ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೮-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಸ/ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕೆ.ಜಿ.ಎಫ್ ಬೆಸ್ಕಾಂ, ಜೆ.ಇ ವಿ.ಚಲಪತಿ, ದಿನ್ನಹಳ್ಳಿ ಶಿಕ್ಷಕ ಮುರಳಿ, ತಟ್ನಹಳ್ಳಿ ಶಿಕ್ಷಕಕ ಗಣೇಶ್ ಮತ್ತು ದೊಡ್ಡಚಿನ್ನಹಳ್ಳಿ ಪಿ.ಹೆಸ್.ಸಿ ರಮೇಶ್ ಎಂಬುವರುಗಳು ಮೂಲತಃ ದಾಸರಿ ಜನಾಂಗಕ್ಕೆ ಸೇರಿದವರಾಗಿದ್ದು, ೧೯೮೦ನೇ ಸಾಲಿನಲ್ಲಿ ಮೇಲ್ಕಂಡವರು ದಿನಾಂಕ ೨೨-೦೪-೧೯೯೬, ೨೧-೦೩-೧೯೯೮ ಹಾಗೂ ೨೧-೦೩-೧೯೯೮ ರಲ್ಲಿ ಚಿನ್ನದಾಸರಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ಪಡೆದು ಸರ್ಕಾರಿ ಕೆಲಸಕ್ಕೆ ಸೇರಿದ್ದು, ಪರಿಶಿಷ್ಟ್ ಜಾತಿಯ ಅಭ್ಯರ್ಥಿಗಳಿಗೆ ದೊರಕಬಹುದಾದ ಸೌಲಭ್ಯಗಳನ್ನು ವಂಚಿಸಿ ಪಡೆದುಕೊಂಡಿರುತ್ತಾರೆ. ಹಾಗೂ ಒಬ್ಬ ಸಾರ್ವಜನಿಕ ಅಧಿಕಾರಿಗೆ ಸುಳ್ಳು ಮಾಹಿತಿ ನೀಡಿ ಸುಳ್ಳು ಜಾತಿಯ ಪ್ರಮಾಣ ಪತ್ರ ಪಡೆದು, ಅದು ಸುಳ್ಳು ಜಾತಿ ಪ್ರಮಾಣ ಪತ್ರವೆಂದು ಗೊತ್ತಿದ್ದರೂ ಸಹ ಅದನ್ನು ಸರ್ಕಾರಿ ಸೌಲಭ್ಯಕ್ಕಾಗಿ ದುರ್ಬಳಕೆ ಮಾಡಿ ಪರಿಶಿಷ್ಟ್ ಜಾತಿಯ ಅಭ್ಯರ್ಥಿಗಳಿಗೆ ವಂಚನೆ ಮಾಡಿರುತ್ತಾರೆ.
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ೦೨
-
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಸಂಶಯಸ್ಪದವಾಗಿ ಕಂಡ ವ್ಯಕ್ತಯ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೮-೨೦೦೮ ರಂದು ೦೩೦೦ ಗಂಟೆ ಸಮಯದಲ್ಲಿ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಪೇದೆ ೧೭೯ ಶ್ರೀ ಗೋಪಿ ಮತ್ತು ಸಿಪಿಸಿ ೪೮ ರವರು ವಿಶೇಷ ಗಸ್ತಿನಲ್ಲಿದ್ದಾಗ ರಾಬರ್ಟ್ಸನ್ಪೇಟೆ ಕೆ.ಯು.ಡಿ.ಎ ಕಛೇರಿ ಆವರಣದಲ್ಲಿ ರಾಬರ್ಟ್ಸನ್ಪೇಟೆ, ಸಂಜಯಗಾಂದಿನಗರ ವಾಸಿ ಕುಮಾರ್ ಬಿನ್ ಮುನಿಯಪ್ಪ ಎಂಬುವನು ಕತ್ತಲಲ್ಲಿ ಅವಿತುಕೊಂಡಿದ್ದು, ಗಸ್ತಿನಲ್ಲಿದ್ದವರನ್ನು ನೋಡಿ ಸ್ಥಳದಿಂದ ಓಡಲು ಯತ್ನಿಸಿದಾಗ ಸಂಶಯದಿಂದ ಹಿಡಿದುಕೊಂಡು ಪ್ರಶ್ನಿಸಲಾಗಿ ಆ ಸ್ಥಳದಲ್ಲಿ ಆವೇಳೆಯಲ್ಲಿ ಇರುವುದರ ಬಗ್ಗೆ ಸರಿಯಾದ ಸಮಜಾಯಿಷಿ ನೀಡಿರುವುದಿಲ್ಲ. ಆದ್ದರಿಂದ ಆರೋಪಿ ಕಳ್ಳತನ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿರುತ್ತಾನೆಂದು ಸಂಶಯದ ಮೇರೆಗೆ ಆವನಿಂದ ಉಂಟಾಗುವ ಅಪರಾಧವನ್ನು ತಪ್ಪಿಸುವ ಸಲುವಾಗಿ ಠಾಣೆಗೆ ಹಾಜರ್ ಪಡಿಸಿರುತ್ತಾರೆ.
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಸಂಬಂಧ ಪ್ರಕರಣದ ದಾಖಲಾಗಿರುತ್ತದೆ. ದಿನಾಂಕ ೨೩-೦೮-೨೦೦೮ ರಂದು ೧೨೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಸರ್ವೇ ಇಲಾಖೆ, ಸೂಪರ್ ವೈಸರ್ ಶ್ರೀ ಬಿ.ನಾಗರಜ್ ಮತ್ತು ಅವರ ಸಿಬ್ಬಂದಿಯವರು ಮಾನ್ಯ ನ್ಯಾಯಾಲಯದ ಅದೇಶದ ಮೇರೆಗೆ ದೇವಗಾನಹಳ್ಳಿ ಸರ್ವೇ ನಂ. ೪೪/೪ಎ ಮತ್ತು ೪೪/೪ಬಿ ರ ಜಮೀನನ್ನು ಅಳತೆ ಮಾಡುತ್ತಿರುವಾಗ ದೇವಗಾನಹಳ್ಳಿ ವಾಸಿ ಗೋವಿಂದ ಎಂಬುವನು ಸದರಿ ಸ್ಥಳಕ್ಕೆ ಬಂದು ಅಳತೆ ಮಾಡದಂತೆ ಅಡ್ಡಿ ಪಡಿಸಿ ಸರ್ವೇ ಉಪಕರಣಗಳಾದ ಸರಪಣೆ ಮತ್ತು ಶಂಖು ಕಿತ್ತು ಬಿಸಾಡಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ನಾಗರಾಜ್ ಮತ್ತು ಅವರ ಸಿಬ್ಬಂದಿಯವರನ್ನು ಕುರಿತು ಈ ಜಮೀನಿನ ಒಳಗೆ ಬಂದು ಮತ್ತೆ ಸರ್ವೇ ಕಾರ್ಯ ನಡೆಸಿದರೆ ನಿಮ್ಮ ಕೈ ಮತ್ತು ಕಾಲುಗಳನ್ನು ಮುರಿಯುತ್ತೇನೆಂತ ಪ್ರಾಣ ಬೆದರಿಕೆ ಹಾಕಿ ಕೆಟ್ಟ ಮಾತುಗಳಿಂದ ಬೈದಿರುತ್ತಾನೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


