ದಿನದ ಅಪರಾಧಗಳ ಪಕ್ಷಿನೋಟ ೧೫ನೇ ಏಪ್ರಿಲ್ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೫-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: – ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೪-೦೪-೨೦೦೯ ರಂದು ೧೩೪೫ ಗಂಟೆ ಸಮಯದಲ್ಲಿ ಬಂಗಾರಪೇಟೆ ಟೌನ್, ಕುಪ್ಪಸ್ವಾಮಿ ಲೇಔಟ್ ವಾಸಿ ಶ್ರೀ ವಿಶ್ವನಾಥ್ ಎಂಬುವರು ಬಂಗಾರಪೇಟೆಯ ಎಸ್.ಎನ್.ರೆಸಾರ್ಟ್‌ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಎದರುಗಡೆಯಿಂದ ಟೆಂಪೋ ಸಂಖ್ಯೆ ಕೆಎ-೦೮-ಎ-೬೬೬ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಿಶ್ವನಾಥ್ ರವರಿಗೆ ಡಿಕ್ಕಿಹೊಡೆದ ಪ್ರಯುಕ್ತ ರಕ್ತಗಾಯವಾಗಿರುತ್ತದೆ.  

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ   

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೪-೨೦೦೯ ರಂದು ಬೆಳಿಗ್ಗೆ ೦೬೩೫ ಗಂಟೆಯಲ್ಲಿ ಶ್ರೀ ವಿ.ಸೋಮಶೇಖರ್‍, ಪಿ.ಎಸ್.ಐ., ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪಾರಂಡಹಳ್ಳಿ ಬಳಿಗೆ ತನ್ನ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ, ಕ್ಯಾಸಂಬಳ್ಳ ಕಡೆಯಿಂದ ಬರುತ್ತಿದ್ದ ಲಾರಿ ಸಂಖ್ಯೆ: ಟಿಎನ್‌-೨೩-ಬಿ-೨೭೯೯ ಮತ್ತು ಟೆಂಪೊ ಸಂಖ್ಯೆ: ಟಿಎನ್-೦೫-ಹೆಚ್‌-೦೪೬೮ ವಾಹನಗಳನ್ನು ನಿಲ್ಲಿಸಿ ಪರಿಶೀಲಿಸಲಾಗಿ ಲಾರಿಯಲ್ಲಿ ೧೨೦ ಅಕ್ಕಿಮೋಟೆಗಳು, ಟೆಂಪೋದಲ್ಲಿ ೮೫ ಅಕ್ಕಿಮೋಟೆಗಳನ್ನು ಯಾವುದೇ ಪರವಾನಿಗೆ ದಾಖಲಾತಿಗಳು ಇಲ್ಲದೆ ಅಕ್ರಮವಾಗಿ ತಮಿಳುನಾಡು ಕಡೆಯಿಂದ ಬಂಗಾರಪೇಟೆಗೆ ಸಾಗಿಸುತ್ತಿರುವುದಾಗಿ ತಿಳಿದು ಬಂದಿದ್ದರಿಂದ ಸದರಿ ಅಕ್ಕಿಯನ್ನು ವಾಹನಗಳ ಸಮೇತ ಅಮಾನತ್ತುಪಡಿಸಿಕೊಂಡು, ಟೆಂಪೋ ಚಾಲಕ ಸುಬ್ರಮಣಿ ಬಿನ್ ಚಿನ್ನನ್ನ, ವಯಸ್ಸು ೨೬ ವರ್ಷ, ವಾಸ: ಗಾಂಡ್ಲಪಲ್ಲಿ, ವಿ.ಕೋಟ, ಆಂಧ್ರಪ್ರದೇಶ ಮತ್ತು ಲಾರಿ ಚಾಲಕ ಏಳುಮಲೈ ಬಿನ್ ಕೃಷ್ಣನ್, ವಯಸ್ಸು ೪೬ ವರ್ಷ, ವಾಸ: ನಂ. ೬೪/೩, ವಸಂತಪುರಂ, ವೇಲೂರು, ತಮಿಳುನಾಡು ರವರುಗಳನ್ನು ದಸ್ತಗಿರಿ ಮಾಡಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
  • ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜನತಾ ಪ್ರತಿನಿಧಿ ಕಾಯಿದೆ, ೧೯೫೧ರ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೧೪-೦೪-೨೦೦೯ ರಂದು ಮದ್ಯಾಹ್ನ ೧೨೫೫ ಗಂಟೆಯಲ್ಲಿ ಎಂ.ಸಿ.ಸಿ. ತಂಡದ ನಾಯಕರಾದ ಶ್ರೀ ಎಂ.ಶ್ರೀಧರ್‍, ಕೆ.ಜಿ.ಎಫ್. ಮತ್ತು ಪಿ.ಎಸ್.ಐ. ಶ್ರೀ ಆರ್‍.ವೆಂಕಟೇಶ್ ರವರುಗಳು ಠಾಣಾ ಸರಹದ್ದು ಗಡ್ಡೂರು ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಸದರಿ ಗ್ರಾಮದಲ್ಲಿ ಒಂದು ಮೋಟಾರು ಸೈಕಲ್‌ ಸಂಖ್ಯೆ: ಕೆಎ-೫೩-ಇ-೯೪೩೮ ರಲ್ಲಿ ಯಾರೋ ಒಬ್ಬ ಕಾಂಗ್ರೆಸ್‌ ಕಾರ್ಯಕರ್ತ ಕಾಂಗ್ರೆಸ್‌ ಪಕ್ಷಕ್ಕೆ ಸಂಬಂಧಪಟ್ಟ ಶ್ರೀ ಕೆ.ಹೆಚ್‌.ಮುನಿಯಪ್ಪ ರವರ ಭಾವಚಿತ್ರವುಳ್ಳ ಭಿತ್ತಿ ಪತ್ರಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಹಂಚಿ ಪ್ರಚಾರ ಮಾಡುತ್ತಿದ್ದು ಮೇಲ್ಕಂಡವರನ್ನು ಕಂಡು ಓಡಿ ಹೋಗಿರುತ್ತಾನೆ.  ಸದರಿ ಮೋಟಾರ್‌ ಸೈಕಲ್‌ನಲ್ಲಿ ಪರೀಕ್ಷಿಸಲಾಗಿ ೧೫೦ ಭಿತ್ತಿಪತ್ರಗಳು ಇದ್ದು ಅವುಗಳನ್ನು ಹಂಚಲು ಹಾಗೂ ಪ್ರಚಾರ ಮಾಡಲು ಯಾವುದೇ ರೀತಿಯ ಅನುಮತಿ ಪಡೆಯದೆ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು ಹಾಗೂ ಮೋಟಾರ್‌ ಸೈಕಲ್‌ನ್ನು ಬೀಗ ಹಾಕಿಕೊಂಡು ಭಿತ್ತಿಪತ್ರಗಳನ್ನು ಹಂಚುತ್ತಿದ್ದ ಆರೋಪಿ ಪರಾರಿಯಾಗಿರುತ್ತಾನೆ.
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೪-೨೦೦೯ ರಂದು ರಾತ್ರಿ ೨೦೧೫ ಗಂಟೆಯಲ್ಲಿ ಸಿ.ಪಿ.ಐ. ಶ್ರೀ ಜಿ.ಕೇಶವಮೂರ್ತಿ, ಬಂಗಾರಪೇಟೆ ವೃತ್ತ ಮತ್ತು ಎಸ್.ಐ. ಶ್ರೀ ಸಿ.ಬಿ.ಶಿವಸ್ವಾಮಿ, ಬಂಗಾರಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಕಣಿಂಬೆಲೆ ಗ್ರಾಮದ ಮುನಿಸ್ವಾಮಿ ತೋಟದಲ್ಲಿ ದಾಳಿ ಮಾಡಲಾಗಿ, ಲೋಕಸಭಾ ಚುನಾವಣೆ ಸಂಬಂಧ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ೯೧೨ ಬಾಸ್‌ ವಿಸ್ಕಿ ಕ್ವಾರ್ಟರ್‌ ಬಾಟಲ್‌ಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಇದಕ್ಕೆ ಸಂಬಂಧಪಟ್ಟ ಆರೋಪಿಗಳು ಪರಾರಿಯಾಗಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ  

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತೆಯಾಗಿ ಪ್ರಕರಣ ದಾಖಲಾಗಿರುತ್ತದೆ. ಕಾಮಸಮುದ್ರಂ ಪೊಲೀಸ್ ಠಾಣೆ ಸರಹದ್ದು ಕೇತಗಾನಹಳ್ಳಿ ಗ್ರಾಮದಲ್ಲಿ ಶ್ರೀ ಸಿ.ವೆಂಕಟೇಶ್ ಬಿನ್ ತಾಯಪ್ಪ ಮತ್ತು ಇತರೆ ೫ ಜನರಿಗೂ ಹಾಗೂ ನಾಗರಾಜ ಬಿನ್ ಚಿನ್ನಪ್ಪ ಮತ್ತು ಇತರೆ ಇಬ್ಬರಿಗೂ ಜಾತಿ ವಿಚಾರದಲ್ಲಿ ಆಗಾಗ ಜಗಳಗಳು ಆಗುತ್ತಿದ್ದು, ಮುಂದೆಯೂ ಸಹ ಎರಡೂ ಗುಂಪುಗಳ ನಡುವೆ ಗಲಭೆಗಳಾಗಿ ಪ್ರಾಣಹಾನಿಯಾಗುವ ಸಂಭವಗಳಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply