ದಿನದ ಅಪರಾಧಗಳ ಪಕ್ಷಿನೋಟ ೨೭ನೇ ಏಪ್ರಿಲ್‌ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: – ಇಲ್ಗ         

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •        ಕಾಮಸಮುದ್ರಂ ಪೊಲೀಸ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೪-೨೦೦೯ ರಂದು ಸುಮಾರು ೧೯-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಚಿಕ್ಕಪುರ ಗ್ರಾಮದ ವಾಸಿಗಳಾದ ರತ್ನಮ್ಮ, ವೆಂಕಟೇಶಪ್ಪ ಮತ್ತು ಮುನಿಸಿದ್ದ ಎಂಬುವರುಗಳು ಅದೇ ಗ್ರಾಮದ ವಾಸಿ ಶ್ರೀಮತಿ. ಪದ್ಮಮ್ಮ ಕೋಂ ವೆಂಕಟಸ್ವಾಮಿ ಎಂಬುವರ  ಪತಿಯಾದ ವೆಂಕಟಸ್ವಾಮಿರೊಂದಿಗೆ ಹಣದ ವಿಚಾರದಲ್ಲಿ ಜಗಳ ಮಾಡಿ ಕೆಟ್ಟಮಾತುಗಳನ್ನು ಬೈದಿದ್ದು ಪದ್ಮಮ್ಮ ರವರು ಜಗಳ ಬಿಡಿಸಲು ಹೋದಾಗ ವೆಂಕಟಸ್ವಾಮಿ ರವರಿಗೆ ಒಂದು ಕಲ್ಲಿನಿಂದ ಕುತ್ತಿಗೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ. 
  •            ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀ.ಅಪ್ಪೇನ್‌ ಬಿನ್‌ ಲೇಟ್‌ ರಾಜ(೨೫), ಲೂರ್ದುನಗರ, ಆಂಡ್ರಸನ್‌ಪೇಟೆ ವಾಸಿ ಎಂಬುವರು ದಿನಾಂಕ: ೨೬.೦೪.೨೦೦೯ ರಂದು ಸಂಜೆ ೬.೩೦ ಗಂಟೆ ಸಮಯದಲ್ಲಿ ತನ್ನ ಆಟೋವನ್ನು ರಾಬರ್ಟ್‌‌ಸನ್‌ಪೇಟೆಯಿಂದ ಆಂಡ್ರಸನ್‌ಪೇಟೆ ಕಡೆಗೆ ಬರುತ್ತಿದ್ದು, ಪಿಲಿಪ್ಸ್‌ ಎಂಬುವರ ಮನೆಯ ಬಳಿ ಸುಸೈಪಾಳ್ಯಂ ಕಡೆಗೆ ಹೋಗುತ್ತಿದ್ದಾಗ ಅಪ್ಪನ್‌ @ ವೆಳ್ಫಪನ್‌ , ಭರತ್‌ @ ತೋಲ್‌ ಮತ್ತು ಮೂಖ, ಎಲ್ಲಾರು ಎಂ. ಬ್ಲಾಕ್‌, ಚಾಂಪಿಯನ್‌ ರೀಫ್ಸ್‌ ವಾಸಿಗಳು ಏಕೋದ್ದೇಶದಿಂದ ಅಪ್ಪನ್‌ನ್ನು ತಡೆದು ೮ ತಿಂಗಳ ಹಿಂದೆ ಚಾಂಪಿಯನ್‌ ರೀಫ್ಸ್‌ ಪೊಲಿಸ್‌ ಠಾಣೆಯಲ್ಲಿ ನಮ್ಮ ವಿರುದ್ದ ದೂರು ಹೇಳಿದ್ದಿಯಾ ಎಂತ ಜಗಳ ಮಾಡಿ ಕೆಟ್ಟಮಾತುಗಳನ್ನು ಬೈದು ಒಂದು ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತರೆ.

 ಇತರೆ: ಇಲ್ಲ

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •               ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆ ನಾಪತ್ತೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ೨ನೇ ಬ್ಲಾಕ್‌‌, ಆಂಡ್ರಸನ್‌ಪೇಟೆ, ಕೆ.ಜಿ.ಎಫ್‌ ನಲ್ಲಿ ಸಂಭವಿಸಿರುತ್ತದೆ. ಶ್ರೀ. ಜಾಕುಬ್‌ ರವಿ ಬಿನ್‌ ಅರುಳ್‌ದಾಸ್‌, ೨ನೇ ಬ್ಲಾಕ್‌ ವಾಸಿ ಎಂಬುವರು ದಿನಾಂಕ: ೨೦.೦೪.೨೦೦೯ ರಂದು ತನ್ಮ ಪತ್ನಿಯಾದ ಶ್ರೀಮತಿ. ಪುಷ್ಪಮೇರೆ ಎಂಬುವರನ್ನು ಮನೆಯಲ್ಲಿ ಬಿಟ್ಟು ಕುಪ್ಪಂ ಪಿ.ಇ.ಎಸ್‌. ಕಾಲೇಜಿಗೆ ಹೋಗಿ ತನ್ನ ತಾಯಿಯನ್ನು ಡಿಚಾರ್ಚ್‌ ಮಾಡಿಸಿಕೊಂಡು ಮನೆಗೆ ಬಂದು ನೋಡಲಾಗಿ ತನ್ನ ಪತ್ನಿ ಮನೆಯಲ್ಲಿ ಇಲ್ಲದ ಕಾರಣ ಅಕ್ಕಪಕ್ಕದವರನ್ನು ವಿಚಾರಿಸಿ, ಸಂಬಂಧಿಕರ ಮನೆಗಳಲ್ಲಿ ಇಲ್ಲದೆ ಕಾಣೆಯಾಗಿರುತ್ತಾರೆ.

 ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply