ದಿನದ ಅಪರಾಧಗಳ ಪಕ್ಷಿನೋಟ ೩೧ನೇ ಅಕ್ಟೋಬರ್‍ ೨೦೦೮

October 31, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ      

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ       

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ 

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ 

ಹಲ್ಲೆ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೧೦-೨೦೦೮ ರಂದು ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕು ಬೈರಕೂರು ಗ್ರಾಮದ ವಾಸಿ ಶ್ರೀ ಗುರಪ್ಪ ಬಿನ್ ಕೋದಂಡರಾಮಯ್ಯ ಎಂಬುವರು ಕೆ.ಜಿ.ಎಫ್ ನ್ಯಾಯಾಲಯದಲ್ಲಿ ಕೇಸುಗಳು ಇದ್ದು ಕೇಸು ಮುಗಿಸಿಕೊಂಡು ಕೋತ್ತೂರಿನಲ್ಲಿರುವ ತಾಯಿಯವರನ್ನು ನೋಡಿಕೊಂಡು ವಾಪಸ್ಸು ಹೋಗುವಾಗ ತನ್ನ ಅಣ್ಣನಾದ ಗುರುಮೂರ್ತಿ ಎಂಬುವರು ಜಮೀನಿನ ವಿಚಾರದ ಜಿದ್ದಿನಿಂದ ಒಂದು ಕಬ್ಬಿಣದ ರಾಡ್‌ನಿಂದ ಗುರಪ್ಪನವರ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.  

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೩೦ನೇ ಅಕ್ಟೋಬರ್‍ ೨೦೦೮

October 30, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ      

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ       

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೦-೨೦೦೮ ರಂದು ರಾತ್ರಿ ೨೦೧೫ ಗಂಟೆ ಸಮಯದಲ್ಲಿ ಶ್ರೀ ಅಸ್ಗರ್‌ ಪಾಷ (೧೮) ಬಿನ್ ಜಾನ್‌ಪಾಷ, ಬಂಗಾರಪೇಟೆ ರವರು ಬಜಾಜ್‌ ಪ್ಲಾಟಿನಂ. ನಂ. ಕೆಎ-೫೧-ಕೆ-೫೩೮೬ರಲ್ಲಿ ಕೋಲಾರದ ಕಡೆ ಹುದುಕುಳ ಗೇಟ್‌ ಬಳಿ ಹೋಗುತ್ತಿದ್ದಾಗ ಎದುರುಗಡೆಯಿಂದ ಕ್ಯಾಂಟರ್‌ ನಂ. ಕೆಎ-೦೫-ಸಿ-೭೬೫೯ರ ಚಾಲಕ ಸದರಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೇಲ್ಕಂಡ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದರಿಂದ ಅಸ್ಗರ್‌ಪಾಷ ರವರಿಗೆ ರಕ್ತಗಾಯಗಳಾಗಿರುತ್ತದೆ.  ಕ್ಯಾಂಟರ್‌ನ್ನು ಸ್ಥಳದಲ್ಲಿ ನಿಲ್ಲಿಸದೆ ಅದರ ಚಾಲಕ ಹೊರಟುಹೋಗಿರುತ್ತಾನೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೦-೨೦೦೮ ರಂದು ರಾತ್ರಿ ಸುಮಾರು ೧೯೩೦ ಗಂಟೆ ಸಮಯದಲ್ಲಿ ಶ್ರೀ ಆನಂದ್ (೨೩) ಬಿನ್ ನಾರಾಯಣಸ್ವಾಮಿ, ಮಾದಮುತ್ತನಹಳ್ಳಿ ಗ್ರಾಮ ರವರು ತನ್ನ ಗ್ರಾಮದಲ್ಲಿರುವ ಸೌಂಡ್‌ ಸಿಸ್ಟಂ ಅಂಗಡಿ ಬಳಿ ದೀಪಾವಳಿ ಹಬ್ಬದ ಪ್ರಯುಕ್ತ ಪೂಜೆ ಮಾಡಿ ಪಟಾಕಿ ಹೊಡೆಯುತ್ತಿದ್ದಾಗ ಹುನ್ಕುಂದ ಗ್ರಾಮದ ವಾಸಿ ರವಿ ಬಿನ್ ಲಕ್ಷ್ಮಪ್ಪ ಎಂಬುವರು ತನ್ನ ದ್ವಿಚಕ್ರ ವಾಹನದಲ್ಲಿ ಬಂದಾಗ ಆಕಸ್ಮಿಕವಾಗಿ ಪಟಾಕಿಯು ವಾಹನಕ್ಕೆ ತಗುಲಿದಾಗ ಸದರಿ ರವಿಯು ಆನಂದ್ ರವರ ಬಳಿ ಜಗಳ ತೆಗೆದು ಮಂಜುನಾಥ ಹಾಗೂ ಇತರೆ ೧೨ ಜನರನ್ನು ಕರೆದುಕೊಂಡು ಅಕ್ರಮಕೂಟ ಕಟ್ಟಿಕೊಂಡು ಕೈಗಳಲ್ಲಿ ಮಾರಕಾಯುಧಗಳನ್ನು ಹಿಡಿದುಕೊಂಡು ಬಂದು ಆನಂದ್‌ ರವರ ಮೈಕ್‌ಸೆಟ್‌ ಐಟಂಗಳನ್ನು ಹೊಡೆದು ನಾಶಪಡಿಸಿ, ಕೈಗಳಿಂದ ಆನಂದ್‌ಗೆ ಹೊಡೆದಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೧೦-೨೦೦೮ ರಂದು ಬೆಳಿಗ್ಗೆ ೧೦೩೦ ಗಂಟೆಯಲ್ಲಿ ಪಿ.ಎಸ್.ಐ., ಕಾಮಸಮುದ್ರಂ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯವರೊಂದಿಗೆ ಕನಮನಹಳ್ಳಿ ಗ್ರಾಮದ ಬಳಿ ಇರುವ ಗೋಕುಂಟೆ ಬಳಿಗೆ ಹೋಗಿ ನೋಡಲಾಗಿ, ಕನಮನಹಳ್ಳಿ ಗ್ರಾಮದ ವಾಸಿ ಮುನಿಯಪ್ಪ (೩೫) ಬಿನ್ ಮುನಿಬೀರಪ್ಪ ಎಂಬುವರು ೨ ಪ್ಲಾಸ್ಟಿಕ್‌ ಕ್ಯಾನುಗಳಲ್ಲಿ ೩೦ ಲೀಟರ್‌ನಷ್ಟು ಕಳ್ಳಬಟ್ಟಿ ಸಾರಾಯಿ  ಮತ್ತು ಮತ್ತೊಂದು ಕ್ಯಾನಿನಲ್ಲಿ ಜಾಲಿ ಮರದ ಚಕ್ಕೆ ಇದ್ದು ಒಟ್ಟು ಬೆಲೆ ಸುಮಾರು ೧,೫೦೦/- ಹೊಂದಿದ್ದು, ಪೊಲೀಸರು ಸದರಿ ಮಾಲನ್ನು ಅಮಾನತ್ತುಪಡಿಸಿಕೊಂಡು ಕೇಸು ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೮ನೇ ಅಕ್ಟೋಬರ್‌ ೨೦೦೮

October 28, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ      

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ       

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ       

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ೦೨

  •      ಬೇತಮಂಗಳ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಎ. ಮೋತಕಪಲ್ಲಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಇದೇ ಗ್ರಾಮದ ವಾಸಿ ಶ್ರೀ. ದೊರೈಬಾಬು ಬಿನ್‌ ನಾಗಪ್ಪ ನಾಯ್ಡು ರವರು ದಿನಾಂಕ: ೨೭.೧೦.೨೦೦೮ ರಂದು ಸಂಜೆ ೪.೩೦ ಗಂಟೆ ಸಮಯದಲ್ಲಿ ತನ್ನ ಮನೆಯ ಬಳಿ ಹಸುಗಳಿಗೆ ಹುಲ್ಲನ್ನು ಹಾಕಿ ಬರುತ್ತಿರುವಾಗ ಅದೇ ಗ್ರಾಮದ ವಾಸಿಗಳಾದ ದಿವಾಕರ್‌ ನಾಯ್ಟು ಮತ್ತು ಸುಧಾಕರ ನಾಯ್ಡು ರವರುಗಳು ವಿನಾಕಾರಣ ಜಗಳ ಮಾಡಿ ಒಂದು ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
  •         ಬೇತಮಂಗಳ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಅಡಂಪಲ್ಲಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಶ್ರೀ. ಚಂದಪ್ರ ಬಿನ್‌ ಮುನಿಯಪ್ಪ ಎಂಬುವರು ದಿನಾಂಕ: ೨೭.೧೦.೨೦೦೮ ರಂದು ೧೯.೦೦ ಗಂಟೆ ಸಮಯದಲ್ಲಿ ತನ್ನ ಹೊಲದ ಮನೆ ಕಡೆ ಹೋಗಿ ಕಡಳೆ ಕಾಯಿ ಗಿಡಗಳನ್ನು ಮನೆಯಲ್ಲಿ ಹಾಕುತ್ತಿರುವಾಗ ಇದೇ ಗ್ರಾಮದ ವಾಸಿಗಳಾದ ರಾಮಪ್ಪ, ರಮೇಶ್‌, ಸುಬ್ರಮಣಿ ಮತ್ತು ಗುರಪ್ಪ ಎಂಬುವರುಗಳು ಎಕಾ ಏಕಿಯಾಗಿ ಬಂದು ಮಚ್ಚಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ     

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •       ಉರಿಗಾಂ ಪೊಲೀಸ್‌ ಹುಡುಗಿ ನಾಪತ್ತೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಎಂ.ಎಲ್‌. ಬ್ಲಾಕ್‌, ಉರಿಗಾಂ ನಲ್ಲಿ ಸಂಭವಿಸಿರುತ್ತದೆ. ಶ್ರೀ. ಕೆ. ಸುಂದರರಾಜನ್‌ ಬಿನ್‌ ಲೇಟ್‌ ಕಂದಸ್ವಾಮಿ ರವರ ಮಗಳಾದ ಕುಮಾರಿ ಮಣೆಮಗಲೆ ಎಂಬುವರು ಗೋಲ್ಡನ್‌ ಸಿಟಿ ಕಾಲೇಜ್‌ ಆಫ್‌ ಪ್ರೊಪೆಷನ್‌ ಸ್ಟಡೀಸ್‌ನಲ್ಲಿ ಡಿಪ್ಲಮೋ ಮಾಡುತ್ತಿದ್ದು, ದಿನಾಂಕ: ೨೪.೧೦.೨೦೦೮ ರಂದು ಒಡವೆಗಳನ್ನು ಧರಿಸಿಕೊಂಡು ಕಾಲೇಜಿಗೆ ಹೋಗಿ ಬರುವುದಾಗಿ ತಿಳಿಸಿ ಹೋದಳು ಮನೆಗೆ ವಾಪಸ್ಸು ಬಂದಿರುವುದಿಲ್ಲ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೭ನೇ ಅಕ್ಟೋಬರ್‍ ೨೦೦೮

October 27, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ      

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ       

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ      

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •     ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೧೦-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ದೇವೇರಹಳ್ಳಿ ಗ್ರಾಮದ ವಾಸಿ ಶ್ರೀ ವೆಂಕಟೇಶಪ್ಪ ಬಿನ್ ದೊಡ್ಡಪಾಪಯ್ಯ ಎಂಬುವರು ಹಬ್ಬಕ್ಕೆ ಸಾಮಾನು ತರಲೆಂದು ಬೇತಮಂಗಲಕ್ಕೆ ಸೈಕಲ್‌ನಲ್ಲಿ ಬಂದು ವಾಪಸ್ಸು ಊರಿಗೆ ಬರುತ್ತಿರುವಾಗ ರೂಪಶ್ರೀ ಚಿತ್ರ ಮಂಧಿರದ ಮುಂಭಾಗ ಕ್ಯಾಸಂಬಳ್ಳಿಯಿಂದ ಬೇತಮಂಗಲಕ್ಕೆ ಟ್ರಾಕ್ಟರ್‍ ಸಂಖ್ಯೆ ಕೆಎ-೦೮-ಟಿ-೩೧೨೦ ರ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ವೆಂಕಟೇಶಪ್ಪ ರವರು ಕೆಳಕ್ಕೆ ಬಿದ್ದು ತಲೆಗೆ ತೀವೃ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ.

-ಸಾಧಾರಣ: ಇಲ್ಲ       

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ಇಲ್ಲ    

ಇತರೆ: ಇಲ್ಲ

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ     

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ನೇ ಅಕ್ಟೋಬರ್‌ ೨೦೦೮

October 26, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ      

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •         ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಅದಂ ಕಾಂಪೌಂಡ್‌ ಮೌಜಾನ್‌ ರಸ್ತೆ, ೨ನೇ ಕ್ರಾಸ್‌, ಆಂಡ್ರಸನ್‌ಪೇಟೆ, ಕೆ.ಜಿ.ಎಫ್‌. ದಿನಾಂಕ: ೨೫/೨೬.೧೦.೨೦೦೮ ರಂದು ರಾತ್ರಿ ಶ್ರೀ. ಸಾಹೀಬ್‌ ಖಾನ್‌ ಬಿನ್‌ ಅಹ್ನದ್‌ಖಾನ್‌, ನಂ. ೧೧೯೩, ಅದಂ ಕಾಂಪೌಂಡ್‌ ರವರ ಬೀಗ ಹಾಕಿದ್ದ ಮನೆಯ ಬೀಗವನ್ನು ಮುರಿದು ಬೀರುವಿನಲ್ಲಿದ್ದ ಒಂದು ಚಿನ್ನದ ಕತ್ತಿನ ಚೈನು ಮತ್ತು ಎರಡು ಚಿನ್ನದ ಉಂಗುರಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು ಮೊತ್ತ ೨೪,೦೦೦/-ಗಳಾಗಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧

  •        ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಗರುಡಾದ್ರಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಶ್ರೀಮತಿ ಪವಿತ್ರ ಕೋಂ ವರದರಾಜ್‌(೨೦) ಗರುಡಾದ್ರಹಳ್ಳಿ ಗ್ರಾಮ ರವರು ಆಂದ್ರಪ್ರದೇಶದ ಕುಪ್ಪಂ ತಾಲ್ಲೂಕಿನ ಅಡವಿಬೂದುಗೂರು ಗ್ರಾಮದ ವಾಸಿ ವರದರಾಜ್‌ರೊಂದಿಗೆ ದಿನಾಂಕ: ೧೮.೦೪.೨೦೦೩ ಮದುವೆಯಾಗಿದ್ದು, ಮದುವೆ ಕಾಲದಲ್ಲಿ ೮೦ ಗ್ರಾಂ ಚಿನ್ನದ ಒಡವೆಗಳನ್ನು ವರದಕ್ಷಿಣೆಯಾಗಿ ನೀಡಿದ್ದು, ಪ್ರಸ್ತುತ ಇನ್ನು ಹೆಚ್ಚಿಗೆ ವರದಕ್ಷಿಣೆ ಬೇಕೆಂದು ಪವಿತ್ರರವರನ್ನು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿ, ಕಿರುಕುಳ ನೀಡಿ, ತವರು ಮನೆಗೆ ಕಳುಹಿಸಿ, ದಿನಾಂಕ: ೧೩.೧೦.೨೦೦೮ ರಂದು ಗರುಡಾದ್ರಿ ಹಳ್ಳಿಗೆ ಬಂದು ನನ್ನ ಜೊತೆ ಸಂಸಾರ ಮಾಡಬೇಕಾದರೆ ಒಂದು ಬೈಕು ಮತ್ತು ಒಂದು ಲಕ್ಷ ಹಣ ನೀಡಿದರೆ ಮನಗೆ ಬಾ ಇಲ್ಲವಾದಲ್ಲಿ ಹಾಗೇ ಬಂದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆಯಾಕಿರುತ್ತಾನೆ.

-ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ   

-ಸಾಧಾರಣ: ೦೨

  •         ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂದಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ-ಕಾವರನಹಳ್ಳಿ ಮುಖ್ಯ ರಸ್ತೆಯಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೫.೧೦.೨೦೦೮ ರಂದು ಸಂಜೆ ೫.೦೦ ಗಂಟೆ ಸಮದಯಲ್ಲಿ ಶ್ರಿ. ಜಿ. ಗೋವಿಂದಪ್ಪ ಬಿನ್‌ ಗಂಗಪ್ಪ, ಕಾವರನಹಳ್ಳಿ ಗ್ರಾಮದ ವಾಸಿ ರವರ ಮಗನಾದ ಸಿಂಹಾದ್ರಿ(೧೦) ಎಂಬುವರು ಬಂಗಾರಪೇಟೆ-ಕಾವರನಹಳ್ಳಿ ಮುಖ್ಯ ರಸ್ತೆ ತಮ್ಮನಬೋವಿ ಕುಂಟೆ ಬಳಿ ನಿಂತ್ತಿದ್ದಾಗ ಬರ್ಕತ್ತುಲ್ಲಾ ಬಿನ್‌ ಚೋಟುಸಾಬ್‌(೧೯) ಹುನ್ಕುಂದ ಗ್ರಾಮದ ವಾಸಿ ತನ್ನ ಹಿರೋ ಹೊಂಡ ವಾಹನ ಸಂಖ್ಯೆ ಕೆಎ-೦೮-ಇಎಫ್‌-೭೩೭೯ ಅನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಿಂಹಾದ್ರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಎಡತೊಡೆ ಮುರಿದು ಗಾಯವಾಗಿರುತ್ತದೆ. ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಕೇಶವ ಎಂಬಾತನು ಕೆಳಗೆ ಬಿದ್ದು ಗಾಯಗಳಾಗಿರುತ್ತದೆ.
  •            ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾದಾರಣ ಅಪಘಾತಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಉಮಾಶಂಕರ್‌ ಥೀಯೇಟರ್‌ ಬಳಿ ಸಂಭವಿಸಿರುತ್ತದೆ. ಶ್ರೀ. ಸೆಂದಿಲ್ ಕುಮಾರ್‍ ಬಿನ್‌ ಲೇಟ್‌ ಸೆಲ್ವಂ(೨೪), ಮುತ್ತು ಕಾಂಪೌಂಡ್‌, ೪ನೇ ಬ್ಲಾಕ್‌ ರಾಬರ್ಟ್‌‌ಸನ್‌ಪೇಟೆ ವಾಸಿ ರವರು ದಿನಾಂಕ: ೨೬.೧೦.೨೦೦೮ ರಂದು ಬೆಂಗಳೂರಿನಿಂದ ರಾತ್ರಿ ೨.೦೦ಗಂಟೆಗೆ ಬಂಗಾರಪೇಟೆ ಬಂದು ಅಲ್ಲಿಂದ ಪರಿಚಯವಿರುವ ಆಟೋದಲ್ಲಿ ಬಂಗಾರಪೇಟೆಯಿಂದ ಕೆ.ಜಿ.ಎಫ್‌ ಕಡೆಗೆ ಬರುತ್ತಿರುವಾಗ ಆಟೋ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೆಮೆಲ್‌ ನಗರದ ಉಮಾಶಂಕರ್‌ ಥಿಯೇಟರ್‌ ಬಳಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸೆಂದಿಲ್‌ ರವರಿಗೆ ರಕ್ತಗಾಯಗಳಾಗಿರುತ್ತದೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ೦೧

  •      ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಎನ್‌.ಟಿ. ಬ್ಲಾಕ್‌, ೨ನೇ ಡಿವಿಷನ್‌, ಉರಿಗಾಂ ಸಂಭವಿಸಿರುತ್ತದೆ. ಶ್ರೀ. ಸೌಂದರ್‌ ರಾಜ್‌ ಬಿನ್‌ ಮುನಿಸ್ವಾಮಿ (೪೫) ಎನ್‌.ಟಿ.ಬ್ಲಾಕ್‌ ವಾಸಿ ದಿನಾಂಕ: ೨೫.೧೦.೨೦೦೮ ರಂದು ರಾತ್ರಿ ೮.೦೦ ಗಂಟೆ ಸಮಯದಲ್ಲಿ ಕೆಸಲ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ತನ್ನ ಮನೆಯ ಪಕ್ಕದ ಕಳ್ಳಿ ಪೊದೆಯಲ್ಲಿ ತನ್ನ ಹೆಂಡತಿ ಜೊತೆಯಲ್ಲಿ ಅದೇ ಲೈನಿನ ವಾಸಿ ಪ್ರಭಾಕರ್‌ ಬಿನ್‌ ಜಾನ್‌ ಎಂಬುವರು ಮಾತನಾಡುತ್ತಿದ್ದು, ಅದನ್ನು ಕೇಳಲಾಗಿ ಪ್ರಭಾಕರ್‌ ಮತ್ತು ಅವರ ತಂದೆ ಜಾನ್‌ ರವರುಗಳು ಜಗಳ ಮಾಡಿ ಒಂದು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •       ಕಾಮಸಮುದ್ರಂ ಪೊಲೀಸ್‌ ಠಾಣೆಯ ಸಹರದ್ದಿನ ಮುರಳಿಚಾರಿ ಎಂಬುವರ ಜಮೀನಿನಲ್ಲಿ ದಿನಾಂಕ: ೨೬.೧೦.೨೦೦೮ ರಂದು ಬೆಳಿಗ್ಗೆ ೧೧.೦೦ ಗಂಟೆ ಸಮಯದಲ್ಲಿ ನಾರಾಯಣಚಾರಿ, ಬಾಬು, ನರೇಶ್‌, ಶ್ರೀನಿವಾಸ ಮತ್ತು ಚಂದ್ರ ಎಂಬುವರುಗಳು ಜಮೀನಿನ ಹುಣಸೆ ಮರದ ಕೆಳಗೆ ಕುಳಿತುಕೊಂಡು ಹಣವನ್ನು ಪಣವಾಗಿಟ್ಟು ಅಂದರ್‌-ಬಾಹರ್‌ ಜೂಜಾಡುತ್ತಿದ್ದವರನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮಕೈಗೊಳ್ಳಲಾಗಿದೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೪ನೇ ಅಕ್ಟೋಬರ್‍ ೨೦೦೮

October 24, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ      

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ   

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ೦೧

  •      ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಅಡಂಪಲ್ಲಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೩.೧೦.೨೦೦೮ ರಂದು ರಾತ್ರಿ ೭.೩೦ ಗಂಟೆ ಸಮಯದಲ್ಲಿ ಇದೇ ಗ್ರಾಮದ ವಾಸಿಗಳಾದ ಗಂಗಧರ ಬಿನ್‌ ವೆಂಕಟೇಶಪ್ಪ ರವರ ಕುರಿಗಳು ಸುಬ್ಬಗಾಡು ಎಂಬುವರ ಹೂ ಗಿಡಗಳನ್ನು ಮೇಯುತ್ತಿದ್ದ ವಿಷಯಕ್ಕೆ ಜಗಳ ಮಾಡಿಕೊಂಡು ಸುಬ್ರಮಣಿ, ಪ್ರಕಾಶ್‌ ರವರುಗಳು ಗಂಗಧರ ರವರನ್ನು ಹೊಡೆದು, ಒಂದು ಚಾಕುವಿನಿಂದ ಚುಚ್ಚಿ ರಕ್ತ ಗಾಯಪಡಿಸಿರುತ್ತಾರೆ.

ಇತರೆ: ೦೧

  •        ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಸಂಖ್ಯೆ -೩೮, ೪ನೇ ಬ್ಲಾಕ್, ಸಂಜಯಗಾಂಧಿನಗರ, ರಾಬಟ್‌ðಸನ್‌ಪೇಟೆ, ಕೆ.ಜಿ.ಎಫ್‌. ದಿನಾಂಕ: ೨೪.೧೦.೨೦೦೮ ರಂದು ಬೆಳಿಗ್ಗೆ ೧೧.೩೦ ಗಂಟೆ ಸಮಯದಲ್ಲಿ ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಸಿಬ್ಬಂದಿಗಳು ಹಗಲು ಗಸ್ತಿನಲ್ಲಿದ್ದಾಗ ನಾಸೀರ್‌ ಬಿನ್‌ ಅಬ್ದುಲ್‌ ಮಲೀಕ್‌(೩೮), ೪ನೇ ಬ್ಲಾಕ್‌ ಸಂಜಯಗಾಂಧಿ ನಗರ ವಾಸಿ ಒಂದು ಪ್ಲಾಸ್ಟಿಕ್‌ ಬಿಂದಿಗೆಯಲ್ಲಿ ೧೦ ಲೀಟರ್‌ ಕಳ್ಳಭಟ್ಟಿ ಸಾರಾಯಿಯನ್ನು ಇಟ್ಟುಕೊಂಡಿದ್ದನ್ನು ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.          

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೩ನೇ ಅಕ್ಟೋಬರ್‍ ೨೦೦೮

October 23, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ      

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •       ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕಾರನೇಷನ್‌ ಟೌನ್, ರಾಬರ್ಟ್‌‌ಸನ್‌ಪೇಟೆ ಯಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೨.೧೦.೨೦೦೮ ರಂದು ರಾತ್ರಿ ಆರ್‌. ರಾಜ ಬಿನ್‌ ಎನ್‌. ರಾಜು(೩೬), ರತ್ನಮ್ಮ ಟೀಚರ್‍ ಕಾಂಪೌಂಡ್, ಕಾರನೇಷನ್ ಟೌನ್, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ಎಂಬುವರ ಮನೆಯ ಪಕ್ಕದಲ್ಲಿರುವ ಕೊಠಡಿಯ ಬಾಗಿಲಿನ ಬೀಗವನ್ನು ಮುರಿದು ಬಂಗಾರದ ಒಡವೆಗಳು ರೇಷ್ಮೆ ಸೀರೆಗಳು ನಗದು ಹಣ ೧೦೦೦೦/-ಗಳು ಒಟ್ಟು ೧,೩೦,೦೦೦/-ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧

  •    ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಪೈಪ್‌ ಲೈನ್‌ , ರಾಬರ್ಟ್‌‌ಸನ್‌ಪೇಟೆ, ಶ್ರೀಮತಿ ಆರತಿ ಕೋಂ ಪೃತ್ವಿರಾಜ್ (೨೯) ಎನ್‌.ಟಿ ಬ್ಲಾಕ್‌, ಉರಿಗಾಂ ರವರು ೩ ವರ್ಷಗಳ ಹಿಂದೆ ಪೃತ್ವಿರಾಜ್ ಎಂಬುವರ ಜೊತೆ ಮದುವೆಯಾಗಿದ್ದು, ಒಂದು ಗಂಡು ಮಗು ಸಹ ಇದ್ದು, ನೀವು ಕೂರೂಪಿ ಬೇರೆ ಮದುವೆಯಾಗುವುದಾಗಿ ತಿಳಿಸಿ ಇಲ್ಲವಾದಲ್ಲಿ ಹಣ ತಂದು ಕೊಡು ಎಂತ ಹೇಳಿ ಪ್ರತಿ ದಿನ ಮಾನಸಿಕ ಹಿಂಸೆ ದೈಹಿಕ ಹಿಂಸೆ ನೀಡುತ್ತಿರುತ್ತಾರೆಂತ ದೂರು ನೀಡಿದ್ದು, ಅದರಂತೆ ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿರುತ್ತದೆ.

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ   

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ೦೧

  •       ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೧೦-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಮಾರಿಕುಪ್ಪಂ ಗ್ರಾಮದ ವಾಸಿ ಬಾಲಪ್ಪ ಮತ್ತು ಗೋಪಮ್ಮ ಎಂಬುವರುಗಳು ಅದೇ ಗ್ರಾಮದ ರಾಮಪ್ಪ ಬಿನ್ ಲೇಟ್ ಮುನಿವೆಂಕಟಪ್ಪ ಎಂಬುವರ ಪತ್ನಿ ಲಕ್ಷ್ಮಮ್ಮ ಎಂಬುವರ ಖಾಲಿ ನಿವೇಶನದಲ್ಲಿ ಬೆಳೆದು ನಿಂತಿದ್ದ ೨ ಪರಂಗಿ ಗಿಡಗಳನ್ನು ಕತ್ತರಿಸಿ ಇದನ್ನು ಲಕ್ಷ್ಮಮ್ಮ ಕೇಳಿದಕ್ಕೆ ಮಚ್ಚನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿ ಅದೇ ಮಚ್ಚಿನಿಂದ ಎಡಕಣ್ಣಿನ ಬಳಿ ತಾಕಿಸಿ ರಕ್ತಗಾಯಪಡಿಸಿರುತ್ತಾರೆ.

ಇತರೆ: ಇಲ್ಲ            

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •          ಬೆಮೆಲ್‌ ನಗರ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಮಾರುತಿ ನಗರ, ಬೆಮೆಲ್‌ ನಗರದಲ್ಲಿ ಸಂಭವಿಸಿರುತ್ತದೆ. ಶ್ರೀ. ಅಬ್ದುಲ್ ಸತ್ತಾರೆ ಬಿನ್‌ ಮಹ್ಮದ್ ಪೀರಾನ್, ಬೆಮೆಲ್ ನೌಕರ ರವರ ಮಗಳಾದ ಕುಮಾರಿ ನೌಶೀನ್ ತಾಜ್ ಬಿನ್‌ ಅಬ್ದುಲ್ ಸತ್ತಾರ್‌ ರವರು ದಿನಾಂಕ: ೨೧.೧೦.೨೦೦೮ ರಂದು ಮದ್ಯಾಹ್ನ ೩.೩೦ ಗಂಟೆಗೆ ಬೆಮೆಲ್ ನಗರದ ಎಲ್‌ ಡಬ್ಲ್ಯೂಎಫ್ ಸೆಂಟರ್‌ನಲ್ಲಿ ಕಂಪ್ಯೂಟರ್‌ ಕ್ಲಾಸ್‌ಗೆಂದು ಹೋದವಳು ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೧ನೇ ಅಕ್ಟೋಬರ್‍ ೨೦೦೮

October 21, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ೦೧

  •        ಉರಿಗಾಂ ಪೊಲೀಸ್ ಠಾಣೆಯಲ್ಲಿ ಡಕಾಯಿತಿಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಉರಿಗಾಂ ಬಿ.ಜಿ.ಎಂ.ಎಲ್ ಸ್ವರ್ಣ ಭವನ ಕಛೇರಿಯ ಆವರಣದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೧.೧೦.೨೦೦೮ ರಂದು ಬೆಳಗಿನ ಜಾವ ೨.೪೫ ಗಂಟೆ ಸಮಯದಲ್ಲಿ ಸುಮಾರು ೧೦ ಜನ ಡಕಾಯಿತರು ಮುಖಗಳಿಗೆ ಬಟ್ಟೆ ಕಟ್ಟಿಕೊಂಡು ಅಪಾಯಕರ ಆಯದಗಳನ್ನು ಹಿಡಿದುಕೊಂಡು ಸ್ವರ್ಣ ಭವನ ಕಾಂಪೌಂಡ್ ಒಳಗೆ ಪ್ರವೇಶ ಮಾಡಿ, ಕಛೇರಿಯ ರಕ್ಷಣ ಸಿಬ್ಬಂದಿಗಳಾದ ಶ್ರೀ. ವಿಲ್ಸ್‌ನ್‌ ಬಿನ್‌ ಡೇವೀಡ್‌(೩೬) ಮತ್ತು ದೊರೈರಾಜ್‌ ಗಳನ್ನು ಹಗ್ಗದಿಂದ ಕಟ್ಟಿಹಾಕಿ ದೊರೈರಾಜ್‌ ರವರ ಬಳಿ ಇದ್ದ ಮೊಬೈಲ್ ಮತ್ತು ಚಿನ್ನದ ಉಂಗರವನ್ನು ಕಿತ್ತುಕೊಂಡು ಹಾಗೂ ಗಂಧದ ಮರವನ್ನು ಕತ್ತರಿಸಿ ದರೋಡೆ ಮಾಡಿಕೊಂಡು ಹೋಗಿರುತ್ತಾರೆ.

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ        

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ   

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ಇಲ್ಲ

ಇತರೆ: ಇಲ್ಲ            

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೦ನೇ ಅಕ್ಟೋಬರ್‍ ೨೦೦೮

October 20, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ        

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ   

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್. ಪಾರಾಂಡಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೯-೧೦-೨೦೦೮ ರಂದು ೧೯೩೦  ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಪಾರಾಂಡಹಳ್ಳಿ ಗ್ರಾಮದ ವಾಸಿ ಶ್ರೀ ಕೃಷ್ಣಮೂರ್ತಿ (೨೬) ಎಂಬುವರು ತನ್ನ ಮನೆಗೆ ಬರುವಾಗ ಅದೇ ಗ್ರಾಮದ ಲಕ್ಷ್ಮಯ್ಯ ಬಿನ್ ಮುನಿಕೃಷ್ಣಪ್ಪ ಎಂಬುವರು ವಿನಾ ಕಾರಣ ಜಗಳ ಕಾದು ಒಂದು ಬೀರ್‍ ಬಾಟೆಲ್‌ನಿಂದ ಕೃಷ್ಣಮೂರ್ತಿ ರವರ ತಲೆಯ ಎಡ ಭಾಗಕ್ಕೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಇತರೆ: ಇಲ್ಲ            

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಹುಡಗಿ ಕಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೯-೨೦೦೮ ರಂದು ೦೮೩೦ ಗಂಟೆ ಸಮಯಕ್ಕೆ ಕೆ.ಜಿ.ಎಫ್., ಕೋರಮಂಡಲ್ ತೆಲಗು ಲೈನ್ ವಾಸಿ ಶ್ರೀಮತಿ ನಾರಾಯಣಮ್ಮ ಕೋಂ ಲೇಟ್ ಸುಬ್ಬಯ್ಯ ಎಂಬುವರ ಮಗಳು ಕುಮಾರಿ ಜ್ಯೋತಿ (೩೩) ಎಂಬುವರು ಬಂಗಾರಪೇಟೆಯಲ್ಲಿರುವ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋದವಳು ಇದುವರೆವಿಗೂ ಮನೆಗೆ ವಾಪಸ್ಸು ಬಂದಿರುವುದಿಲ್ಲ.         ‌‌

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೮ನೇ ಅಕ್ಟೋಬರ್‌ ೨೦೦೮

October 18, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೧೦-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ     

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ          

ವಾಹನ ಕಳ್ಳತನ: ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ        

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ   

-ಸಾಧಾರಣ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆಅಪಘಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ನಾಗಶೆಟ್ಟಿಹಳ್ಳಿ ಗ್ರಾಮದ ಬಳಿ ಸಂಭವಿಸಿರುತ್ತದೆ. ದಿನಾಂಕ ೧೩-೧೦-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ವಿಜಯನಗರ ವಾಸಿ ಶ್ರೀ ನಾರಾಯಣಸ್ವಾಮಿ ಎಂಬುವರು ತನ್ನ ಹೊರೋ ಹೋಂಡಾ ದ್ವಿಚಕ್ರ ವಾಹನ ಸಂಖ್ಯೆ ಎಂ-೦೭-ಕೆ-೬೪೭೭ ರಲ್ಲಿ ಈರಪ್ಪ ಎಂಬುವರನ್ನು ಕುಳ್ಳರಿಸಿಕೊಂಡು ಬಲ್ಲ ಗ್ರಾಮದಿಂದ ಬಂಗಾರಪೇಟೆಗೆ ಬರಲು ನಾಗಶೆಟ್ಟಿಹಳ್ಳಿ ಗ್ರಾಮದ ಬಳಿ ಬರುತ್ತಿರುವಾಗ ಕೆ.ಜಿ.ಎಫ್ ಕಡೆಯಿಂದ ಒಂದು ಹೀರೋ ಹೋಂಡಾ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾರಾಯಣಸ್ವಾಮಿರವರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ನಾರಾಯಣಸ್ವಾಮಿ ಮತ್ತು ಈರಪ್ಪರವರುಗಳಿಗೆ ರಕ್ತಗಾಯವಾಗಿರುತ್ತದೆ.     

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ     

ಹಲ್ಲೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ಟಿಪ್ಪುನಗರದಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೭-೧೦-೨೦೦೮ ರಂದು ೨.೨೦ ಗಂಟೆ ಸಮಯದಲ್ಲಿ ಬಂಗಾರಪೇಟೆ, ಟಿಪ್ಪುನಗರ ವಾಸಿಗಳಾದ ಸದ್ದಾಂ ಮತ್ತು ಅಸೀಫ್ ಉಲ್ಲಾ ಎಂಬುವರುಗಳು ಹಳೆಯ ವೈಷಮ್ಯದ ಹಿನ್ನಲೆಯಲ್ಲಿ ಶ್ರೀ ಸೈಯದ್‌ ನದೀಂ ಪಾಷಾ ಬಿನ್‌ ಸೈಯದ್ ಷಫಿವುಲ್ಲಾ(೨೮) ಎಂಬುವರೊಂದಿಗೆ ‌ಜಗಳ ಮಾಡಿ ಚಾಕುವಿನಿಂದ ನದೀಂ ಪಾಷಾ ರವರ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಇತರೆ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಅಕ್ಕಿ ಮೂಟೆಗಳಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೧೦-೨೦೦೮ ರಂದು ೧೬೪೫ ಗಂಟೆ ಸಮಯದಲ್ಲಿ ಪಿ.ಎಸ್.ಐ ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ನಿಖರವಾದ ಮಾಹಿತಿ ಮೇರೆಗೆ ಸೂರಾಜ್ ಮಲ್ ವೃತ್ತದಲ್ಲಿ ಕೆ.ಜಿ.ಎಫ್ ಮಾರಿಕುಪ್ಪಂ ವಾಸಿ ಕರುಣಕರಣ್ (ಟೆಂಪೋಚಾಲಕ) ಚಲಾಯಿಸುತ್ತಿದ್ದ ಮಿನಿ ಟಿಂಪೋ ಸಂಖ್ಯೆ ಕೆಎ-೦೮-೩೧೭೨ ಅನ್ನು ನಿಲ್ಲಿಸಿ ಪರಿಶೀಲಿಸಿದಾಗ ಇದಾಯತುಲ್ಲಾ ಎಂಬುವರ ಅದೇಶದಂತೆ ರಾಬರ್ಟ್‌‌ಸನ್‌ಪೇಟೆ ಗೀತಾ ರಸ್ತೆಯಲ್ಲಿರುವ ಅವರ ಸೂಪರ್‍ ಬಜಾರ್‍ ಅಂಗಡಿಯಿಂದ ರೂ ೨೦,೦೦೦/- ಬೆಲೆ ಬಾಳುವ ೩೭ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಯಾವುದೇ ದಾಖಲಾತಿಗಳಿಲ್ಲದೇ ಸಾಗಿಸುತ್ತಿದ್ದವರನ್ನು ದಸ್ತಿಗಿರಿಮಾಡಿರುತ್ತಾರೆ.          

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ        ‌‌

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.