ದಿನದ ಅಪರಾಧಗಳ ಪಕ್ಷಿನೋಟ ೨೬ನೇ ನವಂಬರ್‍ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೧-೨೦೦೮ ರಂದು ೦೮೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ದಾಸರಹೊಸಹಳ್ಳಿ ಗ್ರಾಮದ ವಾಸಿ ಶ್ರೀಮತಿ ಜಯಮ್ಮ ಕೋಂ ಆನಂದಪ್ಪ ಎಂಬುವರು ಕೂಲಿ ಕೆಲಸಕ್ಕೆ ಹೋಗಿದ್ದು ಆಕೆಯ ಮಗಳು ಸಹಾ ೧೦೦೦ ಗಂಟೆಗೆ ಕಂಪ್ಯೂಟರ್‍ ತರಬೇತಿಗೆ ಬಂಗಾರಪೇಟಗೆ ಹೋಗಿದ್ದ ಸಮಯದಲ್ಲಿ ಯಾರೋ ಕಳ್ಳರು ಹಿಂಭಾಗಿಲಿನ ಕಿಟಕಿಯ ಕಬ್ಬಿಣದ ಸರಳುಗಳನ್ನು ಮುರಿದು ಒಳಗೆ ಪ್ರವೇಶಿಸಿ ಬೀರುವಿನ ಬಾಗಿಲನ್ನು ಕಿತ್ತು ಬೀರುವಿನಲ್ಲಿದ್ದ ಒಂದು ಬಂಗಾರದ ನಕ್ಲೆಸ್ ೧೨ ಗ್ರಾಂ, ಒಂದು ಜೊತೆ ಬಂಗಾರದ ಓಲೆ ೮ ಗ್ರಾಂ, ಬೆಳ್ಳಿಯ ವಡವೆಗಳು ಮತ್ತು ನಗದು ಹಣ ರೂ ೫೦೦/- ಗಳನ್ನು ಒಟ್ಟು ಬೆಲೆ ಸುಮಾರು ೨೨,೦೦೦/- ಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ             

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ      

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೧-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಉರಿಗಾಂ, ಎನ್.ಟಿ ಬ್ಲಾಕ್ ಮನೆ ಸಂಖ್ಯೆ ೪೩೮ ರ ವಾಸಿ ಶ್ರೀ ನವೀನ್ (೨೨) ಬಿನ್ ಸಿಗಾಮಣಿ ಮನೆಯಲ್ಲಿ ಊಟ ಮುಗಿಸಿಕೊಂಡು ಅದೇ ಕೇರಿಯ ವಾಸಿಗಳಾದ ಕಾರ್ತಿಕ್, ಜಾನ್, ವಿಜಯ್, ಚಿಟ್ಟು ಎಂಬುವರೊಂದಿಗೆ ಎನ್.ಡಿ ಬ್ಲಾಕ್ ೩ನೇ ಡಿವಿಷನ್ ಬಳಿ ಇರುವ ಖಾಲಿ ಮೈಧಾನದಲ್ಲಿ ಕ್ರಿಕೇಟ್ ಆಟ ಆಟುತ್ತಾ  ನವೀನ್ ಮತ್ತು ಮೇಲ್ಕಂಡವರೊಂದಿಗೆ ಮಾತಿಗೆ ಮಾತು ಬೆಳೆದು ಕ್ರಿಕೇಟ್ ಬ್ಯಾಟಿನಿಂದ ನವೀನ್ ಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.
  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಂಕ ೨೬-೧೧-೨೦೦೮ ರಂದು ಬಿ.ಜಿ.ಎಂ.ಎಲ್‌ನ ಸ್ವರ್ಣ ಭವನ್ ಕಛೇರಿಯಲ್ಲಿ ಬಿ.ಜಿ.ಎಂ.ಎಲ್ ನೌಕರರ ಸರ್ವೀಸ್ ಗ್ರಾಜೂಟಿ ಬಡ್ಡಿ ಹಣದ ವಿಚಾರದಲ್ಲಿ ಲೇಬರ್‍ ಕಮೀಷನರ್‍ ಕಾತಿಕೇಯನ್ ಮತ್ತು ನೌಕರರ ಮದ್ಯೆ ವಿಚಾರ ವಿನಿಮಯ ಮಾಡುತ್ತಿದ್ದಾಗ ಮಧ್ಯಾನ ೧-೩೦ ಗಂಟೆಯ ಸಮಯದಲ್ಲಿ ಬಿ.ಜಿ.ಎಂ.ಎಲ್ ಮಾಜಿ ನೌಕರರಾದ ಕನಕರಾಜ್, ಮೊನ್ನ ಚಂದ್ರಶೇಖರ್‍, ಸುಬ್ರಮಣಿ ಮತ್ತು ಜೇಮ್ಸ್ ಎಂಬುವರುಗಳು ಏಕ್ಕೋದ್ದೇಶದಿಂದ ಕೆ.ಜಿ.ಎಫ್, ರಾಬರ್ಟ್‌‌ಸನ್‌ಪೇಟೆಯ ೩ನೇ ಕ್ರಾಸ್ ವಾಸಿ ವೇಣುಗೋಪಾಲರವರೊಂದಿಗೆ ಜಗಳ ಕಾದು ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.     

ಇತರೆ: ಇಲ್ಲ  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ      

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply