ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೦೬-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೬-೨೦೦೮ ರಂದು ರಾತ್ರಿ ೧೮೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ನಾಗನಹಳ್ಳಿ ಗ್ರಾಮದ ಬಳಿ ಇದೇ ಗ್ರಾಮದ ವಾಸಿ ಶ್ರೀಮತಿ ಪಾಪಮ್ಮ (೩೫) ಕೋಂ ನಾರಾಯಣಪ್ಪ ರವರು ದಾರಿಯಲ್ಲಿ ಹೋಗುತ್ತಿದ್ದಾಗ, ತಿಮ್ಮರಾಯಪ್ಪ ಬಿನ್ ಮುನಿಯಪ್ಪ, ಮುನಿಯಪ್ಪ, ಚಿಕ್ಕತಿಮ್ಮಪ್ಪ ಬಿನ್ ಕೆಂಚಪ್ಪ, ಪದ್ಮಮ್ಮ ಕೋಂ ಚಿಕ್ಕತಿಮ್ಮಪ್ಪ, ನಾಗನಹಳ್ಳಿ ಗ್ರಾಮದ ವಾಸಿಗಳು ಜಮೀನು ತಕರಾರುಗಳ ಹಿನ್ನಲೆಯಲ್ಲಿ ಶ್ರೀಮತಿ ಪಾಪಮ್ಮ ರವರನ್ನು ಕೆಟ್ಟ ಮಾತುಗಳಿಂದ ಬೈದು, ಅವರು ಧರಿಸಿದ್ದ ಸೀರೆಯನ್ನು ಎಳೆದು ಮಾನಭಂಗ ಮಾಡಿ, ಕೆಳಕ್ಕೆ ತಳ್ಳಿ ಕಾಲುಗಳಿಂದ ಒದ್ದು, ಕೈಗಳಿಂದ ಗುದ್ದಿ ಮೈನೋವುಂಟು ಮಾಡಿರುತ್ತಾರೆ.
ರಸ್ತೆ ಅಪಘಾತಗಳು: 01
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕಿನ ಬೇತಮಂಗಲದಲ್ಲಿ ಕೆ.ಜಿ.ಎಫ್. ಮುಖ್ಯರಸ್ತೆಯಲ್ಲಿ ಬ್ಲೂಮೂನ್ ಎಂಟರ್ಪ್ರೈಸಸ್ ಅಂಗಡಿ ಮುಂಭಾಗ ಶ್ರೀ ನಾಗೇಂದ್ರ ಬಿನ್ ಗೋಪಾಲಪ್ಪ, ರಾಜೇಂದ್ರಹಳ್ಳಿ, ಮುಳಬಾಗಿಲು ತಾಲೂಕು ರವರು ಪಿ.ನಜೀರಿಯ ಬಸ್ ಸಂಖ್ಯೆ: ಕೆಎ-೦೭-೫೪೭೯ ವಾಹನಕ್ಕೆ ಗ್ರೀಸ್ ಹಾಕುತ್ತಿದ್ದಾಗ ಅದರ ಚಾಲಕ ಎಂ.ರಾಮಮೂರ್ತಿ ಎಂಬುವರು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಶ್ರೀ ನಾಗೇಂದ್ರ ಎಂಬುವರ ಎರಡೂ ಕೈಗಳ ಮೇಲೆ ಚಕ್ರ ಹರಿದು ಭಾರಿ ಘಾಯವಾಗಿರುತ್ತದೆ ಮತ್ತು ಕಿವಿಯಲ್ಲಿಯೂ ಸಹ ರಕ್ತ ಬಂದಿರುತ್ತದೆ.
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೬-೨೦೦೮ ರಂದು ೧೫೪೫ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ದೇಶಿಹಳ್ಳಿ ಗ್ರಾಮದಲ್ಲಿ ಪಸಲು ಗಂಗಮ್ಮ ದೇವಸ್ಥಾನದ ಹತ್ತಿರ ಇದೇ ಗ್ರಾಮದ ವಾಸಿಯಾದ ಶ್ರೀ ಜಿ.ಮುರಳಿ (೩೫) ಬಿನ್ ಗುರಪ್ಪ ಎಂಬುವರೊಂದಿಗೆ ಶ್ರೀನಿವಾಸ (೩೮) ಬಿನ್ ಗೋಪಾಲಪ್ಪ, ದೇಶಿಹಳ್ಳಿ ರವರು ವಿನಾಕಾರಣ ಜಗಳ ತೆಗೆದು ಒಂದು ಕಲ್ಲಿನಿಂದ ಹೊಡೆದು ಜಿ.ಮುರಳಿ ರವರ ಹಣೆ ಮತ್ತು ತುಟಿಯ ಮೇಲೆ ರಕ್ತಘಾಯಗಳನ್ನುಂಟು ಮಾಡಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೬-೨೦೦೮ ರಂದು ೧೩೦೦ ಗಂಟೆಯಲ್ಲಿ ಬಂಗಾರಪೇಟೆ ಪಟ್ಟಣದಲ್ಲಿ ಕೆ.ಸಿ.ರೆಡ್ಡಿ ಕಾಲೇಜುನಲ್ಲಿ ಕು: ಪಿ.ವಿ.ಸುಧಾ ಬಿನ್ ವೆಂಕಟೇಶಪ್ಪ, ಬೋಡೇನಹಳ್ಳಿ ಮಜರಾ ಪುರಂ ಗ್ರಾಮ, ಬಂಗಾರಪೇಟೆ ತಾಲೂಕು ರವರು ಅಂತಿಮ ಬಿ.ಕಾಂ. ಪರೀಕ್ಷೆ ಬರೆದಿದ್ದು, ನಂತರ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೯-೦೬-೨೦೦೮ ರಂದು ರಾತ್ರಿ ೨೧೪೫ ಗಂಟೆ ಸಮಯದಲ್ಲಿ ಬಂಗಾರಪೇಟೆ ಪಟ್ಟಣದ ಗಂಗಮ್ಮನಪಾಳ್ಯದ ವಾಸಿ ಶ್ರೀ ಗೌತಮ್ (೩೫) ಬಿನ್ ಮುರುಗೇಶ್ ಎಂಬುವರು ತನ್ನ ಹೊಟ್ಟೆನೋವಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಂಡಿದ್ದು, ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಸಹ ಗುಣಮುಖನಾಗದೆ ದಿನಾಂಕ ೨೨-೦೬-೨೦೦೮ ರಂದು ಸಂಜೆ ೧೭೩೦ ಗಂಟೆಯಲ್ಲಿ ಮೃತಪಟ್ಟಿರುತ್ತಾನೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


