ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವುದಕ್ಕೆ ನಿಜಕ್ಕೂ ಮೆಚ್ಚುವಂತಹದ್ದು ಎಂದು ಅಭಿಪ್ರಾಯಪಟ್ಟರು.
  •   ಈ ಕಾರ್ಯಕ್ರಮಕ್ಕೆ ಸಮಾರು ೧೦೦ ಮಕ್ಕಳು ಮತ್ತು ೩೦೦ ಜನ ಪೋಷಕರು ಭಾಗವಹಿಸಿದ್ದು ವಿಶೇಷವಾಗಿತ್ತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
  •   ಈ ಕಾರ್ಯಕ್ರಮದಲ್ಲಿ ಮಕ್ಕಳಿಂದಲೇ ನಿರೂಪಣೆ, ಪ್ರಾರ್ಥನೆ, ಸ್ವಾಗತ ಭಾಷಣ, ವಂದನಾರ್ಪಣೆ, ಅತಿಥಿಗಳಿಗೆ ಮಾಲಾರ್ಪಣೆ ಮುಂತಾದವುದೆಲ್ಲವನ್ನು ಮಕ್ಕಳಿಂದಲೇ ಮಾಡಿಸಲಾಗಿದ್ದು, ಕೊನೆಯಲ್ಲಿ ಮಕ್ಕಳಿಗೆ ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.