ದಿನದ ಅಪರಾಧಗಳ ಪಕ್ಷಿನೋಟ ೨೮ನೇ ಮೇ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಟೌನ್, ರಾಜೇಂದ್ರ ಬಡಾವಣೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ರಾಜೇಂದ್ರ ಬಡಾವಣೆಯಲ್ಲಿ ವಾಸಿ ಶ್ರೀ ರಾಧಾಕೃಷ್ಣ ಮನೆ ಸಂಖ್ಯೆ ೩೧೯ ರಂಬುವರು ಬೆಂಗಳೂರು, ಮಾರತ್ತಹಳ್ಳಿ, ಅಶ್ವತ್ತ ನಗರದ ಶಾರದಮ್ಮ ಎಂಬುವರ ಮನೆಯಲ್ಲಿ ಬೋಗ್ಯಕ್ಕೆ ಇದ್ದು, ಆ ಮನೆಯನ್ನು ಕಾಲಿ ಮಾಡಿ ಶಾರದಮ್ಮ ನವರ ಬಳಿ ಬೋಗ್ಯದ ಹಣ ರೂ ೧,೦೦,೦೦೦/- ಗಳನ್ನು ವಾಪಸ್ಸು ಕೇಳಿದಾಗ ಶಾರದಮ್ಮನು ನೀನೇ ನನಗೆ ಹಣ ಕೊಡಬೇಕು ಎಂಬು ರಾಧಾಕೃಷ್ಣರವರಿಗೆ ಹೇಳಿ ಕಳುಹಿಸಿ, ದಿನಾಂಕ ೨೦.೦೫.೨೦೦೮ ಮತ್ತು ೨೪.೦೫.೨೦೦೮ ರಂದು ರಾಧಾಕೃಷ್ಣರವರಿಗೆ ಪೋನ್ ಮಾಡಿ ಹಣವನ್ನು ಕೊಡದಿದ್ದರೆ ಪ್ರಾಣ ತೆಗೆಯುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾಳೆ. 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್., ಉರಿಗಾಂನ ಹೆನ್ರಿಸ್, ೨ನೇ ಲೈನ್, ಮನೆ ಸಂಖ್ಯೆ ೧೪೫ ರಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೪-೦೫-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಹೆನ್ರಿಸ್, ೨ನೇ ಲೈನ್, ಮನೆ ಸಂಖ್ಯೆ ೧೪೫ ರ ವಾಸಿ ಶ್ರೀಮತಿ ಸರೋಜ (೬೫) ಕೋಂ ವಳ್ಳಿಕಣ್ಣನ್ ಎಂಬುವರು ತನ್ನ ತಂಗಿಯಾದ ಕಲೈ ಸೆಲ್ವಿ ರವರು ಚಾಂಪಿಯನ್‌ರೀಫ್ಸ್, ಡಿ ಬ್ಲಾಕ್‌ನಲ್ಲಿ ವಾಸವಾಗಿದ್ದು, ಅವರನ್ನು ನೋಡಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರಟವರು ಇದುವರೆವಿಗೂ ಮನೆಗೆ ವಾಪಸ್ಸು ಬಂದಿರುವುದುಲ್ಲ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply