ದಿನದ ಅಪರಾಧಗಳ ಪಕ್ಷಿನೋಟ ೨೫ನೇ ಮೇ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕಿನ ದೊಡ್ಡವಲಗಮಾದಿ ಗ್ರಾಮದ ಸಮೀಪ ನಡೆದಿರುತ್ತದೆ. ದಿನಾಂಕ ೨೩-೦೫-೨೦೦೮ಕ್ಕೆ ಹಿಂದೆ ಯಾರೋ ದುಷ್ಕರ್ಮಿಗಳು ದೊಡ್ಡವಲಗಮಾದಿ ಗ್ರಾಮದ ಸಮೀಪ ಹಾದುಹೋಗಿದ್ದ ಶಿವ-ಕೆ.ಜಿ.ಎಫ್.ಲೈನ್, ೭೮ ಕೆ.ವಿ. ೧ನೇ ಲೈನ್ ಟವರ್‍ ಸಂಖ್ಯೆ ೬೩೭ ಮತ್ತು ಲೈನ್ ೨ ರಲ್ಲಿ ಟವರ್‍ ಸಂಖ್ಯೆ ೬೩೪ ರಲ್ಲಿನ ಎರಡು ಟ್ಯೂಬ್‌ಲರ್‍ ಕಂಬಗಳನ್ನು ಕಟ್‌ ಮಾಡಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಬೆಲೆ ಸುಮಾರು ರೂ. ೧೨,೦೦೦/- ಗಳು.

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಘಟನೆಯು ಬಂಗಾರಪೇಟೆ ತಾಲೂಕಿನ ಬೂಚೇಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ. ದಿನಾಂಕ ೨೪-೦೫-೨೦೦೮ ರಂದು ಮದ್ಯಾಹ್ನ ೧೩೦೦ ಗಂಟೆಯಲ್ಲಿ ಬೂಚೇಪಲ್ಲಿ ಗ್ರಾಮದ ವಾಸಿ ಶ್ರೀಮತಿ ರಮಾದೇವಿ (೨೪) ಕೋಂ ಕೃಷ್ಣಮೂರ್ತಿ ಎಂಬುವರು ಗ್ರಾಮದಲ್ಲಿ ನೀರು ಹಿಡಿಯಲು ಹೋದಾಗ, ನಳದ ಬಳಿ ಅದೇ ಗ್ರಾಮದ ವಾಸಿ ಶ್ರೀಮತಿ ಅಲುವೇಲಮ್ಮ ಎಂಬುವರು ಬಟ್ಟೆ ಹೊಗೆಯುತ್ತಿದ್ದು, ಇದನ್ನು ಶ್ರೀಮತಿ ರಮಾದೇವಿ ಕೇಳಿದ್ದಕ್ಕೆ ಶ್ರೀಮತಿ ಅಲುವೇಲಮ್ಮ ಮತ್ತು ಇವರ ಗಂಡ ಬಾಬು ಎಂಬುವರು ಜಗಳ ಕಾದು, ಬಾಬು ಎಂಬುವರು ಒಂದು ಮಚ್ಚಿನಿಂದ ಮತ್ತು ಶ್ರೀಮತಿ ಅಲುವೇಲಮ್ಮ ಎಂಬುವರು ತನ್ನ ಕೈಗಳಿಂದ ಶ್ರೀಮತಿ ರಮಾದೇವಿ ಎಂಬುವರಿಗೆ ಹೊಡೆದು ರಕ್ತಘಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply