ದಿನದ ಅಪರಾಧಗಳ ಪಕ್ಷಿನೋಟ ೧೬ನೇ ಏಪ್ರಿಲ್‌ ೨೦೦೯

April 16, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: – ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •            ಉರಿಗಾಂ ಪೊಲಿಸ್‌ ಠಾಣೆಯಲ್ಲಿ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಉರಿಗಾಂನ ಎಂ.ಎಲ್‌. ಬ್ಲಾಕ್‌ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೫.೦೪.೨೦೦೯ ರಂದು ರಾತ್ರಿ ೧೦.೦೦ ಗಂಟೆ ಸಮದಯಲ್ಲಿ ರಾಜಿ ಮತ್ತು ರಾಜಿಯ ೪ ಜನ ಮಕ್ಕಳು (ವಿಳಾಸ ತಿಳಿಯಬೇಕಾಗಿರುತ್ತದೆ)  ಅಕ್ರಮಕೂಟ ಕಟ್ಟಿಕೊಂಡು ಮನೋಹನ್‌ ಬಿನ್‌ ಲೇಟ್‌ ಹನುಮಾನ್‌, ಅಂಬೇಡ್ಕರ್‌ ನಗರ ವಾಸಿ ರವರ ತಂಗಿಯ ಗಂಡ ಸಂಪತ್‌ ರವರ ಬಳಿ ಜಗಳ ಮಾಡುತ್ತಿದ್ದು, ಜಗಳ ಬಿಡಿಸಲು ಹೋದಾಗ ರಾಜಿ ಮತ್ತು ೪ ಜನ ಮಕ್ಕಳು ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಹಲ್ಲೆ: ಇಲ್ಲ   

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: 

  •             ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೪-೨೦೦೯ ರಂದು  ಪೊಲೀಸ್‌ ಉಪಾಧೀಕ್ಷಕರು, ಮತ್ತು ಸಿಪಿಐ ಬಂಗಾರಪೇಟೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಸರ್ವರೆಡ್ಡಿ ಹಳ್ಳಿ ಗ್ರಾಮದ ಮುನಿರೆಡ್ಡಿ ರವರ ಕೋಳಿ ಪಾರಂನಲ್ಲಿ ಚುನಾವಣೆ ಸಂಭಂದ ಅಕ್ರಮವಾಗಿ ೧೯ ಪ್ರಾಸ್ಪಿಕ್‌ ಚೀಲಗಳಲ್ಲಿ ಒಟ್ಟು ೨೬೭೨ (೧೮೦ ಎಂಎಲ್‌ನ) ಬಾಸ್‌ ವಿಸ್ಕಿ ಬಾಟಲ್‌ಗಳನ್ನು ಇಟ್ಟಿದ್ದು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿರುತ್ತದೆ ಇದರ ಮೌಲ್ಯ ರೂ. ೧,೦೬,೮೮೦.೦೦  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ  

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ೦೧

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ೨೦೦೯ ರ ಪ್ರಯುಕ್ತ ಈ ಕೆಳಕಂಡ ಮುಂಜಾಗ್ರತೆ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿಕೊಂಡಿರುತ್ತದೆ.

೧. ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ಕೇಸು. ಆ ಠಾಣೆಯ ರೌಡಿ ಆಸಾಮಿಯಾದ ನಾಗೇಂದ್ರ @ ನಾಗರಾಜು ಬಿನ್ ಕೆ.ನಲ್ಲಯ್ಯ ಎಂಬುವರನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.

೨. ಉರಿಗಾಂ ಪೊಲೀಸ್ ಠಾಣೆಯಲ್ಲಿ ಒಂದು ಕೇಸು. ಆ ಠಾಣೆಯ ರೌಡಿ ಆಸಾಮಿಯಾದ ಗೋಪಿ @ ಗೋಪಿನಾಥ್ ಎಂಬುವರನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.

೩. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಒಂದು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ  ಬಿ.ಎಂ.ರಾಮಚಂದ್ರಪ್ಪ ಬಿನ್ ಮುನಿವೆಂಕಟಪ್ಪ, ನ್ಯೂ ಟೌನ್ ಬೇತಮಂಗಲ ಮತ್ತು ವಿಜಿ @ ವಿಜಯ ಕುಮಾರ್‍ ಬಿನ್ ಮುನಿವೆಂಕಟಪ್ಪ, ನ್ಯೂ ಟೌನ್, ಬೇತಮಂಗಲ  ಎಂಬುವರುಗಳನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.

೪. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೂರು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ ಚಿನ್ನ @ ಚಿನ್ನಗಾಡು ಬಿನ್ ರಾಮಸ್ವಾಮಿ, ಕಾರಹಳ್ಳಿ, ಬಂಗಾರಪೇಟೆ, ಶಿವಕುಮಾರ್‍ ಬಿನ್ ಮಲ್ಲಪ್ಪ, ವಿವೇಕನಂದ ನಗರ, ಬಂಗಾರಪೇಟೆ ಮತ್ತು ಶ್ರೀನಿವಾಸ ಬಿನ್ ಬಿ.ಮುನಿಯಪ್ಪ, ಬೋವಿ ನಗರ, ಬಂಗಾರಪೇಟೆ ಎಂಬುವರುಗಳನ್ನು  ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.

  ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೦ನೇ ಜನವರಿ ೨೦೦೯

February 10, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೦-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೬-೦೨-೨೦೦೯ ರಂದು ಮದ್ಯಾಹ್ನ ೧.೩೦ ಗಂಟೆಗೆ ಶ್ರೀಮತಿ ಮಾರ್ಗರೇಟ್ ಸೈಮನ್ ರಾಜು, ಮನೆ ಸಂಖ್ಯೆ ೮೭೦, ೬ನೇ ಕ್ರಾಸ್, ಆಂಗ್ಲೋ ಇಂಡಿಯನ್ ಕಾಲೋನಿ, ರಾಬರ್ಟ್‌‌ಸನ್‌ಪೇಟೆ ಎಂಬುವರು ತನ್ನ ಮಗಳ ಜೊತೆ ತಮಿಳು ನಾಡಿನ ವೇಳಾಂಕಣಿ ಚರ್ಚ್‌‌ಗೆ ಹೋಗಲು ಮನೆಗೆ ಬೀಗ ಹಾಕಿಕೊಂಡು ಹೋಗಿ ದಿನಾಂಕ: ೧೦-೦೨-೨೦೦೯ ರಂದು ಬೆಳಿಗ್ಗೆ ೮.೩೦ ಗಂಟೆಗೆ ಬಂದು ನೋಡಲಾಗಿ  ಯಾರೋ ಕಳ್ಳರು ಮನೆ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಬೇಡ್ ರೂಮ್‌ನಲ್ಲಿದ್ದ ಬೀರೂವನ್ನು ತೆಗೆದು ಅದರಲ್ಲಿದ್ದ ಸುಮರು ೨೪,೨೫೦/- ರೂ ಬೆಲೆ ಬಾಳಿವ ವಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

 ಹಲ್ಲೆ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೮-೦೨-೨೦೦೯ ರಂದು ರಾತ್ರಿ ಸುಮಾರು ೧೯೩೦ ಗಂಟೆ ಸಮಯದಲ್ಲಿ ಶ್ರೀ. ನಾಗರಾಜ ಬಿನ್ ವೆಂಕಟೇಶಪ್ಪ, ೨೫ ವರ್ಷ, ಮಾಗೊಂದಿ ಗ್ರಾಮ, ಬಂಗಾರಪೇಟೆ ತಾಲೂಕು ರವರ ಮನೆಯ ಮುಂದೆ ಇದ್ದ ಸಾರ್ವಜನಿಕ ನಲ್ಲಿಯನ್ನು ಕಿತ್ತು ಹಾಕಲು ಅದೇ ಗ್ರಾಮದ ವಾಸಿಗಳಾದ ಸಾಕಪ್ಪ, ಮುನಿಬೀಮಪ್ಪ, ವೆಂಕಟಮ್ಮ ಎಂಬುವರುಗಳು ಸೇರಿ ನಾಗರಾಜಪ್ಪರವನ್ನು ಕೆಟ್ಟ ಮಾತುಗಳಿಂದ ಬೈದು ಒಂದು ಬ್ಲೇಡಿನಿಂದ ಬಲಗೈಗೆ ಕೊಯ್ದಿರುತ್ತಾರೆ ಇತ್ಯಾದಿ.      

 ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಚುನಾವಣೆಯ ಪ್ರಯುಕ್ತ ತೆಗೆದುಕೊಂಡ ಮುಂಜಾಗ್ರತೆ ಕ್ರಮಗಳು

April 22, 2008

       ೨೦೦೮ ನೇ ಸಾಲಿನ ವಿಧಾನ ಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ಚುನಾವಣೆ ಸುಸೂತ್ರವಾಗಿ ನಡೆಯಲು ಮುನ್ನೆಚ್ಚರಿಕೆಯಾಗಿ ಜಿಲ್ಲೆಯಲ್ಲಿ ೪೪ ಮಂದಿ ರೌಡಿ ಆಸಾಮಿಗಳನ್ನು ಬಂಧಿಸಿ ಕ್ರಮ ಕೈಗೊಂಡಿರುತ್ತೆ.

     ಹಾಗೂ ೭ ಜನ ತಲೆ ಮರೆಸಿಕೊಂಡಿರುವ ವಾರೆಂಟ್ ಆಸಾಮಿಗಳನ್ನು ಸಹ ಬಂದಿಸಿ ಕ್ರಮ ಕೈಗೊಂಡಿರುತ್ತೆ.


ನಿರುಪಯುಕ್ತ ಪೊಲೀಸ್ ವಾಹನಗಳ ಟೆಂಡರ್‍ ಬಗ್ಗೆ

April 17, 2008

ದಿನಾಂಕ: ೩೦-೦೪-೨೦೦೮ ರಂದು ಬೆಳಿಗ್ಗೆ ೧೧-೦೦ ಗಂಟೆಗೆ ಕೆ.ಜಿ.ಎಫ್ ಪೊಲೀಸ್ ಘಟಕದಿಂದ

೧. ಸಿ.ಎ.ಜಿ. ೬೨೬೪ ಮೆಟಡೋರ್‍ ಎಫ್ ೩೦೫, ೧೯೮೪, ಡೀಸೆಲ್ ವಾಹನ

೨. ಸಿ.ಎ.ಜಿ. ೬೨೬೫ ಮೆಟಡೋರ್‍ ಎಫ್ ೩೦೫, ೧೯೮೪, ಡೀಸೆಲ್ ವಾಹನ

ನಿರುಪಯುಕ್ತಗೊಂಡಿರುವ ಈ ವಾಹನಗಳನ್ನು ಕೆ.ಜಿ.ಎಫ್ ಜಿಲ್ಲಾ ಸಶಸ್ತ್ರ ಮೀಡಲು ಪಡೆ, ಕಛೇರಿಯ ಆವರಣದಲ್ಲಿ ಹರಾಜು ಕಮ್ ಟೆಂಡರ್‍ ಮೂಲಕ ವಿಲೇವಾರಿ ಮಾಡಲಾಗುವುದು. ಈ ಸಂಬಂಧವಾಗಿ ಆಸಕ್ತಿಯುಳ್ಳವರು ಜಿಲ್ಲಾ ಪೊಲೀಸ್ ಕಛೇರಿ ಆಥವಾ ಆರ್‍.ಪಿ.ಐ. ಡಿ.ಎ.ಆರ್‍. ಕೆ.ಜಿ.ಎಫ್ ರವರ ಕಛೇರಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಈ ಮೂಲಕ ತಿಳಿಸಲಾಗಿದೆ.