ದಿನದ ಅಪರಾಧಗಳ ಪಕ್ಷಿನೋಟ ೧೮ನೇ ನವಂಬರ್‍ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ             

ವಾಹನ ಕಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೧೧-೨೦೦೮ ರಂದು ೧೬೩೦ ಗಂಟೆ ಸಮಯದಲ್ಲಿ ಕೋಲಾರ, ಹೋಟೇಲ್ ಬೀದಿ, ರಹಮತ್‌ನಗರದ ವಾಸಿ ಬಾಷ ಬಿನ್ ರಹೀಮ್ ಎಂಬುವನು ಬಂಗಾರಪೇಟೆ ಪಟ್ಟಣದ ಕಾರೋನೇಷನ್ ರಸ್ತೆಯಲ್ಲಿ ಟಿ.ವಿ.ಎಸ್ ಎಕ್ಸ್‌ಎಲ್ ನಂ. ಕೆಎ-೦೮-ಇ-೯೧೫೧ ವಾಹನವನ್ನು ಬಂಗಾರಪೇಟೆಯ ರೈಲ್ವೆ ನಿಲ್ದಾಣದಲ್ಲಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದವನ್ನು ಬಂಗಾರಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಹೆಚ್‌ಸಿ ೮೯ ಮತ್ತು ಪಿಸಿ ೨೪ ರವರುಗಳೂ ದಸ್ತಗಿರಿಮಾಡಿ ಠಾಣೆಗೆ ಕರೆತಂದಿರುತ್ತಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ಇಲ್ಲ

-ಸಾಧಾರಣ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೧೧-೨೦೦೮ ರಂದು ೧೬೦೦ ಗಂಟೆಯಲ್ಲಿ ಕೆ.ಜಿ.ಎಫ್. ಮೇಲ್ ಕೃಷ್ಣಾವರಂ ಗ್ರಾಮದ ವಾಸಿ ಶ್ರೀ ಮುರುಳೀಕೃಷ್ಣ ಎಂಬುವರ ಮಗ ನಿಶಾಂತ್ ಎಂಬುವನು ಎಂದಿನಂತೆ ಬೆಮೆಲ್ ನಗರದ ಲಿಟ್ಲ್ ಪ್ಲವರ್‍ ಸ್ಕೂಲಿಗೆ ಹೊಗಿ ಬಸ್ಸಿನಲ್ಲಿ ಮನೆಗೆ ಮೇಲ್ ಕೃಷ್ಣಾವರಂ ಹತ್ತಿರ ಇಳಿದು ಬರುತ್ತಿರುವಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ತನ್ನ ದ್ವಿಚಕ್ರ ವಾಹನದಲ್ಲಿ ಕೀಳ್ ಕೃಷ್ಣಾವರಂ ಕಡೆಯಿಂದ ಬೆಮೆಲ್ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿಶಾಂತ್ ರವರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ನಿಶಾಂತ್ ಗೆ ಎಡಗಾಲು ಪಾದದ ಮೇಲೆ ಮೊಣಕಾಲಿನ ಕೆಳಗಿನ ಭಾಗದಲ್ಲಿ ಏಟು ಬಿದ್ದು ಕಾಲು ಮುರಿದುಹೋಗಿರುತ್ತದೆ.   

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ     

ಇತರೆ: ಇಲ್ಲ  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹುಡಗಿ ಕಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೧೧-೨೦೦೮ ರಂದು ೧೫-೧೧-೨೦೦೮ ರಂದು ಕೆ.ಜಿ.ಎಫ್ ಕೋರಮಂಡಲ್, ನ್ಯೂಮಾಡೆಲ್ ಹೌಸ್, ಮನೆ ಸಂ. ೯೧ ರ ವಾಸಿ ಕುಮಾರಿ ಮಾರ್ಗೇಟ್ ರತ್ನಕುಮಾರಿ (೨೨) ಬಿನ್ ವಿಲ್ಸನ್ ಎಂಬುವರು ಬೆಳಿಗ್ಗೆ ೦೬೩೦ ಗಂಟೆಗೆ ಬೆಂಗಳೂರಿನ ಗ್ರೂಫ್-೪ ಕಂಪನಿಗೆ ಕೆಲಸಕ್ಕೆಂದು ಹೋದವಳು ಮನೆಗೆ ವಾಪಸ್ಸು ಬಂದಿರುವುದಿಲ್ಲ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply