ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲಾ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧
-
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ರಾಬರ್ಟ್ಸನ್ಪೇಟೆಯ, ಉರಿಗಾಂಪೇಟೆ, ಬಜಾರ್ ರಸ್ತೆಯ ವಾಸಿ ಶ್ರೀಮತಿ ಗೀತಾಲಕ್ಷ್ಮಿ ಮತ್ತು ತಿರುನಾವುಕರಸನ್ ಎಂಬುವರೊಂದಿಗೆ ದಿನಾಂಕ ೩೦-೧೦-೨೦೦೩ ರಂದು ಮದುವೆಯಾಗಿದ್ದು, ಮದುವೆಯಾದ ವಾರದ ನಂತರ ತಿರುನಾವುಕರಸನ್ ತನ್ನ ಪತ್ನಿಯ ಶೀಲದ ಮೇಲೆ ಸಂಶಯವಿದುದ್ದರಿಂದ ಮೈದನಾದ ಸತೀಶ್ ಮತ್ತು ಅತ್ತೆ ವಂಸತ ರವರುಗಳು ಸೇರಿಕೊಂಡು ದೈಹಿಕವಾಗಿ ಕಿರುಕುಳ ನೀಡುತ್ತಿದ್ದು, ಗೀತಾಲಕ್ಷ್ಮಿ ರವರು ಹೆರಿಗೆಗೆ ತವರು ಮನೆಗೆ ಹೋಗಿದ್ದು ಮೇಲ್ಕಂಡ ಕಾರಣಗಳಿಂದ ವಾಪಸ್ಸು ತನ್ನ ಗಂಡನ ಮನೆಗೆ ಹೋಗಿರುವುದಿಲ್ಲ. ದಿನಾಂಕ ೨೮-೦೭-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಗಾಂಧಿ ವೃತ್ತದ ಬಳಿ ಹೋಗುತ್ತಿದ್ದಾಗ ತನ್ನ ಗಂಡ ತಿರುನಾವುಕರಸನ್ ಗೀತಾಲಕ್ಷ್ಮಿರವರ ಕತ್ತನ್ನು ಹಿಡಿದು ಗೀತಾಲಕ್ಷ್ಮಿ ಮತ್ತು ಆಕೆಯ ಮಗುವನ್ನು ಸಾಯಿಸದೆ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
-ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೭-೨೦೦೮ ರಂದು ೦೯೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಚಂಬೇನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಲಕ್ಷ್ಮಿದೇವಮ್ಮ ಕೋಂ ನಗರಾಜ ಎಂಬುವರು ಅದೇ ಗ್ರಾಮದ ಶ್ರೀಮತಿ ಲಕ್ಷಮ್ಮ ಕೋಂ ಮುನಿಯಪ್ಪ ಎಂಬುವರೊಂದಿಗೆ ಏಕಾ ಏಕಿ ಜಗಳ ತೆಗೆದು ಲಕ್ಷಮ್ಮನ್ನು ಕೈಗಳಿಂದ ಹೊಡೆದು, ಕುಡುಗೋಲಿನಿಂದ ಎಡ ಹಣೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.
-
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಂಕ ೨೯-೦೭-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಡೈಮಂಡ್ಗುಡಿಸಿನ ವಾಸಿ ಶ್ರೀ ಪ್ಯಾರುಸಾಬ್ (೭೫) ಎಂಬುವರು ಗರುಡಾದ್ರಹಳ್ಳಿ ದರ್ಗಾ ಹತ್ತಿರ ಇದ್ದಾಗ ಮನೆ ಮಾರಿರುವ ವಿಚಾರದಲ್ಲಿ ಚಾಂದ್ಪಾಷ, ಚಲ್ದಿಗಾನಹಳ್ಳಿ ಆನಂತಪ್ಪ ಮತ್ತು ರಹಮತ್ ಎಂಬುವರುಗಳು ಪ್ಯಾರುಸಾಬ್ ಅನ್ನು ಏಕೋದ್ದೇಶದಿಂದ ಜಗಳಕ್ಕೆ ಹೋಗಿ ಕೆಟ್ಟ ಮಾತುಗಳಿಂದ ಬೈದು ದೊಣ್ಣೆ ಮತ್ತು ಕೈಗಳಿಂದ ಹೊಡೆದಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೭-೨೦೦೮ ರಂದು ೧೨೩೦ ಗಂಟೆ ಸಮಯದಲ್ಲಿ ರಾಬರ್ಟ್ಸನ್ಪೇಟೆ, ವಿವೇಕನಗರದ ವಾಸಿ ಶ್ರೀಮತಿ ಲಕ್ಷ್ಮಮ್ಮ ಕೋಂ ಕುಪ್ಪಸ್ವಾಮಿ ರವರ ಮಗನಾದ ನಟರಾಜ್ (೨೯) ಎಂಬುವನು ತನ್ನ ಮನೆಯಿಂದ ಹೋದವನು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಗಿರುತ್ತಾನೆ.
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
-
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೭-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಮಹಿಳಾ ಎಎಸ್ಐ ಶ್ರೀಮತಿ ರೀಟಾ ರವರಿಗೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆ ವೈದ್ಯಾಧಿಕರಿಗಳಿಂದ ಹಾಜರ್ ಪಡಿಸಿದ ಸೂಚನೆ ಚೀಟಿ ಸಂಖ್ಯೆ ೮೫೬೧೮೫ ಅನ್ನು ಪರಿಶೀಲಿಸಲಾಗಿ ಕೆ.ಜಿ.ಎಫ್. ರಾಬರ್ಟ್ಸನ್ಪೇಟೆ, ಉರಿಗಾಂಪೇಟೆ ವಾಸಿ ಶ್ರೀಮತಿ ಆಯುಶಾ ಬಾನು (೩೫) ಎಂಬುವರು ಬೆಂಕಿಯ ಸುಟ್ಟಗಾಯಗಳಿಂದ ದಿನಾಂಕ ೨೮-೦೭-೨೦೦೮ ರಂದು ರಾತ್ರಿ ೨೦೪೦ ಗಂಟೆಯಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


