ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೬-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ನಾಯನಹಳ್ಳಿ ಗ್ರಾಮದ ನಡುಬೀದಿಯಲ್ಲಿ ನಾಯನಹಳ್ಳಿ ವಾಸಿ ಶ್ರೀ ಅಬ್ದುಲ್ ಷಿರೋಜ್ ಬಿನ್ ರೆಹಮಾನ್ ತಮ್ಮ ಟಿವಿಎಸ್ ವಾಹನದಲ್ಲಿ ಹೋಗುತ್ತಿದ್ದಾ ಸ್ವಂತ ನಿವೇಶನದ ವಿಚಾರದಲ್ಲಿ ನಾಯನಹಳ್ಳಿ ಗ್ರಾಮದ ರಘುರಾಮರೆಡ್ಡಿ, ಶ್ರೀನಿವಾಸರೆಡ್ಡಿ ಮತ್ತು ಇತರೆ ೧೦ ಜನರು ಏಕಾಏಕಾ ಪಿರ್ಯಾದಿಯ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಮಾರಕಾಯುದಗಳಿಂದ ಹೊಡೆದು ರಕ್ತಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಹಲ್ಲೆ: ೦೧
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೬-೨೦೦೮ ರಂದು ೦೭೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ನಾಯನಹಳ್ಳಿ ಗ್ರಾಮದ ವಾಸಿ ಗೋವಿಂದಪ್ಪ, ರಘುರಾಮರೆಡ್ಡಿ ಮತ್ತು ಇತರರು ನಾಯನಹಳ್ಳಿ ಗ್ರಾಮದಲ್ಲಿರುವ ಶಾಳೆಯ ಮಕ್ಕಳ ಬಿಸಿ ಊಟದ ಅಡಿಗೆ ಮನೆ ಬಳಿ ಇಟ್ಟಿಗೆಗಳು ಎತ್ತಿ ಪಕ್ಕಕ್ಕೆ ಹಾಕುತ್ತಿದ್ದಾಗ ಅದೇ ಗ್ರಾಮದ ರಹಮಾನ್ ಸಾಬ್ ಮತ್ತು ಹುಸೇನ್ ಎಂಬುವರುಗಳು ದೊಣ್ಣೆ, ಮಚ್ಚುಗಳನ್ನು ಕೈಯಲ್ಲಿಡಿದುಕೊಂಡು ಬಂದು ಜಗಳ ಮಾಡಿ ಜಮೀನಿನಲ್ಲಿ ಇಟ್ಟಿಗೆಗಳನ್ನು ಹಾಕುತ್ತೀರ ಎಂದು ನಾನಾ ರೀತಿ ಜಾತಿ ಎತ್ತಿ ದುರ್ಬಾಷೆಗಳಿಂದ ಬೈದು ದೊಣ್ಣೆಯಿಂದ ಹೊಡೆದು ಗೋವಿಂದಪ್ಪನಿಗೆ ರಕ್ತಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೨
-
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಅಭಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೬-೨೦೦೮ ರಂದು ೧೨೩೦ ಗಂಟೆ ಸಮಯದಲ್ಲಿ ಶ್ರೀ. ಎನ್.ಎನ್.ಪ್ರಸಾದ್, ಪಿ.ಎಸ್.ಐ ರವರಿಗೆ ಜಕ್ಕರಸಕುಪ್ಪ ಗ್ರಾಮದಲ್ಲಿ ಯಾರೋ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆಂಬ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಜಕ್ಕರಸಕುಪ್ಪ ಗ್ರಾಮದ ಮರಿಕುಂಟ ಕಟ್ಟೆಯ ಬಳಿ ಕಾಯುತ್ತಿದ್ದಾಗ ಅದೇ ಗ್ರಾಮದ ವಾಸಿ ಪಳನಿ (೩೯) ಬಿನ್ ಚಲ್ಲಮುತ್ತು ಎಂಬುವನು ಒಂದು ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ೨ ಲೀಟರ್ ನ ೫ ಪ್ಲಾಸ್ಟಿಕ್ ಬಾಟಲ್ಗಳ ತುಂಬ ಕಳ್ಳಭಟ್ಟಿ ಸಾರಾಯಿಯನ್ನು ಕಾನೂನು ಬಾಹಿರವಾಗಿ ಇಟ್ಟುಕೊಂಡಿದವನ್ನು ಮತ್ತು ಮಾಲನ್ನು ಅಮಾನತ್ತುಗೊಳಿಸಿರುತ್ತಾರೆ.
-
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಅಭಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೬-೨೦೦೮ ರಂದು ೦೯೧೫ ಗಂಟೆ ಸಮಯದಲ್ಲಿ ಶ್ರೀ.ಲ್ಕಕ್ಷ್ಮಯ್ಯ, ಪಿ.ಐ., ಡಿ.ಸಿ.ಐ.ಬಿ, ಡಿ.ಪಿ.ಓ, ಕೆ.ಜಿ.ಎಫ್. ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಸುಸೈಪಾಳ್ಯಂನಲ್ಲಿರುವ ತ್ರೇಸಮ್ಮ ರವರ ಮನೆಯ ಮೇಲೆ ದಾಳಿ ನಡೆಸಿದಾಗ ಮನೆಯೊಳಗೆ ಒಂದು ಪ್ಲಾಸ್ಟಿಕ್ ಬಕೇಟ್ನಲ್ಲಿ ೨೦೦೦/- ರೂ ಬೆಲೆ ಬಾಳುವಷ್ಟು ೨೦ ಲೀಟರ್ ಕಳ್ಳಭಟ್ಟಿ ಸಾರಾಯಿ ಸಿಕ್ಕಿದ್ದು ಮಾಲನ್ನು ಅಮಾನತ್ತುಗೊಳಿಸಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


