ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೯-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ನಾರ್ಥ್ಟ್ಯಾಂಕ್ ಬ್ಲಾಕ್, ಉರಿಗಾಂನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೮.೦೯.೨೦೦೮ ರಂದು ರಾತ್ರಿ ಸುಮಾರು ೯.೦೦ ಗಂಟೆ ಸಯಮದಲ್ಲಿ ಶ್ರೀ. ಶ್ರೀಧರ್ ಬಿನ್ ಲೇಟ್ ಚೊಕ್ಕಲಿಂಗಂ(೩೭), ನಂ ೧೪೭, ನಾರ್ಥ್ಟ್ಯಾಂಕ್ ಬ್ಲಾಕ್ ವಾಸಿರವರ ಮಾವನಾದ ಜಯರಾಜ್ ಮನೆಯ ಮುಂದೆ ಜಯಕುಮಾರ್, ರವಿ, ಸೇಟ್, ದೊರೈ, ಶಂಕರ್, ಡ್ಯಾನಿಯಲ್, ರಾಜ ಮತ್ತು ವಿಕ್ಕಿ ಎಲ್ಲಾರೂ ಸ್ವಾಮಿನಾಥಪುರಂ ಮತ್ತು ಆಂದ್ರಲೈನ್ ವಾಸಿಗಳು ಅಕ್ರಮ ಗುಂಪು ಕಟ್ಟಿಕೊಂಡು ಉದ್ದೇಶಪೂರ್ವಕವಾಗಿ ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಜಯರಾಜ್ ರವರೊಂದಿಗೆ ಜಗಳತೆಗೆದು ಗಲಾಟೆ ಮಾಡುತ್ತಿದ್ದಾಗ ಶ್ರೀಧರ್ ಪತ್ನಿ ಶಕೀಲಾ ಮತ್ತು ಸತೀಶ್ ಕುಮಾರ್ ರವರುಗಳು ಜಗಳ ಬಿಡಿಸಲು ಹೋದಾಗ ಅವರುಗಳಿಗೆ ದೊಣ್ಣೆಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಹಲ್ಲೆ: ೦೨
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಮರಾಠ ಹೊಸಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಶ್ರೀ. ತಿಮ್ಮನ ಬೋವಿ ಬಿನ್ ಲೇಟ್ ಮುನಿಬೋವಿ(೬೫) ರವರು ದಿನಾಂಕ: ೨೮.೦೯.೨೦೦೮ ರಂದು ಮದ್ಯಾಹ್ನ ೨.೦೦ ಗಂಟೆಯ ಸಮಯದಲ್ಲಿ ಗ್ರಾಮದ ನಡಬಂಡೆಯಲ್ಲಿ ೪ ದಿನಗಳ ಹಿಂದೆ ಕಲ್ಲು ಹೊಡೆಯುವ ಸಾಮಾನುಗಳನ್ನು ಇಟ್ಟು ಬಂದಿದ್ದು, ಈ ದಿನ ಮದ್ಯಾಹ್ನ ಸಾಮಾನುಗಳನ್ನು ನೋಡಿಕೊಂಡು ಬರಲು ಹೋಗಿದ್ದಾಗ ಸದರಿ ಸ್ಥಳದಲ್ಲಿ ಸಾಮಾನುಗಳು ಇಲ್ಲದೆ ಇದ್ದು, ಅಲ್ಲಿಯೇ ಕುರಿಗಳನ್ನು ಮೇಯಿಸುತ್ತಿದ್ದ ಶವಣ ದೊಡ್ಡಪ್ಪ ರವರನ್ನು ಸಾಮಾನುಗಳ ಬಗ್ಗೆ ಕೇಳಲಾಗಿ ಆತ ಜಗಳಕ್ಕೆ ಬಂದು ಆತನ ಕೈಯಲ್ಲಿದ್ದ ಮೇಕೆಗಳಿಗೆ ಸೊಪ್ಪನ್ನು ಹೊಡೆಯುವ ಮಚ್ಚಿನಿಂದ ತಿಮ್ಮನನ ತಲೆಯ ಮೇಲೆ ಹೊಡೆದು ರಕ್ತ ಗಾಯಪಡಿಸಿರುತ್ತಾನೆ.
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೯-೨೦೦೮ ರಂದು ಬೆಳಿಗ್ಗೆ ೦೯-೧೫ ಗಂಟೆಯಲ್ಲಿ ಶ್ರೀ. ಬಾಬು ಬಿನ್ ಅಬ್ದಲ್ ಲತೀಫ್, ಇಂದಿರಾ ಆಶ್ರಯ ಬಡಾವಣೆ, ಬಂಗಾರಪೇಟೆ ವಾಸಿ ತನ್ನ ಮನೆಯಲ್ಲಿರುವಾಗ ಅದೇ ಬಡಾವಣೆ ವಾಸಿಗಳಾದ ಸರ್ದಾರ್, ಖಾಲೀಲ್, ಸೀರಾಜ್ ಮತ್ತು ಗುಲ್ನಾಜ್ ಎಂಬುವರುಗಳು ಉದ್ದೇಶ ಪೂರ್ವಕವಾಗಿ ಜಗಳ ಮಾಡಿ ಕೈಗಳಿಂದ ಮತ್ತು ದೊಣ್ಣೆಯಿಂದ ತಲೆಗೆ ರಕ್ತಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


