ಪತ್ರಿಕಾ ಪ್ರಕಟಣೆ ದಿನಾಂಕ ೨೮ನೇ ಅಕ್ಟೋಬರ್‌ ೨೦೧೦

October 28, 2010

ಪತ್ರಿಕಾ ಪ್ರಕಟಣೆ

         ದಿನಾಂಕ ೦೬.೧೧.೨೦೦೮ ರಂದು ರಾತ್ರಿ ಉರಿಗಾಂ ಪೊಲೀಸ್ ಠಾಣಾ ಸರಹದ್ದು ಸ್ಕೂಲ್‌ ಆಫ್‌ ಮೈನ್ಸ್ ಹಿಂಭಾಗ ನಡೆದ ಕೊಲೆ ಪ್ರಕರಣದಲ್ಲಿ ಮಾನ್ಯ ಕೆ.ಜಿ.ಎಫ್ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ.ಲಕ್ಷ್ಮಿನಾರಾಯಣ ರವರು ೪ ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ತಲಾ ೫೦೦೦/- ರೂ ದಂಡ ವಿಧಿಸಿ ಮಹತ್ವ ತೀರ್ಪು ನೀಡಿರುತ್ತಾರೆ.

             ಸದರಿ ಪ್ರಕರಣದಲ್ಲಿ ಕೊಲೆಗೀಡಾದ ಉರಿಗಾಂಪೇಟೆಯ ಶ್ರೀರಾಮನಗರ ವಾಸಿ ಶ್ರೀ.ಪರಮೇಶ್ವರ ಬಾಬು ರವರ ಪತ್ನಿಯಾದ ೨ನೇ ಆರೋಪಿ ಅಜಂತಾಳೊಂದಿಗೆ ೧ನೇ ಆರೋಪಿ ವಿಜಯಕುಮಾರ್‌ @ ವಿಜಿ ಎಂಬುವನ್ನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಇದನ್ನು ಪ್ರಶ್ನಿಸಿದ ಶ್ರೀ.ಪರಮೇಶ್ವರ್‍ ಬಾಬು ರವರನ್ನು ದಿನಾಂಕ ೦೬.೧೧.೨೦೦೮ ರಂದು ರಾತ್ರಿ ಸದರಿ ಶ್ರೀರಾಮನಗರ ಆರೋಪಿಗಳಾದ ವಿಜಯಕುಮಾರ್‌ @ ವಿಜಿ, ಅಜಂತಾ, ಜಯಶೀಲಿ ಮತ್ತು ಸುರೇಶ್‌ಕುಮಾರ್‌ @ ಸುರೇಶ್‌ಬಾಬು ರವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು, ಸದರಿ ಪ್ರಕರಣವನ್ನು ಉರಿಗಾಂ ಪೊಲೀಸ್ ಠಾಣೆಯ ಅಂದಿನ ಪಿ.ಎಸ್.ಐ ಶ್ರೀ.ಅಶೋಕ್‌ಕುಮಾರ್‌ ಮತ್ತು ಸಿ.ಪಿ.ಐ ಶ್ರೀ.ವಿ.ಕೃಷ್ಣಪ್ಪ ರವರುಗಳು ತನಿಖೆ ಮಾಡಿ ದೋಷರೋಪಣ ಪಟ್ಟಿ ಸಲ್ಲಿಸಿದ್ದರು.

 


ಪತ್ರಿಕಾ ಪ್ರಕಟಣೆ

June 11, 2010

ಮಾನ್ಯ ಡಿ.ಜಿ. ಮತ್ತು ಐ.ಜಿ.ಪಿ, ಕರ್ನಾಟಕ ರಾಜ್ಯ ಬೆಂಗಳೂರು ರವರ ಆದೇಶ ಸಂಖ್ಯೆ: ೨೧/ಅಪರಾಧ/ಮಿಶ್ರ-೨/೨೦೧೦ ದಿನಾಂಕ: ೨೦-೦೪-೨೦೧೦ ರ ಮೇರೆಗೆ ಈ ದಿನ ೧೧-೦೬-೨೦೧೦ ರಂದು ಚಾಂಪಿಯನ್‌ರೀಫ್ಸ್, ರಾಬರ್ಟ್‌‌ನಸ್‌ಪೇಟೆ, ಉರಿಗಾಂ ಮತ್ತು ಬಂಗಾರಪೇಟೆ ವೃತ್ತ ಕಛೇರಿಗಳ ಆವರಣದಲ್ಲಿ ಆಯ ವೃತ್ತಕ್ಕೆ ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಮತ್ತು ವೃತ್ತ ಕಛೇರಿಗಳಲ್ಲಿ ಈಗಾಗಲೇ ವಶ ಪಡಿಸಿಕೊಂಡಿರುವ ಈ ಕೆಳಕಂಡ ಕಳ್ಳ ಮಾಲುಗಳನ್ನು ಪ್ರದರ್ಶನಕ್ಕೆ ಇಟ್ಟು, ಅವುಗಳ ವಾರಸುದಾರರುಗಳನ್ನು ಬರಮಾಡಿಕೊಂಡು, ಕಾನೂನಿನ ರೀತ್ಯಾ ಕಳ್ಳ ಮಾಲುಗಳನ್ನು ವಾರಸುದಾರರಿಗೆ ವಾಪಸ್ಸು ನೀಡಿರುತ್ತದೆ.

  • ಚಾಂಪಿಯನ್‌ ರೀಫ್ಸ್ ವೃತ್ತ ಕಛೇರಿ:

ಚಾಂಪಿಯನ್‌ ರೀಫ್ಸ್ ಪೊಲೀಸ್ ಠಾಣೆಯ ಮೊ. ಸಂ. ೦೮/೨೦೧೦ ಕಲಂ ೩೯೨ ಭಾ.ದ.ಸಂ. ಈ ಪ್ರಕರಣದಲ್ಲಿ ೩೪ ಗ್ರಾಂ ತೂಕದ ಮಾಂಗಲ್ಯ ಸರ.

ಮಾರಿಕುಪ್ಪಂ ಪೊಲೀಸ್ ಠಾಣೆಯ ಮೊ.ಸಂಖ್ಯೆ.೦೭/೨೦೧೦ ಕಲಂ ೩೭೯ ಐ.ಪಿ.ಸಿ, ಈ ಪ್ರಕರಣದಲ್ಲಿ ಬಿ.ಜಿ.ಎಂ.ಎಲ್ ಸಂಸ್ಥೆಗೆ ಸೇರಿದ ಒಂದು ದೊಡ್ಡ ಬಾಬಿನ್.

  • ರಾಬಟ್‌ಸನ್‌ಪೇಟೆ ವೃತ್ತ ಕಛೇರಿ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಮೊ.ಸಂ.೦೧/೨೦೧೦ ಕಲಂಮ ೩೭೯ ಐ.ಪಿ.ಸಿ, ಈ ಪ್ರಕರಣದಲ್ಲಿ ೫ ದ್ವಿಚಕ್ರ ವಾಹನಗಳು.

  • ಉರಿಗಾಂ ವೃತ್ತ ಕಛೇರಿ.

ಬೆಮಲ್ ನಗರ ಪೊಲೀಸ್ ಠಾಣೆಯ ಮೊ.ಸಂಖ್ಯೆ ೪೨/೨೦೦೯ ಕಲಂ ೪೫೪, ೩೮೦ ಐ.ಪಿ.ಸಿ, ಈ ಪ್ರಕರಣದಲ್ಲಿ ಒಂದು ಬೆಳ್ಳಿ ಲೋಟ.

ಬೆಮಲ್ ನಗರ ಪೊಲೀಸ್ ಠಾಣೆಯ ಮೊ.ಸಂಖ್ಯೆ ೪೬/೨೦೦೯ ಕಲಂ ೪೫೪, ೩೮೦ ಐ.ಪಿ.ಸಿ, ಈ ಪ್ರಕರಣದಲ್ಲಿ ಒಂದು ಜೊತೆ ಸಾದಾ ಬಂಗಾರದ ಓಲೆ.

ಬೆಮಲ್ ನಗರ ಪೊಲೀಸ್ ಠಾಣೆಯ ಮೊ.ಸಂಖ್ಯೆ ೭೭/೨೦೦೯ ಕಲಂ ೪೫೪, ೩೮೦ ಐ.ಪಿ.ಸಿ, ಈ ಪ್ರಕರಣದಲ್ಲಿ ಎರಡು ಗ್ಯಾಸ್ ಸಿಲಿಂಡರ್‍‌ಗಳು. 

  • ಬಂಗಾರಪೇಟೆ ವೃತ್ತ ಕಛೇರಿ.

ಬಂಗಾರಪೇಟೆ ಪೊಲೀಸ್ ಠಾಣೆಯ ಮೊ.ಸಂಖ್ಯೆ  ೧೨೦/೨೦೧೦ ಕಲಂ ೩೭೯ ಐ.ಪಿ.ಸಿ, ಈ ಪ್ರಕರಣದಲ್ಲಿ ಒಂದು ಹಸು.

ಬೇತಮಂಗಲ ಪೊಲೀಸ್ ಠಾಣೆಯ ಮೊ.ಸಂಖ್ಯೆ ೧೩೯/೨೦೦೯ ಕಲಂ ೩೭೯ ಐ.ಪಿ.ಸಿ, ಈ ಪ್ರಕರಣದಲ್ಲಿ ಒಂದು ಹುಂಡಿ ಹಾಗೂ ೭೫/- ರೂ ನಗದು ಹಣ.

ಬೇತಮಂಗಲ ಪೊಲೀಸ್ ಠಾಣೆಯ ಮೊ.ಸಂಖ್ಯೆ ೧೪೮/೨೦೦೯ ಕಲಂ ೪೫೭, ೩೮೦ ಐ.ಪಿ.ಸಿ, ಈ ಪ್ರಕರಣದಲ್ಲಿ ಒಂದು ಗ್ಯಾಸ್ ಸಿಲಿಂಡರ್‍.

           ಈ ಮೇಲ್ಕಂಡ ಎಲ್ಲಾ ಪ್ರಕರಣಗಳ ಮಾಲುಗಳ ಒಟ್ಟು ಬೆಲೆ ರೂ ೨,೨೫,೦೦೦/- ಗಳಾಗಿರುವುದನ್ನು ವಾರುಸುದಾರರಿಗೆ ಹಿಂತಿರುಗಿಸಲಾಗಿದೆ.


ಪತ್ರಿಕಾ ಪ್ರಕಟಣೆ

April 30, 2010
  •         ಶ್ರೀ. ಗುರುಪ್ರಸಾದ್, ಡಿ.ಜಿ.ಪಿ, ಸಿ.ಐ.ಡಿ ರವರ ನಿರ್ದೇಶನದಂತೆ ದಿನಾಂಕ: ೩೦-೦೪-೨೦೧೦ ರಂದು ಶ್ರೀ. ದೇವ ಜ್ಯೋತಿ ರೇ, ಪೊಲೀಸ್ ಅಧೀಕ್ಷಕರು, ಕೆ.ಜಿ.ಎಫ್ ರವರ ಅಧ್ಯಕ್ಷತೆಯಲ್ಲಿ, ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಗಡಿ ಭಾಗದ ಜಿಲ್ಲೆ ಹಾಗೂ ರಾಜ್ಯಗಳ ಪೊಲೀಸ್ ಅಧಿಕಾರಿಗಳ ಸಭೆಯನ್ನು ಕರೆದಿದ್ದು, ಈ ಸಭೆಗೆ ಕೋಲಾರ ಜಿಲ್ಲೆಯ ಶ್ರೀ. ಪಣೇಂದರ್‍ ಸಿಂಗ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೋಲಾರ ಜಿಲ್ಲೆ, ಡಿ.ಎಸ್.ಪಿ ರವರುಗಳಾದ ಕೋಲಾರ, ಆಂಡ್ರ ಪ್ರದೇಶದ ಪಲಮನೇರ್‍, ತಮುಳು ನಾಡಿನ ಹೊಸೂರ್‍ ಮತ್ತು ಕೆ.ಜಿ.ಎಫ್ ಸಿ.ಪಿ.ಐ ರವರುಗಳಾದ ಕೋಲಾರ, ಮಾಲೂರು, ಮುಳಬಾಗಿಲು, ಪಲಮನೇರ್‍, ಕುಪ್ಪಂ, ಕೃಷ್ಣಗಿರಿ, ಬಾಗಲೂರ್‍ ಹಾಗೂ ಕೆ.ಜಿ.ಎಫ್‌ನ ಚಾಂಪಿಯನ್‌ ರೀಫ್ಸ್, ರಾಬರ್ಟ್‌‌ಸನ್‌ಪೇಟೆ ಮತ್ತು ಬಂಗಾರಪೇಟೆ. ಪಿ.ಎಸ್.ಐ ರವರುಗಳಾದ ಮಾಸ್ತಿ, ಮಾಲೂರು, ಕೋಲಾರ ಗ್ರಾಮಾಂತರ, ಮುಳಬಾಗಿಲು, ತಮಿಳು ನಾಡಿಗೆ ಸೇರಿದ ಗುಡುಪಲ್ಲಿ, ಬೇರಿಕೆ, ವ್ಯಾಪನಪಲ್ಲಿ, ಆಂಡ್ರ ಪ್ರದೇಶಕ್ಕೆ ಸೇರಿದ ರಾಳ್ಳಬೂದಗೂರು, ರಾಮಕುಪ್ಪಂ, ವಿ.ಕೋಟ, ಕುಪ್ಪಂ ಹಾಗೂ ಕೆ.ಜಿ.ಎಫ್ ಜಿಲ್ಲೆಯ ಬಂಗಾರಪೇಟೆ, ಕಾಮಸಮುದ್ರಂ, ಮಾರಿಕುಪ್ಪಂ, ಆಂಡ್ರಸನ್‌ಪೇಟೆ ಮತ್ತು ಬೇತಮಂಗಲ ರವರುಗಳು ಸಭೆಗೆ ಸೇರಿದ್ದು, ಸಭೆಯನ್ನು ಉದ್ದೇಶಿಸಿ ಕೆ.ಜಿ.ಎಫ್ ವರಿಷ್ಟಾಧಿಕಾರಿಗಳಾದ ಶ್ರೀ. ದೇವ ಜ್ಯೋತಿ ರೇ ರವರು ಸಭೆಯ ಉದ್ದೇಶ ಮತ್ತು ಈಗಿನ ವಿಧ್ಯಾಮಾನುಗಳ ಬಗ್ಗೆ ತಿಳಿಸಿ, ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಒಟ್ಟಿಗೆ ಸೇರಿ, ಇಲಾಖಾ ಜ್ಞಾನವನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವುದರ ಹೊಂದಿಗೆ ಅಪರಾಧಿಗಳ ಮತ್ತು ಅಪರಾಧಗಳ ಬಗ್ಗೆಯೂ ಸಹ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ನಿರ್ದೇಶನವನ್ನು ನೀಡಿದರು. ನಂತರ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಠಾಣಾ/ವೃತ್ತ/ಉಪ ವಿಭಾಗಗಳ ವ್ಯಾಪ್ತಿಯಲ್ಲಿನ ಅಪರಾಧಗಳ ಬಗ್ಗೆ ಒಬ್ಬರಿಗೊಬ್ಬರು ಮಾಹಿತಿಗಳನ್ನು ವಿನಿಮಯ ಮಾಡಿಕೊಂಡರು. ದಾಖಲಾದ ಕೇಸುಗಳ ಬಗ್ಗೆ ಮಾಹಿತಿಯನ್ನು ಸಭೆಯ ಮುಂದಿಟ್ಟರು. ನಂತರ ಅಂತರ್‍ ರಾಜ್ಯ ಅಪರಾಧಿಗಳ ಬಗ್ಗೆ ಅನಾಮದೇಯ ಮೃತ ದೇಹಗಳ ಬಗ್ಗೆ, ಕಾಣೆಯಾಗಿರುವ ವ್ಯಕ್ತಿಗಳ ಬಗ್ಗೆ ಮಾಹಿತಿಗಳನ್ನು ಒಬ್ಬರಿಗೊಬ್ಬರು ವಿನಿಮಯಿಸಿಕೊಂಡರು.
  • ತಮ್ಮ ತಮ್ಮ ವ್ಯಾಪ್ತಿಯಲ್ಲಿ ಆರೋಪಿತರು ಪರಾರಿಯಾಗಿರುವುದು, ನ್ಯಾಯಾಲಯಗಳಿಗೆ ಹಾಜರಾಗದೇ ತಪ್ಪಿಸಿಕೊಮಡಿರುವ ಬಗ್ಗೆ, ಸಂಪೂರ್ಣ ವಿಳಾಸದೊಂದಿಗೆ ವಿನಿಮಯ ಮಾಡಿಕೊಂಡರು. ನಂತರ ದ್ವಿಚಕ್ರ ವಾಹನ ಕಳವು ಮಾಡುವವರ ಬಗ್ಗೆ ಮತ್ತು ಹೊಸ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ಬಿಡಿ ಭಾಗಗಳನ್ನಾಗಿಸಿ ಮಾರಾಟ ಮಾಡುವವರ ಬಗ್ಗೆ, ಕಳ್ಳಭಟ್ಟಿ ತಯಾರಿಸಿಸುವುದು ಮತ್ತು ಮಾರಾಟ ಮಾಡುವದು, ನಕಲಿ ಮದ್ಯದ ದಂದೆಯಲ್ಲಿ ತೊಡಗಿರುವವರ ಬಗ್ಗೆ, ಒಬ್ಬರಿಗೊಬ್ಬರು ಮಹಿತಿಗಳನ್ನು ವಿನಿಮಯ ಮಾಡಿಕೊಂಡರು. ನಂತರ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡು, ತುರ್ತು ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಮಾಹಿತಿಗಳನ್ನು ಕಳುಹಿಸುವ ಮತ್ತು ಸ್ವೀಕರಿಸುವ ಬಗ್ಗೆ, ನಿಸ್ತಂತು ತರಂಗಗಳ ಬಗ್ಗೆ ಮತ್ತು ಮಾಹಿತಿಗಳನ್ನು ಕಳುಹಿಸುವಾಗ ಸ್ವೀಕರಿಸುವ ವಿದಿವಿಧಾನಗಳ ಬಗ್ಗೆ ಚರ್ಚಿಸಿ ತಿಳಿದುಕೊಂಡಿರುತ್ತಾರೆ. ಅಂತಿಮವಾಗಿ ಚುನಾವಣಾ ಸಂದರ್ಭಗಳಲ್ಲಿ ನಕಲಿ ಮದ್ಯ ಸಾಗಾಣಿಕೆ ಮತ್ತು ಅಕ್ರಮ ಮದ್ಯ ಸಾಗಾಟಗಳ ಬಗ್ಗೆ ನಿಗಾ ವಹಿಸಲು ರಾಜ್ಯ ಗಡಿ ಭಾಗಗಳಲ್ಲಿ ಎರಡೂ ಕಡೆಯ ಸಿಬ್ಬಂದಿಯವರುಗಳನ್ನು ತಾತ್ಕಾಲಿಕ ಚೆಕ್ ಪೋಸ್ಟ್‌ಗಳನ್ನು ತೆರೆದು, ಚುನಾವಣಾ ಅಪರಾಧಗಳನ್ನು ತಡೆಯುವ ಬಗ್ಗೆಯೂ ಸಹ ಸಭೆಯಲ್ಲಿ ಚರ್ಚಿಸಲಾಯಿತು.

Follow

Get every new post delivered to your Inbox.