ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ ವಾಹನ ಕಳ್ಳತನ :ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣರ : ಇಲ್ಲ
ರಸ್ತೆ ಅಪಘಾತಗಳು:ಇಲ್ಲ
ಮಾರಣಾಂತಿಕ:ಇಲ್ಲ
ಸಾಧಾರಣ:ಇಲ್ಲ
ಮೋಸ / ವಂಚನೆ ಪ್ರಕರಣಗಳು:ಇಲ್ಲ
-ಕೊಲೆಗೆ ಪ್ರಯತ್ನ: ಇಲ್ಲ
ಚಾಂಪಿಯನ್ ರೀಪ್ಸ್ ಪೊ
ಲೀಸ್ ಠಾಣೆ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೧-೦೪-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಎಸ್.ಟಿ. ಬ್ಲಾಕ್ ವಾಸಿ ಶ್ರೀಮತಿ. ಅನಿತ @ ಅಮುಲು ಎಂಬುವರ ಗಂಡನು ಅದೇ ಕಾಲೋನಿಯ ನಾಗು ಎಂಬಾಕೆಯೊಂದಿಗೆ ಅಕ್ರಮ ಸಂಬಂದವನ್ನು ಇಟ್ಟಿಕೊಂಡಿದ್ದು, ಈ ಬಗ್ಗೆ ಅನಿತ ರವರು ನಾಗು ರವರ ತಾಯಿ ಮಂಜುಳ ರವರ ಬಳಿ ಈಬಗ್ಗೆ ಕೇಳಲಾಗಿ ಆಕೆಯ ಮಕ್ಕಳಾದ ಪೆರಿಯನಯನ ಮತ್ತು ಚಿನ್ನನಯನ ಎಂಬುರುಗಳು ಅನಿತ ರವರ ಬಳಿ ಜಗಳ ತೆಗೆದು ಪರಿನಯನ ಎಂಬುವನು ಒಂದು ಚಿಕ್ಕ ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾನೆ
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ
ದಿನಾಂಕ: ೨೧-೦೪-೨೦೦೮ ರಂದು ೧೭೦೦ ಗಂಟೆಯ ಸಮಯದಲ್ಲಿ ಬೇತಮಂಗಲ ಪೊಲೀಸ್ ಠಾಣೆಯ ಸರಹದ್ದು ಸುವರ್ಣಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ದಾಸ್ ಬಿನ್ ಆರೋಗ್ಯಸ್ವಾಮಿ(೪೮) ರಾಬರ್ಟ್ಸನ್ ಪೇಟೆ, ಕೆ.ಜಿ.ಎಫ್ ರವರು ಮತ್ತು ಇತರೆ ೯ ಜನರು ಹಣವನ್ನು ಪಣವಾಗಿಟ್ಟು, ಜೂಜಾಟ ಆಡುತ್ತಿದ್ದವರನ್ನು ಪಿ.ಎಸ್.ಐ ಶ್ರಿ. ಆರ್. ರಘುರಾಮರೆಡ್ಡಿ ಮತ್ತು ಅವರ ಸಿಬ್ಬಂದಿಯವರುಗಳು ದಾಳಿ ನಡೆಸಿ ದಸ್ತಗಿರಿ ಮಾಡಿರುತ್ತಾರೆ. ಆರೋಪಿಗಳಿಂದ ೧೫೩೦-೦೦ ರೂ ಹಣ ಒಂದು ಮಾರುತಿ ಕಾರ್, ೩ ಮೊಬೈಲ್ ಪೋನುಗಳು ಮತ್ತು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ
-
-ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ರಾಬರ್ಟ್ಸನ್ ಪೇಟೆ ಪೊಲೀಸ್ ಠಾಣೆಯ ಸರಹದ್ದು ಉದಯ ನಗರದ ವಾಸಿ ವೆಂಕಟರಾಮಪ್ಪ ರವರ ಮಗಳಾದ ಕುಮಾರಿ ದೇವಿ ರವರು ಮಾನಸಿಕ ಅಸ್ವಸ್ಥಳಾಗಿದ್ದು, ದಿನಾಂಕ: ೨೦-೦೪-೨೦೦೮ ಸಂಜೆ ೧೭೩೦ ಗಂಟೆಯಲ್ಲಿ ಮನೆ ಬಿಟ್ಟು ಹೊರಗೆ ಹೋದವಳು ಊರಿನ ಪಕ್ಕದ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುತ್ತಾಳೆ
-ವ್ಯಕ್ತಿ ಕಾಣೆ ಪ್ರಕರಣಗಳು:
-ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು:ಪ್ರಕರಣಗಳು:ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ಸುಲಿಗೆ: ಇಲ್ಲ


