ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೧೧-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ:
ಡಕಾಯತಿ: ಇಲ್ಲ
ಸುಲಿಗೆ: ೦೧
-
ರಾಬರ್ಟ್ಸನ್ಪೇಟೆ ಪೊಲಿಸ್ ಠಾಣೆಯಲ್ಲಿ ಸುಲಿಗೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್. ರಾಬರ್ಟ್ಸನ್ಪೇಟೆಯ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದ ಬಳಿ ಸಂಭವಿಸಿರುತ್ತದೆ. ದಿನಾಂಕ ೧೧-೧೧-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ರಾಬರ್ಟ್ಸನ್ಪೇಟೆ, ಮಹಾರಜ್ ರಸ್ತೆ ಮನೆ ಸಂಖ್ಯೆ ೨೪ ರ ವಾಸಿ ಶ್ರೀಮತಿ ಮಿನಾಕ್ಷಿ ಕೋಂ ಲೇಟ್ ವೆಂಕಟಾಚಲಂ ಮತ್ತು ಆಕೆಯ ತಂಗಿಯವರೊಂದಿಗೆ ಮಾರ್ಕೆಟ್ಗೆ ಹೋಗಿ ಮನೆಗೆ ವಾಪಸ್ಸು ಮಹಾರಾಜ ರಸ್ತೆ ೪ನೇ ಕ್ರಾಸ್ ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದ ಬಳಿ ಬರುತ್ತಿರುವಾಗ ಯೋರೋ ಒಬ್ಬ ಆಸಾಮಿ ಮಿನಾಕ್ಷಿಯವರ ಕತ್ತಿನಲ್ಲಿರುವ ಬಂಗಾರದ ಡಾಲರ್ ಚೈನನ್ನು ಹಿಂಭಗದಿಂದ ಕಿತ್ತುಕೊಂಡು ಓಡಿ ಹೋಗಿರುತ್ತಾನೆ. ಚೈನಿನ ಬೆಲೆ ಸುಮಾರು ೨೫,೦೦೦/- ರೂಗಳಾಗಿರುತ್ತದೆ.
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಪಿಚ್ಚಗುಂಟ್ರಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೧.೧೧.೨೦೦೮ ರಂದು ಮದ್ಯಾಹ್ನ ೩.೦೦ ಗಂಟೆ ಸಮಯದಲ್ಲಿ ಇದೇ ಗ್ರಾಮದ ವಾಸಿಗಳಾದ ಮುನಿಯಪ್ಪ, ವೆಂಕಟೇಶಪ್ಪ, ಕಾಮಕ್ಷಮ್ಮ, ಪ್ರಮೀಳ ಲಕ್ಷ್ಮಮ ರತ್ನಮ್ಮ ಮತ್ತು ವೆಂಕಟಮ್ಮ ಎಂಬುವರುಗಳು ಅಕ್ರಮ ಕೂಟಕಟ್ಟಿಕೊಂಡು ಶ್ರೀ. ಚೌಡಪ್ಪ ಬಿನ್ ರಾಮಪ್ಪ ಎಂಬುರ ಮೇಲೆ ಜಗಳ ಮಾಡಿ ಹೊಡೆದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಹಲ್ಲೆ: ಇಲ್ಲ
ಇತರೆ: ೦೨
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಪಿಚ್ಚಗುಂಟ್ರಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೧.೧೧.೨೦೦೮ ರಂದು ಮದ್ಯಾಹ್ನ ೩.೦೦ ಗಂಟೆ ಸಮಯದಲ್ಲಿ ಇದೇ ಗ್ರಾಮದ ವಾಸಿ ಶ್ರೀಮತಿ ವೆಂಕಟಮ್ಮ ಕೋಂ ಮುನಿಯಪ್ಪ ಎಂಬುವರು ಕುಡಿಯುವ ನೀರಿಗಾಗಿ ಒಂದು ಬಿಂದಿಗೆಯನ್ನು ತೆಗೆದುಕೊಂಡು ಹೋಗಿ ಸಾರ್ವಜನಿಕರ ನೀರಿನ ಟ್ಯಾಂಕ್ ಬಳಿ ನೀರನ್ನು ಬಿಡಲು ಕೇಳಿದಾಗ ಅದೇ ಗ್ರಾಮದ ವಾಸಿಗಳಾದ ವಿಮಲಮ್ಮ, ಸುಜಾತ ಮತ್ತು ಚೌಡಪ್ಪ ಎಂಬುವರುಗಳು ವೆಂಕಟಮ್ಮನನ್ನು ಕೆಟ್ಟ ಮಾತುಗಳಿಮದ ಬೈದು ಜಾತಿನಿಂದನೆ ಮಾಡಿ ಕೈಗಳಿಂದ ಹೊಡೆದು ರಕ್ತಗಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಬಲಮಂದೆ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೧-೧೧-೨೦೦೮ ರಂದು ರಾತ್ರಿ ೧೧೦೦ ಗಂಟೆ ಸಮಯದಲ್ಲಿ ಬಲಮಂದೆ ಗ್ರಾಮದ ವಾಸಿ ಹೊನ್ನಮ್ಮ ಕೋಂ ನಾಯತಬಿಡ್ಡಪ್ಪ ಎಂಬುವರು ಮತ್ತು ಆಕೆಯ ಹೆಣ್ಣು ಮಕ್ಕಳು ಮನೆಯಲ್ಲಿ ಮಲಗಿರುವಾಗ ಅದೇ ಗ್ರಾಮದ ವಾಸಿಗಳಾದ ಪೂಲ ಉಸ್ಮಾನ್ ಸಾಬ್, ನಿಜಾಮ್, ಮುಬಾರಕ್, ಅಯೂಬ್ ಮತ್ತು ಚೊಟಸಾಬ್ ಎಂಬುವರುಗಳು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಮನೆಯೊಳಗೆ ಪ್ರವೇಶ ಮಾಡಿ ಮನೆಯ ಮೇಲ್ಚಾವಣಿಗೆ ಕಲ್ಲುಗಳನ್ನು ಬೀಸಿ ಶೀಟುಗಳು ಮತ್ತು ಹೆಂಚುಗಳನ್ನು ಹೊಡೆದು ನಾಶಪಡಿಸಿ ಹೊನ್ನಮ್ಮನವರನ್ನು ಅವಾಚ್ಯ ಮಾತುಗಳಿಂದ ಬೈದು ನಿಮ್ಮ ಮಗ ನಾಗರಾಜನನ್ನು ಸಾಯಿಸುವವರೆಗೂ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


