ದಿನದ ಅಪರಾಧಗಳ ಪಕ್ಷಿನೋಟ ೨೨ನೇ ಮೇ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೦೫-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ:  ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತದೆ. ಕೆ.ಜಿ.ಎಫ್ ಪಾರಾಂಡಹಳ್ಳಿಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಶ್ರೀ. ಸಂಜೀವಪ್ಪ ಬಿನ್ ಲೇಟ್ ಕುಳ್ಳಪ್ಪ(೬೦) ಮಲ್ಲಂಪಲ್ಲಿ ವಾಸಿ ದಿನಾಂಕ: ೨೧-೦೫-೨೦೦೮ ರಂದು ೧೯೩೦ ಗಂಟೆ ಸಯಯದಲ್ಲಿ ಪಾರಾಂಡಹಳ್ಳಿಯಲ್ಲಿ ಹರಿ ಎಂಬುವರ ಕಬಾಬ್ ಅಂಗಡಿಯಲ್ಲಿ ಮೀನು ತೆಗೆದುಕೊಳ್ಳುವ ಸಲುವಾಗಿ ಹರಿ ರವರ ಪತ್ನಿಯನ್ನು ಮೀನಿನ ಬೆಲೆ ಕೇಳಲಾಗಿ ಹರಿಯವರು ಸುಮ್ಮನೆ ವ್ಯಾಪಾರ ಮಾಡುತ್ತಿಯಾ ಹೊರಗೆ ಹೋಗು ಎಂತ ಜಗಳ ಕಾದು ಸಂಜೀವಪ್ಪನಿಗೆ ಕೆಟ್ಟ ಮಾತುಗಳಿಂದ ಬೈದು ಕಾಲಿನಿಂದ ಒದ್ದಿದರಿಂದ ರಸ್ತೆಯಲ್ಲಿ ಬಿದ್ದು ರಕ್ತಗಾಯಗಳಾಗಿದ್ದು ಹಾಗೂ ನೀನು ಇಲ್ಲೇ ಇದ್ರೆ ಸಾಯಿಸುವುದಾಗಿ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ.

ಇತರೆ: ೦೨

  •    ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮಾರಟಕ್ಕೆ  ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ಉರಿಗಾಂನ ಕೆನೆಡೀಸ್ ೨ನೇ ಲೈನ್ ಮನೆ ಸಂಖ್ಯೆ ೬೪ ರಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೫-೨೦೦೮ ರಂದು ೧೫೩೦ ಗಂಟೆ ಸಮಯದಲ್ಲಿ ಶ್ರೀ ಮುಸ್ತಾಕ್ ಪಾಷ, ಪಿ.ಎಸ್.ಐ,ಉರಿಗಾಂ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿ ಗಳೊಂದಿಗೆ ಮನೆ ಸಂಖ್ಯೆ ೬೪ರ ಮನೆಯ ಮೇಲೆ ದಾಳಿಮಾಡಿದಾಗ ಸದರಿ ಮನೆಯಲ್ಲಿ ಕುಮಾರ್‍ @ ನಾಯಿಕುಮಾರ್‍ ಬಿನ್ ಲೇಟ್ ಸಂಪಂಗಿ, ಕುಮಾರಿ ಕೋಂ ಕುಮಾರ್‍ ಮತ್ತು ಮಲರ್‍ ಕೋಂ ವಿಲ್ವನಾಥನ್ ಎಂಬುವರುಗಳು ಮೂರು ಪ್ಲಾಸ್ಟಕ್ ಡ್ರಾಮ್ ಗಳಲ್ಲಿ ಕಳ್ಳಭಟ್ಟಿ ಸಾರಾಯಿ ಮಾಡುವ ಕೊಳೆಯುವ ರೀತಿಯಲ್ಲಿ ಶೇಖರಿಸಿದ ಕಚ್ಚಾಪದಾರ್ಥಗಳು ರಾಸಾಯನಿಕ ದ್ರವಪದಾರ್ಥಗಳು ಒಂದು ಮಣ್ಣಿನ ಮಡಿಕೆ ಪ್ಲಾಸ್ಟಿಕ್ ಪೈವು ಇಟ್ಟುಕೊಂಡು ಕಳ್ಳಭಟ್ಟಿ ತಯಾರು ಮಾಡಲು ಅಣಿ ಮಾಡುತ್ತಿದ್ದು, ಪೊಲೀಸರನ್ನು ಕಂಡ ಕೂಡಲೆ ಪರಾರಿಯಾಗಿರುತ್ತಾರೆ. ಪಂಚನಾಮೆ ಮೂಲಕ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡು ಕಾನೂನು ಕ್ರಮಕೈಗೊಂಡಿರುತ್ತದೆ.
  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮಾರಟಕ್ಕೆ  ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಚನ್ನಪಲ್ಲಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ: ೨೧-೦೫-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಬೇತಮಂಗಲ ಪೊಲೀಸ್ ಠಾಣೆಯ ಶ್ರೀ. ಮುನಿನಾರಾಯಣಪ್ಪ, ಎ.ಎ‌ಸ್‌.ಐ. ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಗಳೊಂದಿಗೆ ಕಳ್ಳಿಕುಪ್ಪ ಗ್ರಾಮದ ವಾಸಿಗಳಾದ ಶ್ರೀಮತಿ ಭಾಗ್ಯಮ್ಮ ಕೋಂ ವೆಂಕಟರಾಮಪ್ಪ(೪೦) ಮತ್ತು ಶ್ರೀಮತಿ ಪಾಪಮ್ಮ ಕೋಂ ನಾಗಪ್ಪ(೪೦) ರವರುಗಳ ಮನೆಗಳ ಮೇಲೆ ದಾಳಿ ಮಾಡಲಾಗಿ ಸದರಿಯವರುಗಳು ಮನೆಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಒಂದೊಂದು ಪ್ಲಾಸ್ಟಿಕ್ ಕ್ಯಾನ್ ಗಳಲ್ಲಿ ಕಳ್ಳಭಟ್ಟಿ ಸಾರಾಯಿ ಮತ್ತು ಗ್ಲಾಸುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದವರನ್ನು ಹಿಡಿದು ದಸ್ತಗಿರಿ ಮಾಡಿ ಕಾನೂನು ಕ್ರಮಕೈಗೊಂಡಿರುತ್ತದೆ. 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  • ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಆಸ್ವಾಭಾವಿಕ ಮರಣಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಚನ್ನಪಲ್ಲಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಇದೇ ಗ್ರಾಮದ ವಾಸಿ ಮೃತ ಶ್ರೀ. ರಾಧಕೃಷ್ಣ ಬಿನ್ ಗೋವಿಂದಪ್ಪ(೪೦) ಎಂಬುವರಿಗೆ ಆಗಾಗೆ ಹೊಟ್ಟೆ ನೋವು ಬರುತ್ತಿದ್ದು, ನೋವು ತಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: ೨೧-೦೫-೨೦೦೮ ರಂದು ರಾತ್ರಿ ದನದ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದುಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply