ದಿನದ ಅಪರಾಧಗಳ ಪಕ್ಷಿನೋಟ ೨೪ನೇ ಮೇ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ಟೌನ್, ತಹಸಿಲ್ದಾರ್‍ ರವರ ಮನೆ ಮುಂಭಾಗದಲ್ಲಿ ಈ ಕೃತ ಸಂಭವಿಸಿರುತ್ತದೆ. ದಿನಾಂಕ ೨೩-೦೫-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಮನೆ ಸಂಖ್ಯೆ ೧೬, ಮುನಿಸಿಪಲ್ ಕ್ವಾಟ್ರಸ್, ಸಂತೆ ಗೇಟ್, ಬಂಗಾರಪೇಟೆ ವಾಸಿ ಶ್ರೀ ಸತ್ಯಮೂರ್ತಿ ಎಂಬುವರ ಬಾವನಮಗ ಎಂ.ನವೀನ್ ಕುಮಾರ್‍ (೧೦) ಎಂಬುವರು ತಹಸಿಲ್ದಾರ್‍ ರವರ ಮನೆ ಮುಂಭಾಗದ ರಸ್ತೆ ದಾಟುತ್ತಿದ್ದಾಗ ಕೋಲಾರದ ಕಡೆಯಿಂದ ಬಿ.ಇ.ಎಂ.ಎಲ್ ಬಸ್ ಸಂಖ್ಯೆ ಸಿಎನ್‌ಕೆ-೪೯೭೩ ರ ಚಾಲಕ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನವೀನ್ ಎಂಬ ಹುಡುಗನಿಗೆ ಡಿಕ್ಕಿ ಹೊಡೆದ ಪ್ರಯುಕ್ತ ನವೀನ್‌ಗೆ ರಕ್ತಗಯವಾಗಿರುತ್ತದೆ.

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ 

ಇತರೆ: ೦೧

  •   ಆಂಸ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಮಾರಟಕ್ಕೆ  ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು, ಕ್ಯಾಸಂಬಳ್ಳ ಹೋಬಳಿ, ಯರ್‌ಕುಂಟೆ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೦೫-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಶ್ರೀ ಲಕ್ಷ್ಮಯ್ಯ, ಪಿ.ಐ., ಡಿ.ಸಿ.ಐ.ಬಿ, ಡಿ.ಪಿ.ಓ, ಕೆ.ಜಿ.ಎಫ್. ರವರಿಗೆ ಬಂಧ ಖಚಿತ ವರ್ತಮಾನದ ಮೇರೆಗೆ ಯರ್‌ಕುಂಟ ಗ್ರಾಮದ ಮುರುಗನ್ ರವರ ಮನೆಯ ಮೇಲೆ ದಾಳಿ ಮಾಡಲು ಆಂಡ್ರಸನ್‌ಪೇಟೆಯ ಪಿ.ಎಸ್.ಐ ಮತ್ತು ಸಿಬ್ಬಂದಿಗಳೊಂದಿಗೆ ದಾಳಿಮಾಡಿದಾಗ ಅವರ ಮನೆಯಲ್ಲಿ ಒಂದು ಪ್ಲಾಸ್ಟಕ್ ಕ್ಯಾನ್,  ಬಿಂದಿಗೆ ಮತ್ತು ಬಾಟಲ್‌ಗಳಲ್ಲಿ ತುಂಬಿ ಕಲ್ಲುಮುಚ್ಚಿ ಇಟ್ಟಿದ್ದ ಸುಮಾರು ೫೦೦೦/- ತಯಾರಿಸಿ ಇಟ್ಟಿದ್ದ ೫೦ ಲೀಟರ್ ಕಳ್ಳಬಟ್ಟಿ ಸಾರಾಯಿ ಒಟ್ಟು ಬಲೆ ರೂ ೫೦೦೦/- ಗಳನ್ನು ದಸ್ತಿಗಿರಿಮಾಡಿರುತ್ತಾರೆ. ಆರೋಪಿಗಳು ಪರಾರಿಯಾಗಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕಣಿವೆಕಲ್ಲು ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಕಣಿವೆಕಲ್ಲು ಗ್ರಾಮದ ವಾಸಿ ಶ್ರೀ ವೆಂಕಟ್ರಾಮಪ್ಪ (೬೦) ಎಂಬುವರಿಗೆ ಸುಮಾರು ೨ ವರ್ಷಗಳಿಂದ ಹೊಟ್ಟೆ ನೋವು ಬರುತ್ತಿದ್ದು ಮತ್ತು ಕೈಸಾಲಗಳು ಜಾಸ್ತಿ ಮಾಡಿದ್ದು, ಹೊಟ್ಟೇ ನೋವಿನ ಪ್ರಯುಕ್ತ ಜೀವನದಲ್ಲಿ ಜಗೂಪ್ಸೆ ಹೋಂದಿ ದಿನಾಂಕ ೨೩/೦೫/೨೦೦೮ ರಂದು ೧೨೦೦ ಗಂಟೆ ಸಯದಲ್ಲಿ ಮರಕ್ಕೆ ಹಗ್ಗದಿಂದ ನೇಣು ಹಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply