ದಿನದ ಅಪರಾಧಗಳ ಪಕ್ಷಿನೋಟ ೧೭ನೇ ನವಂಬರ್‍ ೨೦೦೮

November 17, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ             

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ   

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •      ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್. ಬಿ.ಎಂ. ರಸ್ತೆ ಇಂಡಸ್ಟ್ರೀಯಲ್ ಎಸ್ಟೇಟ್ ಬಳಿ ಸಂಭವಿಸಿರುತ್ತದೆ. ದಿನಾಂಕ: ೧೬-೧೧-೨೦೦೮ ರಂದು ರಾತ್ರಿ ೮.೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಆಂಡ್ರಸನ್‌ಪೇಟೆಯ ಮಸ್ಕಂ ಎ ಬ್ಲಾಕ್, ಕೆ.ಹೆಚ್.ಬಿ ಕಾಲೋನಿ ವಾಸಿ ಶ್ರೀ ರಾಜಾ ಬಿನ್ ಅರುಳ್‌ದಾಸ್ ಎಂಬುವರು ರಾಬರ್ಟ್‌‌ಸನ್‌ಪೇಟೆ ಯಿಂದ ತನ್ನ ಮನೆಗೆ ಆಟೋದಲ್ಲಿ ಬರುತ್ತಿರುವಾಗ ಅದೇ ಆಟೋದಲ್ಲಿ ಚಾಮರಾಜಪೇಟೆ ವಾಸಿ ದೇವರಾಜ್ @ ಆಂಟೋಣಿ ಎಂಬುವನು ಬಂದಿದ್ದು ಇಬ್ಬರೂ ಬಿ.ಎಂ.ರಸ್ತೆಯಲ್ಲಿರುವ ಇಂಡಸ್ಟ್ರೀಯಲ್ ಎಸ್ಟೇಟ್ ಬಳಿ ಇಳಿದು ಮನೆಗೆ ಹೋಗುತ್ತಿದ್ದಾಗ ದೇವರಾಜ್ ಒಂದು ಕಲ್ಲಿನಿಂದ ರಾಜಾ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.

ಇತರೆ: ಇಲ್ಲ  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೫ನೇ ಅಕ್ಟೋಬರ್‍ ೨೦೦೮

November 15, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೫-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ             

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ಇಲ್ಲ

-ಸಾಧಾರಣ: ೦೧

  •     ಬಂಗಾರಪೇಠೆ ಪೊಲೀಸ್ ಠಾಣೆಯಲ್ಲಿ ಸಾದಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ಬೆಂಗನೂರು ಗೇಟ್‌ ಬಳಿ ಸಂಭವಿಸಿರುತ್ತದೆ. ದಿನಾಂಕ: ೧೪.೧೧.೨೦೦೮ ರಂದು ಮದ್ಯಾಹ್ನ ೩.೩೦ ಗಂಟೆ ಸಮಯದಲ್ಲಿ ೪೦೭ ಟೆಂಪೋ ಸಂಖ್ಯೆ ಕೆಎ-೨೩-೫೫೮೨ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಟೋ ರೀಕ್ಷಾ ಸಂಖ್ಯೆ ಕೆಎ-೦೬-೭೬೮೨ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವಾಸಿಮ್‌ ಪಾಷಾ, ಅಬ್ದುಲ್, ನದೀಮ್ ಸಾವಿತ್ರಮ್ಮ, ಹಾಗೂ ಮುನಿಯಮ್ಮ ಎಂಬುವರುಗಳೀಗೆ ರಕ್ತಗಾಯಗಳಾಗಿರುತ್ತವೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •       ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಚಿಂಚಾಂಡ್ಲಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೧.೧೧.೨೦೦೮ ರಾತ್ರಿ ೮.೩೦ ಗಂಟೆಯಲ್ಲಿ ಸವರಿಮುತ್ತು ಬಿನ್‌ ಲೇಟ್‌ ಅರಲಪ್ಪ(೫೫), ಚಿಂಚಾಂಡ್ಲಹಳ್ಳಿ ವಾಸಿ ರವರು ತನ್ನ ಮಗ ಮತ್ತು ಸೊಸೆಯ ಜೊತೆಯಲ್ಲಿ ಅಂಗಡಿ ವೆಂಕಟರಾಮಪ್ಪ ಎಂಬುವರ ಮನೆಯ ಬಳಿ ಹೋಗುತ್ತಿದ್ದಾಗ ಇದೇ ಗ್ರಾಮದ ವಾಸಿಗಳಾದ ರವಣಪ್ಪ, ವೆಂಕಟರಾಮ, ವೆಂಕಟೇಶಪ್ಪ, ರಾಯಪ್ಪ, ಲಾರೆನ್ಸ್‌ ಮತ್ತು ಇಸಾಕ್‌ರಾಜ್‌ ಎಂಬುವರುಗಳು ನಿವೇಶನ ವಿಚಾರದಲ್ಲಿ ಅಂತೋಣಿಯಪ್ಪನಿಗೆ ಸಹಾಯ ಮಾಡಿದ್ದರೆಂದು, ಅಕ್ರಮ ಕೂಟ ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಸವರಿಮುತ್ತು ಮತ್ತು ಮಗ ಹಾಗೂ ಸೊಸೆಯ ಮೇಲೆ ಹಲ್ಲೆ ಮಾಡಿರುತ್ತಾರೆ.

ಹಲ್ಲೆ: ೦೧

  •      ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ನಂ ೧೪, ಮೂರ್ತಿ ಗ್ಯಾಸ್‌ ಎದರು ಸಂಭವಿಸಿರುತ್ತದೆ. ದಿನಾಂಕ: ೧೪.೧೧.೨೦೦೮ ರಂದು ಮದ್ಯಾಹ್ನ ೧.೦೦ ಗಂಟೆಯಲ್ಲಿ ಪಳನಿ ಬಿನ್‌ ಕಣ್ಣನ್‌, ನಿವೃತ್ತ ಬಿ.ಜಿ.ಎಂ.ಎಲ್‌ ನೌಕರ ರವರ ಪಕ್ಕದ ಮನೆಯ ಪ್ರಾಂಕ್‌ ಎಂಬುವರು ಪಳನಿ ರವರಿಗೆ ಸೇರಿದ ಕಾಂಪೌಂಡ್ ನಲ್ಲಿ ಬೆಳೆದಿದ್ದ ಗಿಡಗಳನ್ನು ಕತ್ತರಿಸುತ್ತಿದ್ದು, ಇದನ್ನು ಪಳಣಿ ರವರ ಪತ್ನಿ ಚಂದ್ರಮ್ಮ ರವರು ಕೇಳಿದ್ದಕ್ಕೆ ಕೆಟ್ಟ ಮಾತುಗಳಿಂದ ಬೈದು ಒಂದು ರೀಪರ್‌ನಿಂದ ಹೊಡೆದು ಗಾಯವನ್ನುಂಟು ಮಾಡಿರುತ್ತಾನೆ.

ಇತರೆ: ಇಲ್ಲ  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಡ ೧೪ನೇ ನವಂಬರ್‍ ೨೦೦೮

November 14, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೪-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ             

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ    

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ       

ಹಲ್ಲೆ: ಇಲ್ಲ

ಇತರೆ: ಇಲ್ಲ  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೧೧-೨೦೦೮ ರಂದು ಕೆ.ಜಿ.ಎಫ್. ಉರಿಗಾಂನ ತೆಲುಗು ಲೈನ್ . ಮನೆ ಸಂಖ್ಯೆ ೩೧೧ರ ವಾಸಿ ಶ್ರೀ ಲಕ್ಷ್ಮಯ್ಯ (೩೯) ಎಂಬುವರು ಬೆಳಿಗ್ಗೆ ೦೭೦೦ ಗಂಟೆ ಸಮಯದಲ್ಲಿ ಬೆಮೆಲ್ ಎಸ್ಟೇಟ್ ಆಫೀಸ್‌ನಲ್ಲಿ ಟಿ.ಸಿ.ಎಲ್ ಕೆಲಸಕ್ಕೆಂದು ಬಂದಿದ್ದು, ಮದ್ಯಾಹ್ನ ಊಟ ಮುಗಿಸಿ ವಿಶ್ರಾಂತಿಗೆಂದು ಕ್ಯಾಂಟೀನ್ ಕೊಠಡಿಯಲ್ಲಿ ಮಲಗಿದ್ದು ಮದ್ಯಾಹ್ನ ೧೩೩೦ ಗಂಟೆಯಲ್ಲಿ ಮೃತಪಟ್ಟಿರುತ್ತಾನೆ.     

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೩ನೇ ನವಂಬರ್‍ ೨೦೦೮

November 13, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ             

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ    

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ       

ಹಲ್ಲೆ: ಇಲ್ಲ

ಇತರೆ: ಇಲ್ಲ  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹುಡುಗ ಕಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೧೧-೨೦೦೮ ರಂದು ಬೆಳಿಗ್ಗೆ ೯೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಮೂಗನಹಳ್ಳಿ ಗ್ರಾಮದ ವಾಸಿ ಶ್ರೀ ಕೃಷ್ಣಪ್ಪ ಬಿನ್ ಮುನಿಯಪ್ಪ ಎಂಬುವರ ಮಗನಾದ ಕೆ.ಗಿರೀಶ್ (೧೪), ೮ನೇ ತರಗತಿ ವಿದ್ಯಾರ್ಥಿ ಮತ್ತು ಅದೇ ಗ್ರಾಮದ ವಾಸಿಯಾದ ಮುನಿವೆಂಕಟಪ್ಪನವರ ಮಗನಾದ ಎಂ.ವೆಂಕಟಾಚಲಪತಿ (೧೫) ೯ನೇ ತರಗತಿ ವಿದ್ಯಾರ್ಥಿ ಎಂಬುವರು ತಮ್ಮ ಮನೆಗಳಿಂದ ಕಾಮಸಮುದ್ರಂನ ಫ್ರೌಢಶಾಲೆಗೆ ಹೋದವರು ಇದುವರೆವಿಗೂ ಮನೆಗೆ ವಾಪಸ್ಸು ಬಂದಿರುವುದಿಲ್ಲ.

ಕಾಣೆಯಾದ ಹುಡುಗರ ಚಹರೆ ಮತ್ತು ವಿವಿರ:

೧. ಹೆಸರು: ಕೆ.ಗಿರೀಶ್ ಬಿನ್ ಕೃಷ್ಣಪ್ಪ, ೧೪ ವರ್ಷ, ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ೪.೬ ಅಡಿ ಎತ್ತರ, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ.

೨. ಹೆಸರು: ಎಂ.ವೆಂಕಟಾಚಲಪತಿ ಬಿನ್ ಮುನಿವೆಂಕಟಪ್ಪ, ೧೫ ವರ್ಷ, ಕೋಲು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ೪.೬ ಅಡಿ ಎತ್ತರ ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೧೧-೨೦೦೮ ರಂದು ರಾತ್ರಿ ವೇಳೆ ಕೆ.ಜಿ.ಎಫ್. ಮಾರಿಕುಪ್ಪಂ ಗ್ರಾಮದ ವಾಸಿ ಶ್ರೀ ಚಂದ್ರಶೇಖರ್‍ ಆಚಾರಿ (೨೨) ಬಿನ್ ಕುಮಾರ್‍ ಆಚಾರಿ ಎಂಬುವರು ಯಾವುದೋ ಕಾರಣಕ್ಕೆ ಯಾವುದೋ ವಿಷ ಸೇವಿಸಿ ಮಾರಿಕುಪ್ಪಂ ಗ್ರಾಮ ಪಂಚಾಯ್ತಿ ಕಾರ್ಯಲಯದ ವರಂಡಾದಲ್ಲಿ ಆತ್ಮ ಹತ್ಯೆ ಮಾಡಿಕೊಂಡು ಸತ್ತಿರುತ್ತಾನೆ.    

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೨ನೇ ನವಂಬರ್‍ ೨೦೦೮

November 12, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: 

ಡಕಾಯತಿ: ಇಲ್ಲ      

ಸುಲಿಗೆ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲಿಸ್ ಠಾಣೆಯಲ್ಲಿ ಸುಲಿಗೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್. ರಾಬರ್ಟ್‌‌ಸನ್‌ಪೇಟೆಯ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದ ಬಳಿ ಸಂಭವಿಸಿರುತ್ತದೆ. ದಿನಾಂಕ ೧೧-೧೧-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ರಾಬರ್ಟ್‌‌ಸನ್‌ಪೇಟೆ, ಮಹಾರಜ್ ರಸ್ತೆ ಮನೆ ಸಂಖ್ಯೆ ೨೪ ರ ವಾಸಿ ಶ್ರೀಮತಿ ಮಿನಾಕ್ಷಿ ಕೋಂ ಲೇಟ್ ವೆಂಕಟಾಚಲಂ ಮತ್ತು ಆಕೆಯ ತಂಗಿಯವರೊಂದಿಗೆ ಮಾರ್ಕೆಟ್‌ಗೆ ಹೋಗಿ ಮನೆಗೆ ವಾಪಸ್ಸು ಮಹಾರಾಜ ರಸ್ತೆ ೪ನೇ ಕ್ರಾಸ್ ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದ ಬಳಿ ಬರುತ್ತಿರುವಾಗ ಯೋರೋ ಒಬ್ಬ ಆಸಾಮಿ ಮಿನಾಕ್ಷಿಯವರ ಕತ್ತಿನಲ್ಲಿರುವ ಬಂಗಾರದ ಡಾಲರ್‍ ಚೈನನ್ನು ಹಿಂಭಗದಿಂದ ಕಿತ್ತುಕೊಂಡು ಓಡಿ ಹೋಗಿರುತ್ತಾನೆ. ಚೈನಿನ ಬೆಲೆ ಸುಮಾರು ೨೫,೦೦೦/- ರೂಗಳಾಗಿರುತ್ತದೆ.

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ             

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ    

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •       ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಪಿಚ್ಚಗುಂಟ್ರಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೧.೧೧.೨೦೦೮ ರಂದು ಮದ್ಯಾಹ್ನ ೩.೦೦ ಗಂಟೆ ಸಮಯದಲ್ಲಿ ಇದೇ ಗ್ರಾಮದ ವಾಸಿಗಳಾದ ಮುನಿಯಪ್ಪ, ವೆಂಕಟೇಶಪ್ಪ, ಕಾಮಕ್ಷಮ್ಮ, ಪ್ರಮೀಳ ಲಕ್ಷ್ಮಮ ರತ್ನಮ್ಮ ಮತ್ತು ವೆಂಕಟಮ್ಮ ಎಂಬುವರುಗಳು ಅಕ್ರಮ ಕೂಟಕಟ್ಟಿಕೊಂಡು ಶ್ರೀ. ಚೌಡಪ್ಪ ಬಿನ್‌ ರಾಮಪ್ಪ ಎಂಬುರ ಮೇಲೆ ಜಗಳ ಮಾಡಿ ಹೊಡೆದು, ಪ್ರಾಣ ಬೆದರಿಕೆ ಹಾಕಿರುತ್ತಾರೆ. 

ಹಲ್ಲೆ: ಇಲ್ಲ

ಇತರೆ: ೦೨

  •    ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಪಿಚ್ಚಗುಂಟ್ರಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೧.೧೧.೨೦೦೮ ರಂದು ಮದ್ಯಾಹ್ನ ೩.೦೦ ಗಂಟೆ ಸಮಯದಲ್ಲಿ ಇದೇ ಗ್ರಾಮದ ವಾಸಿ ಶ್ರೀಮತಿ ವೆಂಕಟಮ್ಮ ಕೋಂ ಮುನಿಯಪ್ಪ ಎಂಬುವರು ಕುಡಿಯುವ ನೀರಿಗಾಗಿ ಒಂದು ಬಿಂದಿಗೆಯನ್ನು ತೆಗೆದುಕೊಂಡು ಹೋಗಿ ಸಾರ್ವಜನಿಕರ ನೀರಿನ ಟ್ಯಾಂಕ್ ಬಳಿ ನೀರನ್ನು ಬಿಡಲು ಕೇಳಿದಾಗ ಅದೇ ಗ್ರಾಮದ ವಾಸಿಗಳಾದ ವಿಮಲಮ್ಮ, ಸುಜಾತ ಮತ್ತು ಚೌಡಪ್ಪ ಎಂಬುವರುಗಳು ವೆಂಕಟಮ್ಮನನ್ನು ಕೆಟ್ಟ ಮಾತುಗಳಿಮದ ಬೈದು ಜಾತಿನಿಂದನೆ ಮಾಡಿ ಕೈಗಳಿಂದ ಹೊಡೆದು ರಕ್ತಗಯಪಡಿಸಿ   ಪ್ರಾಣ ಬೆದರಿಕೆ ಹಾಕಿರುತ್ತಾರೆ. 
  • ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಬಲಮಂದೆ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೧-೧೧-೨೦೦೮ ರಂದು ರಾತ್ರಿ ೧೧೦೦ ಗಂಟೆ ಸಮಯದಲ್ಲಿ ಬಲಮಂದೆ ಗ್ರಾಮದ ವಾಸಿ ಹೊನ್ನಮ್ಮ ಕೋಂ ನಾಯತಬಿಡ್ಡಪ್ಪ ಎಂಬುವರು ಮತ್ತು ಆಕೆಯ ಹೆಣ್ಣು ಮಕ್ಕಳು ಮನೆಯಲ್ಲಿ ಮಲಗಿರುವಾಗ ಅದೇ ಗ್ರಾಮದ ವಾಸಿಗಳಾದ ಪೂಲ ಉಸ್ಮಾನ್ ಸಾಬ್, ನಿಜಾಮ್, ಮುಬಾರಕ್, ಅಯೂಬ್ ಮತ್ತು ಚೊಟಸಾಬ್ ಎಂಬುವರುಗಳು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಮನೆಯೊಳಗೆ ಪ್ರವೇಶ ಮಾಡಿ ಮನೆಯ ಮೇಲ್ಚಾವಣಿಗೆ ಕಲ್ಲುಗಳನ್ನು ಬೀಸಿ ಶೀಟುಗಳು ಮತ್ತು ಹೆಂಚುಗಳನ್ನು ಹೊಡೆದು ನಾಶಪಡಿಸಿ ಹೊನ್ನಮ್ಮನವರನ್ನು ಅವಾಚ್ಯ ಮಾತುಗಳಿಂದ ಬೈದು ನಿಮ್ಮ ಮಗ ನಾಗರಾಜನನ್ನು ಸಾಯಿಸುವವರೆಗೂ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ   

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೧ನೇ ನವಂಬರ್‍ ೨೦೦೮

November 11, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೧-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೯-೧೧-೨೦೦೮ ರಂದು ೧೪೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್., ಮಾರಿಕುಪ್ಪಂ, ಕೊಡಿಗೇನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಸುಮಿತ್ರಮ್ಮ ಕೋಂ ಬಾಬು ಎಂಬಾಕೆಯು ಯಾರಲ್ಲೋ ಅಕ್ರಮ ಸಂಬಂಧ ಹೊಂದಿರುವುದಾಗಿ ಅನುಮಾನಗೊಂಡು ಆಕೆಯ ಗಂಡ ಬಾಬು ಎಂಬುವನು ಆಕೆಯನ್ನು ಕೊಡಗೇನಹಳ್ಳಿ ಗ್ರಾಮದ ಬಳಿ ಇರುವ ನೀರು ಕಾಲುವೆಯ ದಡದ ಪೊದೆಯಲ್ಲಿ ಒಂದು ಕಲ್ಲಿನಿಂದ ತಲೆಯ ಹಿಂಬಾಗ ಜಜ್ಜಿ ತೀವ್ರ ರಕ್ತಗಾಯ ಪಡಿಸಿ ಕೊಲೆ ಮಾಡಿ ಸಾಕ್ಷಾದಾರಗಳನ್ನು ಮರೆ ಮಾಚುವ ಸಲುವಾಗಿ ಪೊದೆಗಳ ಮದ್ಯ ಮೃತ ದೇಹವನ್ನು ಮರೆಮಚಿರುತ್ತಾನೆ.

ಡಕಾಯತಿ: ಇಲ್ಲ      

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ             

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ    

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ 

ಹಲ್ಲೆ: ೦೧

  •     ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಬ್ಯಾಡಬೆಲೆ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೦-೧೧-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಬ್ಯಾಡಬೆಲೆ ಗ್ರಾಮದ ವಾಸಿ ಚೌಡಪ್ಪ ಮತ್ತು ಸಾಕಪ್ಪ ಎಂಬುವರು ಗ್ರಾಮದ ಅಶ್ವಥಕಟ್ಟೆಯ ಮೇಲೆ ಕುಳಿತಿದ್ದಾಗ ಅದೇ ಗ್ರಾಮದ ವಾಸಿಗಳಾದ ಪುನಿತ್, ಮುನಿಸ್ವಾಮಿ ಮತ್ತು ಕೃಷ್ಣಪ್ಪ ಎಂಬುವರುಗಳು ಅಶ್ವಥಕಟ್ಟೆಯ ಬಳಿ ಬಂದು ಚೌಡಪ್ಪನ್ನು ಉದ್ದೇಶಪೂರಕವಾಗಿ ಕೆಟ್ಟಮಾತರುಗಳಿಂದ ಜಾತಿ ನಿಂದನೆ ಮಾಡಿ ಒಂದು ಕಲ್ಲಿನಿಂದ ಮೊಣಕಾಲಿನ ಮೇಲೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆ. 

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡಗಿ ಕಾಣೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೧೦-೨೦೦೮ ರಂದು ಕೆ.ಜಿ.ಎಫ್. ಆಂಡ್ರಸನ್‌ಪೇಟೆಯ ೨ನೇ ಬ್ಲಾಕ್ ವಾಸಿ ಶ್ರೀಮತಿ ರಮಾಭಾಯಿ ಕೋಂ ಸೌಂದರ್‌ರಾಜನ್ ಎಂಬುವರ ೧೬ ವರ್ಷದ ಹುಡಗಿಯನ್ನು ಕೆ.ಜಿ.ಎಫ್. ಆಂಡ್ರಸನ್‌ಪೇಟೆಯ ಸುಸೈಪಾಲ್ಯಾಂ ವಾಸಿ ಸೆಲ್ವಂ ಬಿನ್ ಸಿಗಾಮಣಿ ಎಂಬುವನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಇತ್ಯಾದಿ.  

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ   

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೦ನೇ ನವಂಬರ್‌ ೨೦೦೮

November 10, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೦-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ      

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •       ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಸೂಲಿಕುಂಟೆ ಗ್ರಾಮದ ಬಳಿ ಸಂಭವಿಸಿರುತ್ತದೆ. ದಿನಾಂಕ: ೦೬.೧೧.೨೦೦೮ ರಂದು ಸೂಲಿಕುಂಟೆ ಗ್ರಾಮದ ರಾಮಕೃಷ್ಣಪ್ಪ ಎಂಬುವರ ಜಮೀನಿನಲ್ಲಿರುವ ಬೆಸ್ಕಾಂ ವಿದ್ಯುತ್‌ ಕಂಬಗಳಲ್ಲಿನ ೭೨೦ ಮೀಟರ್‍ ೪ ಎ.ಸಿ.ಎಸ್‌.ಆರ್‍. ಅಲ್ಯೂಮಿನಿಯಂ ವೈರ್‌ಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು ಮೊತ್ತ ರೂ. ೧೫೦೦೦/-       

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ಇಲ್ಲ

-ಸಾಧಾರಣ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೯-೧೧-೨೦೦೮ ರಂದು ೭-೩೦ ಗಂಟೆ ಸಮಯದಲ್ಲಿ ಬೆಮೆಲ್‌ ನಗರ ಬಸ್‌ ಸ್ಟಾಪ್‌ ಬಳಿ ಶ್ರೀ. ಕುಮಾರ್‍, ಕೋರಮಂಡಲ, ಕೆ.ಜಿ.ಎಫ್‌ ವಾಸಿ ಎಂಬುವರು ತನ್ನ ವಾಹನ ಸಂಖ್ಯೆ ಕೆಎ-೦೮-ಹೆಚ್‌-೯೧೨೦ ವಿಕ್ಟರ್‌ನಲ್ಲಿ ಶ್ರೀಮತಿ. ಸುಗಂದಿ ಎಂಬುವರನ್ನು ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ನಿಯಂತ್ರಣ ತಪ್ಪ  ಕೆಳೆಗೆ ಬಿದ್ದು ರಕ್ತಗಾಯಗಳಾಗಿರುತ್ತವೆ.   

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ 

ಹಲ್ಲೆ: ೦೧

  •     ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ನಾರ್ಥಗಿಲ್ಬರ್ಟ್‌, ಕೆ.ಜಿ.ಎಫ್‌ ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೯.೧೧.೨೦೦೮ ರಂದು ರಾತ್ರಿ ೯.೦೦ ಗಂಟೆ ಸಮಯದಲ್ಲಿ ನೇಸ್‌ಕುಮಾರ್‍ ಬಿನ್‌ ಕರುಣೇಶನ್(೨೬), ನಂ ೧೪೩, ನಾರ್ಥಗಿಲ್ಬರ್ಟ್‌ ರವರು ತನ್ನ ಸ್ನೇಹಿತರೊಂದಿಗೆ ಆಂಡ್ರಸನ್‌ಪೇಟೆ ಕಡೆ ಹೋಗಲು ನಾರ್ಥ್‌‌ಗಿಲ್ಬರ್ಟ್‌ ಸೌದೆ ಮಂಡಿಯ ಬಳಿ ಹೋಗುತ್ತಿದ್ದಾಗ ಮಗಿ @ ಮಗೇಂದ್ರನ್‌ ಬಿನ್‌ ಭರತಲಿಂಗಂ, ನ್ಯೂ ವೆಸ್ಟ್‌ ಗಿಲ್ಬರ್ಟ್‌ ಮಾರಿಕುಪ್ಪಂ ಎಂಬುವರು ವಿನಾ ಕಾರಣ ಜಗಳ ಮಾಡಿ ಏಕಾಏಕಿಯಾಗಿ ಒಂದು ದೊಣ್ಣೆಯಿಂದ ತಲೆ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ 

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •     ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ದೇವಗಾನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಕುಮಾರಿ ಆಶಾ ಬಿನ್‌ ಮುನಿಯಪ್ಪ(೧೭) ದೇವಗಾನಹಳ್ಳಿ ಗ್ರಾಮ ವಾಸಿ ಎಂಬುವರಿಗೆ ಸುಮಾರು ದಿನಗಳಿಂದ ಹೊಟ್ಟೆ ನೋವು ಬರುತ್ತಿದ್ದು ವಾಸಿಯಾಗದ ಕಾರಣ ದಿನಾಂಕ: ೧೦.೧೧.೨೦೦೮ ರಂದು ಬೆಳಿಗ್ಗೆ ೬.೦೦ ಗಂಟೆಯಿಂದ ೭.೦೦ ಗಂಟೆಯ ಮದ್ಯೆ ತನ್ನ ವಾಸದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೮ನೇ ನವಂಬರ್‍ ೨೦೦೮

November 8, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೮-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ      

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ       

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ:  ೦೧

  •   ಕಾಂಸಮುದ್ರಂ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೧೧-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬೊಗ್ಗಲಹಳ್ಳಿ ಗ್ರಾಮದ ವಾಸಿ ಶ್ರೀ ಬೆಂಗಳೂರಪ್ಪ (೨೫) ಬಿನ್ ಚಿನ್ನಪ್ಪಯ್ಯ ಎಂಬುವರು ಟ್ರಾಕ್ಟರ್‍ ಸಂಖ್ಯೆ ಕೆಎ-೦೮-ಟಿ-೩೧೦೦, ಟ್ರಾಲಿ ಸಂಖ್ಯೆ ಎಪಿ-೦೪-ಟಿ-೪೦೩೦ ರಲ್ಲಿ ಕೃಷಿಗೆ ಗೊಬ್ಬರವನ್ನು ತುಂಬಿಸಿಕೊಂಡು ಅದರ ಮೇಲೆ ಕುಳಿತು ಬರುತ್ತಿರುವಾಗ ಟ್ರಾಕ್ಟರ್‍ ಚಾಲಕ ಭಕ್ತಲಾಯಾರು ನಿಂದ ಮುಸ್ಟ್ರಹಳ್ಳಿಗೆ ಹೋಗುವ ರಸ್ತೆಯಲ್ಲಿ ವಾಹನವನ್ನು ಅತಿವೇಗ ಮತ್ತು ಅಕಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಬೆಂಗಳೂರಪ್ಪ ಟ್ರಾಕ್ಟರ್‍ ನಿಂದ ಕೆಳಕ್ಕೆ ಬಿದ್ದು ಟ್ರಾಕ್ಟರ್‍ ಟ್ರಾಲಿಯ ಚಕ್ರಕ್ಕೆ ಸಿಕ್ಕಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ.

-ಸಾಧಾರಣ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೧೧-೨೦೦೮ ರಂದು ೧೫೧೫ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ದಾಸರಹೊಸಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಬಂಗಾರಪೇಟೆ ತಾಲೂಕು ದೊಡ್ರಹಳ್ಳಿ ಗ್ರಾಮದ ವಾಸಿ ಶ್ರೀ ನಾರಾಯಣಪ್ಪ ಬಿನ್ ಮುನಿಸ್ವಾಮಿ (೩೦) ಎಂಬುವರು ಕೆ.ಎಸ್.ಆರ್‍.ಟಿ.ಸಿ ಬಸ್ ಸಂಖ್ಯೆ ಕೆಎ-೦೭-ಎಫ್-೭೪೪ ಬಸ್ಸಿನ ಹಿಂದೆಯ ಬಾಗಿಲಿನಿಂದ ಬಸ್ ಹತ್ತಲು ಹೋಗಿದ್ದು, ಸದರಿ ಬಸ್ಸಿನ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪ್ರಯುಕ್ತ ನಾರಾಯಣಪ್ಪ ಬಸ್ಸಿನಿಂದ ಕೆಳಗೆ ಬಿದ್ದು ಬಸ್ಸಿನ ಹಿಂಭಾಗ ಚಕ್ರಗಳು ನಾರಾಯಣಪ್ಪನವರ ಎರಡೂ ಕಾಲುಗಳ ಮೇಲೆ ಹತ್ತಿ ರಕ್ತಗಾಯವಾಗಿರುತ್ತದೆ.     

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ 

ಹಲ್ಲೆ: ಇಲ್ಲ  

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ 

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೭ನೇ ನವಂಬರ್‍ ೨೦೦೮

November 7, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೭-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

ಉರಿಗಾಂ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್ ನ ಸ್ಕೂಲ್ ಆಫ್ ಮೈನ್ಸ್ ಕಾಲುದಾರಿಯಲ್ಲಿ ಸಂಭವಿಸಿರುತ್ತದೆ.  ಕೆ.ಜಿ.ಎಫ್ ಮಿಲ್‌ಬ್ಲಾಕ್ ವಾಸಿ ಪರಮೇಶ್‌ಬಾಬು @ ಬಾಬು  ಎಂಬುವರ ಪತ್ನಿ ಜಯಶೀಲಿ ಎಂಬುವರು ಬೇರೆಯವರೊಂದಿಗೆ ಅಕ್ರಮ ಸಂಬಂಧವಿಟ್ಟಿಕೊಂಡಿದನ್ನು ಅವರ ಗಂಡ ಬಾಬು ರವರು ಕೇಳಿದಕ್ಕೆ ದಿನಾಂಕ: ೦೬-೧೧-೨೦೦೮ ರಂದು ರಾತ್ರಿ ಆರೋಪಿಗಳಾದ ಜಯಶೀಲಿ, ಅಜಂತಾ, ಅರುಣಾಚಲ, ಸುರೇಶ್ ಬಾಬು ಮತ್ತು ಸವಿತಾ ಎಂಬುವರುಗಳು ಸೇರಿ ಪರಮೇಶ್‌ಬಾಬು ರವರನ್ನು ಸ್ಕೂಲ್‌ ಆಫ್ ಮೈನ್ಸ್‌ ಹಿಂಬಧಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುತ್ತಾರೆ.  

ಡಕಾಯತಿ: ಇಲ್ಲ      

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೦-೨೦೦೮ ರಂದು ರಾತ್ರಿ ಯಾರೋ ಕಳ್ಳರು ಬಂಗಾರಪೇಟೆ ತಾಲೂಕು ದಾಸರಹೊಸಹಳ್ಳಿ ಗ್ರಾಮ ವಾಸಿ ಶ್ರೀ ಡಿ.ಆರ್‍.ವೇಣುಗೋಪಾಲ್ ರವರ ತೋಟದ ಜಮೀನು ಸರ್ವೆ ನಂ. ೮೬ ರಲ್ಲಿನ ಬೋರ್‌ವೆಲ್‌ಗೆ ಅಳವಡಿಸಿರುವ ಸುಮಾರು ೧೫೦ ಮೀಟರ್‍ ನಷ್ಟು ಕೇಬಲ್ ವೈರು ಸುಮಾರು ೯,೦೦೦/- ರೂ ಬೆಲೆ ಬಾಳುವುದನ್ನು ಕತ್ತರಿಸಿ ಕಳುವು ಮಾಡಿಕೊಂಡು ಹೋಗಿರುತ್ತಾರೆ.     

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ    

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ 

ಹಲ್ಲೆ: ೦೨

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೧೧-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಆಂಡ್ರಸನ್‌ಪೇಟೆ ಹರಿಶ್ಚಂದ್ರ ರಸ್ತೆಯ ವಾಸಿ ಶ್ರೀ ರವಿ ಬಿನ್ ಚಂದ್ರಕೇಶ್ ಎಂಬುವರು ಆಂಡ್ರಸನ್‌ಪೇಟೆಯ ವೃತ್ತದ ಬಳಿ ಇರುವಗಾ ಪಂಡಾರಂ ಲೈನಿನಲ್ಲಿರುವ ಆಶ್ರಯ ಯೋಜನೆಯಲ್ಲಿ ಕಟ್ಟಿರುವ ಖಾಲಿ ಮನೆಗಳಲ್ಲಿ ಸಾಮಾನುಗಳು ಕಾಣೆಯಾಗುತ್ತಿದ್ದರಿಂದ ಇದನ್ನು ಆಶ್ರಯ ಮನೆಯಲ್ಲಿ ವಾಸವಾಗಿರುವ ಬಾಬು ಎಂಬಾತನನ್ನು ನೀನೆ ಕಳವುಮಾಡುತ್ತಿದ್ದಿಯ ಎಂದು ಕೇಳಿದಕ್ಕೆ ಬಾಬು ಎಂಬಾತನು ರವಿಯವರ ಜೊತೆ ಜಗಳವಾಡಿ ಒಂದು ಚಾಕುವಿನಿಂದ ತಲೆಗೆ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾನೆ.
  •      ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫-೧೧-೨೦೦೮ ರಂದು ರಾತ್ರಿ ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಲಿ ಗ್ರಾಮದ ವಾಸಿ ಶ್ರೀ ಪ್ರಶಾಂತ್ ಬಿನ್ ನರಸಿಂಹಯ್ಯ ಎಂಬಾತನು ಕ್ಯಾಸಂಬಳ್ಳಿಯ ವೆಂಕಟೇಶ್ವರ ವೈನ್ಸ್ ಸ್ಟೋರ್‌ನಲ್ಲಿ ಕ್ಯಾಷಿಯರ್‍ ಆಗಿ ಕೆಲಸಮಾಡುತ್ತಿದ್ದಾಗ ರಾತ್ರಿ ೨೧೩೦ ಗಂಟೆ ಸಮಯದಲ್ಲಿ ಅದೇ ಗ್ರಾಮದ ಅಮರ್‌ನಾಥ್ @ ಅಮರ್‍ ಎಂಬುವನು ವೈನ್ಸ್ ಸ್ಟೋರ್‌ಗೆ ಹೋಗಿ ೨ ಕ್ವಾರ್ಟ್‌‌ರ್‍ ಕೊಡೆಕ್ಸ್ ರಮ್ ತೆಗೆದುಕೊಂಡಿ ೧೨೦/- ರೂ ಪಾವತಿ ಮಾಡಿ ಹೋಗಿದ್ದು ಮತ್ತೆ ರಾತ್ರಿ ೨೨೩೦ ಗಂಟೆಗೆ ಪ್ರಶಾಂತ್ ರವರು ಅಂಗಡಿ ಮುಚ್ಚಿ ಮನೆಯಲ್ಲಿರುವಾಗ ಮನೆಗೆ ಬಂದು ಇನ್ನೂ ಎರಡು ಕ್ವಾರ್ಟ್‌‌ರ್‍ ಕೊಡು ಎಂದು ಜಗಳ ತೆಗೆದು ಕೆಟ್ಟ ಮಾತುಗಳಿಂದ ಬೈದು ಒಂದು ಕೋಲಿನಿಂದ ಎಡಕಿವಿಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ 

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೩ನೇ ನವಂಬರ್‍ ೨೦೦೮

November 3, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೩-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ      

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ    

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ    

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ 

ಹಲ್ಲೆ: ೦೨

  •    ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೨-೧೧-೨೦೦೮ ರಂದು ೧೨೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್, ಆಂಡ್ರಸನ್‌ಪೇಟೆ, ಸುಸೈಪಾಲ್ಯಂ ವಾಸಿಗಳಾದ ಜಾನ್ ಬಿನ್ ಜಿನ್ನಸವರಿ, ಆಲ್ಬರ್ಟ್ ಮತ್ತು ದಿನಕರನ್ ಎಂಬುವರುಗಳು ಹುಡಗಿ ವಿಚಾರದಲ್ಲಿ ಕೆ.ಜಿ.ಎಫ್ ರಾಬರ್ಟ್‌‌ಸನ್‌ಪೇಟೆ ಗೌತಮ್ ನಗರದ ವಾಸಿ ಶ್ರೀ ಅಶ್ವಿನ್ (೨೦) ಬಿನ್ ಮನೋಹರನ್ ಎಂಬುವರ ಮನೆಯ ಮುಂದೆ ಒಂದು ದ್ವಿಚಕ್ರವಾಹನದಲ್ಲಿ ಬಂದು ಅಶ್ವಿನ್ ರವರನ್ನು ಕುಳ್ಳರಿಸಿಕೊಂಡು ಆಂಡ್ರಸನ್‌ಪೇಟೆ ಮಸ್ಕಂ ಬಳಿ ಇರುವ ಕೆ.ಪಿ.ಟಿ.ಸಿ.ಎಲ್ ಪವರ್ ಸ್ಟೇಷನ್ ಬಳಿ ಕರೆದುಕೊಂಡು ಹೋಗಿ ಹೊಡೆದು ರಕ್ತಗಾಯಪಡಿಸಿ ಹಾಗೂ ಬೆಮೆಲ್ ನಗರ ಹೆಚ್.ಪಿ ನಗರಕ್ಕೆ ಅಶ್ವಿನ್ ರವರ ಮಾವನನ್ನು ಕರೆಸಿ ಕೈಗಳಿಂದ ಹೊಡೆದಿರುತ್ತಾರೆ.
  • ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೧-೧೦-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಉರಿಗಾಂ ನ್ಯೂ  ಎಲ್ಟ್ರಿಕ್ ಕಾಲೋನಿ ವಾಸಿಗಳಾದ ವಿಮಲ್ ಕುಮಾರ್‍ ಮತ್ತು ರವಿಂದ್ರ ಬಾಬು ಎಂಬುವರುಗಳು ರಾಬರ್ಟ್‌‌ನಸ್‌ಪೇಟೆಯ ಪೈಪ್ ಲೈನ್ ನಲ್ಲಿರುವ ಶ್ರೀಮತಿ ಸಿಂತ್ಯ ಮೇರಿ ಕೋಂ ಸತೀಸ್ ಕುಮಾರ್‍ ಎಂಬುವರ ತಂಗಿ ಮನೆಯ ಬಳಿ ಬಂದು ಸಾಂಸ್ಕಾರಿಕ ವಿಚಾರದಲ್ಲಿ ಏಕೋದ್ದೇಶದಿಂದ ಹಾಜರಿದ್ದ ಸಿಂತ್ಯ ಮೇರಿ ಮೇಲೆ ಜಗಳ ಮಾಡಿ ಕೇಳಲು ಬಂದ ಸಿಂತ್ಯ ಮೇರಿ ರವರ ತಂಗಿಗೆ ವಿಮಲ್ ಕುಮಾರ್‍ ರವರು ಒಂದು ಚಾಕುವಿನಿಂದ ಎಡಭಾಗದ ಕಣ್ಣಿನ ಮೇಲೆ ಹೊಡೆದು ರಕ್ತಗಾಯಪಡಿಸಿ ಮತ್ತು ರವಿಂದ್ರ ರವರು ಆಕೆಯ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ.  

ಇತರೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ 

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.