ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: – ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
-
ಉರಿಗಾಂ ಪೊಲಿಸ್ ಠಾಣೆಯಲ್ಲಿ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಉರಿಗಾಂನ ಎಂ.ಎಲ್. ಬ್ಲಾಕ್ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೫.೦೪.೨೦೦೯ ರಂದು ರಾತ್ರಿ ೧೦.೦೦ ಗಂಟೆ ಸಮದಯಲ್ಲಿ ರಾಜಿ ಮತ್ತು ರಾಜಿಯ ೪ ಜನ ಮಕ್ಕಳು (ವಿಳಾಸ ತಿಳಿಯಬೇಕಾಗಿರುತ್ತದೆ) ಅಕ್ರಮಕೂಟ ಕಟ್ಟಿಕೊಂಡು ಮನೋಹನ್ ಬಿನ್ ಲೇಟ್ ಹನುಮಾನ್, ಅಂಬೇಡ್ಕರ್ ನಗರ ವಾಸಿ ರವರ ತಂಗಿಯ ಗಂಡ ಸಂಪತ್ ರವರ ಬಳಿ ಜಗಳ ಮಾಡುತ್ತಿದ್ದು, ಜಗಳ ಬಿಡಿಸಲು ಹೋದಾಗ ರಾಜಿ ಮತ್ತು ೪ ಜನ ಮಕ್ಕಳು ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೪-೨೦೦೯ ರಂದು ಪೊಲೀಸ್ ಉಪಾಧೀಕ್ಷಕರು, ಮತ್ತು ಸಿಪಿಐ ಬಂಗಾರಪೇಟೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಸರ್ವರೆಡ್ಡಿ ಹಳ್ಳಿ ಗ್ರಾಮದ ಮುನಿರೆಡ್ಡಿ ರವರ ಕೋಳಿ ಪಾರಂನಲ್ಲಿ ಚುನಾವಣೆ ಸಂಭಂದ ಅಕ್ರಮವಾಗಿ ೧೯ ಪ್ರಾಸ್ಪಿಕ್ ಚೀಲಗಳಲ್ಲಿ ಒಟ್ಟು ೨೬೭೨ (೧೮೦ ಎಂಎಲ್ನ) ಬಾಸ್ ವಿಸ್ಕಿ ಬಾಟಲ್ಗಳನ್ನು ಇಟ್ಟಿದ್ದು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿರುತ್ತದೆ ಇದರ ಮೌಲ್ಯ ರೂ. ೧,೦೬,೮೮೦.೦೦
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ೦೧
ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ೨೦೦೯ ರ ಪ್ರಯುಕ್ತ ಈ ಕೆಳಕಂಡ ಮುಂಜಾಗ್ರತೆ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿಕೊಂಡಿರುತ್ತದೆ.
೧. ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ಕೇಸು. ಆ ಠಾಣೆಯ ರೌಡಿ ಆಸಾಮಿಯಾದ ನಾಗೇಂದ್ರ @ ನಾಗರಾಜು ಬಿನ್ ಕೆ.ನಲ್ಲಯ್ಯ ಎಂಬುವರನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.
೨. ಉರಿಗಾಂ ಪೊಲೀಸ್ ಠಾಣೆಯಲ್ಲಿ ಒಂದು ಕೇಸು. ಆ ಠಾಣೆಯ ರೌಡಿ ಆಸಾಮಿಯಾದ ಗೋಪಿ @ ಗೋಪಿನಾಥ್ ಎಂಬುವರನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.
೩. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಒಂದು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ ಬಿ.ಎಂ.ರಾಮಚಂದ್ರಪ್ಪ ಬಿನ್ ಮುನಿವೆಂಕಟಪ್ಪ, ನ್ಯೂ ಟೌನ್ ಬೇತಮಂಗಲ ಮತ್ತು ವಿಜಿ @ ವಿಜಯ ಕುಮಾರ್ ಬಿನ್ ಮುನಿವೆಂಕಟಪ್ಪ, ನ್ಯೂ ಟೌನ್, ಬೇತಮಂಗಲ ಎಂಬುವರುಗಳನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.
೪. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೂರು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ ಚಿನ್ನ @ ಚಿನ್ನಗಾಡು ಬಿನ್ ರಾಮಸ್ವಾಮಿ, ಕಾರಹಳ್ಳಿ, ಬಂಗಾರಪೇಟೆ, ಶಿವಕುಮಾರ್ ಬಿನ್ ಮಲ್ಲಪ್ಪ, ವಿವೇಕನಂದ ನಗರ, ಬಂಗಾರಪೇಟೆ ಮತ್ತು ಶ್ರೀನಿವಾಸ ಬಿನ್ ಬಿ.ಮುನಿಯಪ್ಪ, ಬೋವಿ ನಗರ, ಬಂಗಾರಪೇಟೆ ಎಂಬುವರುಗಳನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Posted by spkgf
Posted by spkgf
Posted by spkgf 

