ದಿನದ ಅಪರಾಧ ಪಕ್ಷಿನೋಟ ೨೦ನೇ ಮಾರ್ಚ್ ೨೦೦೮

March 20, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ:

  •   ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್. ವಿಷೇಶ ಉಪಕಾರಾಗೃಹ ವಸತಿಗೃಹಗಳ ಬಳಿ ಸಂಭವಿಸಿರುತ್ತದೆ. ದಿನಾಂಕ ೧೯-೦೩-೨೦೦೮ ರಂದು ೦೭೦೦ ಗಂಟೆ ಹಿಂದೆ ಯಾರೋ ಅಪರಚಿತ ಕಳ್ಳರು ವಿಶೇಷ ಉಪಕಾರಾಗೃಹಕ್ಕೆ ಸಂಬಂದಿಸಿದ ವಸತಿಗೃಹಗಳ ಬಾಗಿಲುಗಳು ಮತ್ತು ಕಿಟಕಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಘಟ್ಟಮಾದಮಂಗಲ ಗ್ರಾಮದಲ್ಲಿ ಸಂಭವಿಸಿರುತ್ತದೆ. ಘಟ್ಟಮಾದಮಂಗಲ ವಾಸಿ ಶ್ರೀಮತಿ. ಮಂಜುಳಮ್ಮ ಕೋಂ ಮುನಿಯಪ್ಪ(೩೧) ರವರು ದಿನಾಂಕ ೧೮-೦೩-೨೦೦೮ ರಂದು ಮದ್ಯಾಹ್ನ ೧೫೦೦ ಗಂಟೆ ಸಮಯದಲ್ಲಿ ತನ್ನ ಮನೆಗೆ ಬೀಗಿ ಹಾಕಿ ಕಿಟಕಿಯಲ್ಲಿ ಇಟ್ಟು ರಾತ್ರಿ ೧೯೦೦ ಗಂಟೆ ಸಮಯದಲ್ಲಿ ನೋಡಲಾಗಿ ಬೀಗದ ಕೈ ಇಲ್ಲದೆ ಇನ್ನೊಂದು ಬೀಗದಿಂದ ಬಾಗಿಲನ್ನು ತೆರೆದು ನೋಡಲಾಗಿ ಬೀರುವಿನಲ್ಲಿದ್ದ ಬಂಗಾರದೆ ಒಡವೆಗಳು ಮತ್ತು ರೂ. ೧೮೦೦/-ಗಳು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ೦೧

  •   ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೃತ್ಯವು ಕೆ.ಜಿ.ಎಫ್. ಹಳೆ ವಸತಗೃಹ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೯-೦೩-೨೦೦೮ ರಂದು ೧೩೪೫ ಗಂಟೆ ಸಮಯದಲ್ಲಿ ಶ್ರೀ. ಎನ್. ಶ್ರೀನಿವಾಸ ರೆಡ್ಡಿ ಬಿನ್ . ನಾರಾಯಣರೆಡ್ಡಿ ಎಂಬುವರು ತನ್ನ ವಾಹನ ಹೀರೋಹೊಂಸ ಸಂಖ್ಯೆ ಕೆಎ-೦೮-ಜೆ-೨೫೫೮ ಅನ್ನು ತನ್ನ ಮನೆಯ ಮುಂದೆ ನಿಲ್ಲಿಸಿ ಉಟ ಮುಗಿಸಿಕೊಂಡು ೧೪೩೦ ಗಂಟೆ ಬಂದು ನೋಡಲಾಗಿ ಯಾರೋ ಕಳ್ಳರು ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕ: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾದಾರಣ ಅಪಘಾತಕ್ಕೆ ಸಂಬಂದಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ನಾಗಕುಪ್ಪ ಗ್ರಾಮದ ಬಳಿ ಸಂಭವಿಸಿರುತ್ತದೆ. ಶ್ರೀ. ರಮೇಶ್, ವರದಿಕುಪ್ಪಂ ಗ್ರಾಮ, ರಾಮಕುಪ್ಪಂ ಮಂಡಲ, ಆಂಧ್ರಪ್ರದೇಶ ರವರು ದಿನಾಂಕ ೧೯-೦೩-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ನಾಗಕುಪ್ಪ ಗ್ರಾಮದ ಬಳಿ ಕೆ.ಜಿ.ಎಫ್ ರಾಮಕುಪ್ಪಂ ರಸ್ತೆಯಲ್ಲಿ ಟ್ರಾಕ್ಟರ್ ಸಂಖ್ಯೆ ಎಪಿ-೦೩-೫೩೬ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಪಕ್ಕದ ಅಳ್ಳಕ್ಕೆ ಉರಳಿಸಿ ಜಕ್ಕಂ ಪಡಿಸಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಕೃತ್ಯವು ಬಂಗಾರಪೇಟೆ ತಾಲೂಕು ಕರಡುಗೂರು ಗ್ರಾಮದಲ್ಲಿ ಸಂಭವಿಸಿರುತ್ತದೆ. ಬೆಂಗಳೂರು ವಾಸಿಗಳಾದ ರಾಮಚಂದ್ರರೆಡ್ಡಿ, ಗಾಯಿತ್ರಿ, ಲೋಕೇಶರೆಡ್ಡಿ ಮತ್ತು ಯರನಾಗನಹಳ್ಳಿ ವಾಸಿಗಳಾದ ವೆಂಕಟರಾಮರೆಡ್ಡಿ ಮತ್ತು ಲಕ್ಷ್ಮಮ್ಮ ರವರುಗಳು ಕರಡುಗೂರು ಗ್ರಾಮದ ವಾಸಿ ಯರಮ್ಮ ರೆಡ್ಡಿ ಬಿನ್ ಲೇಟ್ ನಾರಾಯಣರೆಡ್ಡಿ(೬೮) ರವರ ಮನೆಯ ಗೇಟ್ ತೆಗೆದುಕೊಂಡು ಅಕ್ರಮ ಕೂಟ ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಅತಿಕ್ರಮ ಪ್ರವೇಶ ಮಾಡಿ ಕೆಟ್ಟ ಮಾತುಗಳಿಂದ ಬೈದು, ಹೊರಗೆ ಬಂದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿ, ಮಹಡಿ ಮೇಲೆ ಇದ್ದ ಒಣಗಿಸಿದ ಹುಣಸೆ ಕಾಯಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಹಲ್ಲೆ: ಇಲ್ಲ

ಇತರೆ:

  •   ರಾಬಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣದ ದಾಖಲಾಗಿರುತ್ತದೆ. ಕೃತ್ಯವು ಕೆ.ಜಿ.ಎಪ್ ೪ನೇ ಬ್ಲಾಕ್, ಒಮರ್ ಬೇಕರಿ ಬಳಿ ಸಂಭವಿಸಿರುತ್ತದೆ. ದಿನಾಂಕ ೧೯-೦೩-೨೦೦೮ ರಂದು ಸಂಜೆ ೧೭೨೦ ಗಂಟೆ ಸಮಯದಲ್ಲಿ ಶ್ರೀ. ಮನ್ಸೂರ್ ಉಮ್ರಾನ್ ಬಿನ್ ಶಫೀವುಲ್ಲಾ ರವರ ಬೇಕರಿಯ ಮುಂದೆ ಚೆಲ್ಲಕುಮಾರ್, ಶಂಕರ್,ಅಪ್ಪು ಮತ್ತು ಜಯಕುಮಾರ್ ಎಂಬುವರುಗಳು ಜಗಳ ಮಾಡಿಕೊಳ್ಳುತ್ತಿದ್ದು, ಮನ್ಸೂರ್ ಉಮ್ರಾನ್ ರವರು ಬೇಕರಿ ಬಳಿ ಗಲಾಟೆ ಮಾಡುತ್ತಿದ್ದನ್ನು ಕೇಳಿದ್ದಕ್ಕೆ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯ ಸಾಗಾಣಿಕೆಗೆ ಸಂಬಂದಿಸಿದಂತೆ ಅಪರಾದ ಪ್ರಕರಣ ದಾಖಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ದೊಡ್ಡಪಂಡಂಹಳ್ಳಿ ಗ್ರಾಮದ ಬಳಿ ಸಂಭವಿಸಿರುತ್ತದೆ. ದಿನಾಂಕ ೨೦-೦೩-೨೦೦೮ ರಂದು ೦೫೪೫ ಗಂಟೆ ಸಮಯದಲ್ಲಿ ಪಾಂಡುರಂಗರಾವ್ ಮತ್ತು ಮನೋಜ್ ರಾವ್ ಎಂಬುವರುಗಳು ದೊಡ್ಡಪಂಡಂಹಳ್ಳಿ ಮತ್ತು ತೊಪ್ಪನಹಳ್ಳಿ ಗ್ರಾಮಗಳ ಮದ್ಯೆ ಅಕ್ರಮವಾಗಿ ಪರವಾನಿಗೆ ಇಲ್ಲದೆ ೩೫ ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಸಾಗಿಸುತ್ತಿದ್ದವರನ್ನು ದಸ್ತಗಿರಿ ಮಾಡಿ ಕೇಸು ದಾಖಲು ಮಾಡಲಾಗಿರುತ್ತದೆ.
  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯ ಸಾಗಾಣಿಕೆಗೆ ಸಂಬಂದಿಸಿದಂತೆ ಅಪರಾದ ಪ್ರಕರಣ ದಾಖಾಗಿರುತ್ತದೆ. ಕೃತ್ಯವು ಬಂಗಾರಪೇಟೆ ತಾಲೂಕು ಕದರಿನತ್ತಂ ಗ್ರಾಮ ನರಸಿಂಹಪುರ ಕ್ರಾಸ್ ಬಳಿ ಸಂಭವಿಸಿರುತ್ತದೆ. ದಿನಾಂಕ ೨೦-೦೩-೨೦೦೮ ರಂದು ಕೃಷ್ಣಪ್ಪ ಮತ್ತು ವೆಂಕೋಬರಾವ್ ಎಂಬುವರುಗಳು ಅಕ್ರಮವಾಗಿ ಪರವಾನಿಗೆ ಇಲ್ಲದೆ ೨೦ ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಸಾಗಿಸುತ್ತಿದ್ದವರನ್ನು ದಸ್ತಗಿರಿ ಮಾಡಿ ಕೇಸು ದಾಖಲು ಮಾಡಲಾಗಿರುತ್ತದೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಪೊಲೀಸ್ ಕುಸುಮಗಳ ಕಾರ್ಯಕ್ರಮದ ವಾರ್ಷಿಕ ಸಮಾರಂಭ

March 19, 2008
  •    ಕೆ.ಜಿ.ಎಫ್ ನಗರದ ಡಿ..ಆರ್. ಪೊಲೀಸ್ ವಸತಿಗೃಹಗಳ ಸಮುಚ್ಚಯದಲ್ಲಿ ಪೊಲೀಸ್ ಕುಸುಮಗಳ ಕಾರ್ಯಕ್ರಮವನ್ನು ಈಗ್ಗೆ ಸುಮಾರು ಒಂದು ವರ್ಷದಿಂದ ಅಂದರೆ ೨೦೦೭ ಮಾರ್ಚ್ ತಿಂಗಳಿಂದ ಪ್ರಾರಂಬಿಸಲಾಗಿತ್ತು. ಕಾರ್ಯಕ್ರಮವನ್ನು ಪ್ರತಿ ತಿಂಗಳ ೨ನೇ ಶನಿವಾರ ಮತ್ತು ರಾಷ್ಟ್ರೀಯ ಹಬ್ಬಗಳ ದಿನದಂದೂ ಸಹ ನಡೆಸಲಾಗುತ್ತಿದೆ.
  •   ಈ ಕಾರ್ಯಕ್ರಮದಲ್ಲಿ ಎಲ್.ಕೆ.ಜಿ. ಯಿಂದ ೧೦ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳ ಭಾಗವಹಿಸುತ್ತಿದ್ದು, ಅವರಿಗೆ ಪಠ್ಯಪುಸ್ತಕ ಜೊತೆಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿ ಅವರು ನೀಡುವ ಉತ್ತರದ ಆಧಾರದ ಮೇಲೆ ಅವರಿಗೆ ಅಂಕಗಳನ್ನು ನೀಡಿ ಬಹುಮಾನಗಳನ್ನು ನೀಡಲಾಗುತ್ತದೆ. ಜೊತೆಗೆ ಅವರಿಗೆ ಸಿಹಿ ತಿಂಡಿಯನ್ನು ನೀಡಲಾಗುತ್ತಿದೆ. ಮತ್ತು ವಿದ್ಯಾರ್ಥಿಗಳಿಂದ ಹಾಡು ಹೇಳುವುದು, ಹಾಸ್ಯ, ನೃತ್ಯ, ಗಾದೆ ಮುಂತಾದ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ನೈಪುಣ್ಯತೆಯನ್ನು ಹೊರ ತೆಗೆಯಲು ಮತ್ತು ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಹಾಗೂ ಎಲ್ಲಾ ಮಕ್ಕಳು ಭಯವಿಲ್ಲದೆ ಎದ್ದು ನಿಂತ್ತು ಧೈರ್ಯವಾಗಿ ಮಾತನಾಡುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮಕ್ಕಳ ಸ್ವಯಂ ಸ್ಪೂರ್ತಿಯೇ ಕಾರ್ಯಕ್ರಮದ ದಾರಿ ದೀಪವಾಗಿದೆ. ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಒಂದು ವೇದಿಕೆಯು ಅವಶ್ಯಕತೆ ಇದ್ದು ನಿಟ್ಟಿನಲ್ಲಿ ಪೊಲೀಸ್ ಕುಸುಮಗಳ ಕಾರ್ಯಕ್ರಮದ ಪ್ರಾರಂಭದಲ್ಲಿ 70-80 ಜನ ಇದ್ದ ಮಕ್ಕಳು ಈಗ್ ೭೦೮೦ ಜನ ಮಕ್ಕಳು ಕಾರ್ಯಕ್ರಮದಲ್ಲಿ ಬಂದು ಸೇರಿರುತ್ತಾರೆ. ಇದು ಮಕ್ಕಳಲ್ಲಿನ ಆಸಕ್ತಿಯನ್ನು ತೋರಿಸುತ್ತದೆ.
  •   ದಿನಾಂಕ: ೦೮-೦೩-೨೦೦೮ ರಂದು ಇಂತಹ ಕಾರ್ಯಕ್ರಮದ ಪ್ರಥಮ ವಾರ್ಷಿಕ ಸಮಾರಂಭವನ್ನು ಆಯೋಜಿಸಿದ್ದು, ಮಾನ್ಯ ಶ್ರೀ. ಎಂ.ವಿ. ಶೇಷನ್ ಪೊಲೀಸ್ ಉಪಾಧೀಕ್ಷಕರು, ಕೆ.ಜಿ.ಎಫ್ ರವರು ಉದ್ಘಾಟಿಸಿದ್ದು, ಅವರು ಮಾತನಾಡಿ ತಮ್ಮ ಪೊಲೀಸ್ ವಸತಿಗೃಹಗಳ ಸಮುಚ್ಚಿಯದಲ್ಲಿ ಮಕ್ಕಳ ಜ್ಞಾನಾರ್ಜನೆಗೆ ಸಹಾಯವಾಗುವ ಇಂತಹ ಕೆಲಸ ಮಾಡುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿರಲ್ಲದೆ, ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.
  •   ಗೃಹ ರಕ್ಷಕ ದಳದ ಸಮಾದೇಷ್ಟರಾದಂತಹ ಶ್ರೀ. ಪರುಶೋತ್ತಮ್ ರವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದು, ಮಕ್ಕಳ ಭವಿಷ್ಯಕ್ಕೆ ಅಗತ್ಯವಾಗಿರುವ ಮತ್ತು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡುವ ಇಂತಹ ಸಾಮಾಜಿಕ ಕಾರ್ಯಕ್ರಮ, ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವುದಕ್ಕೆ ನಿಜಕ್ಕೂ ಮೆಚ್ಚುವಂತಹದ್ದು ಎಂದು ಅಭಿಪ್ರಾಯಪಟ್ಟರು.
  •   ಈ ಕಾರ್ಯಕ್ರಮಕ್ಕೆ ಸಮಾರು ೧೦೦ ಮಕ್ಕಳು ಮತ್ತು ೩೦೦ ಜನ ಪೋಷಕರು ಭಾಗವಹಿಸಿದ್ದು ವಿಶೇಷವಾಗಿತ್ತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
  •   ಈ ಕಾರ್ಯಕ್ರಮದಲ್ಲಿ ಮಕ್ಕಳಿಂದಲೇ ನಿರೂಪಣೆ, ಪ್ರಾರ್ಥನೆ, ಸ್ವಾಗತ ಭಾಷಣ, ವಂದನಾರ್ಪಣೆ, ಅತಿಥಿಗಳಿಗೆ ಮಾಲಾರ್ಪಣೆ ಮುಂತಾದವುದೆಲ್ಲವನ್ನು ಮಕ್ಕಳಿಂದಲೇ ಮಾಡಿಸಲಾಗಿದ್ದು, ಕೊನೆಯಲ್ಲಿ ಮಕ್ಕಳಿಗೆ ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.

ದಿನದ ಅಪರಾಧ ಪಕ್ಷಿನೋಟ ೧೯ನೇ ಮಾರ್ಚ್ ೨೦೦೮

March 19, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ಪಟ್ಟಣದ ಸಿ.ರಹೀಂ ಕಾಂಪೌಂಡ್ ನಲ್ಲಿ ಸಂಭವಿಸಿರುತ್ತದೆ. ಶ್ರೀ. ಸೈಯದ್ ಖಾಲೀದ್ ಬಿನ್ ಸೈಯದಪ್ಸರ್, ಅಬ್ದುಲ್ ಅಜೀಜ್ ರಸ್ತೆ ರವರು ತನ್ನ ವಾಹನ ಬಜಾಜ್ ಪಲ್ಸ್‌‌‌ರ್ ಸಂಖ್ಯೆ ಕೆಎ-೦೮-ಜಿ-೩೩೨೮ ಅನ್ನು ದಿನಾಂಕ: ೧೭-೦೩-೨೦೦೮ ರಂದು ರಾತ್ರಿ ತನ್ನ ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದು, ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ವಾಹನದ ಬೆಲೆ ಸುಮಾರು ೪೫೦೦೦/-ಗಳು.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕ: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು, ಬಂಗಾರಪೇಟೆ-ಹುಲೆಬೆಲೆ ಮುಖ್ಯ ರಸ್ತೆ ಹನುಮಪ್ಪ ಎಂಬುವರ ಮನೆಯ ಹತ್ತಿರ ಸಂಭವಿಸಿರುತ್ತದೆ. ಹುಲೆಬಲೆ ಗ್ರಾಮದ ವಾಸಿ ಶ್ರೀ. ವಿ. ರಾಜು ಬಿನ್ ಲೇಟ್ ವೆಂಕಟೇಶಪ್ಪ(೨೫) ರವರು ತನ್ನ ದೊಡ್ಡಪ್ಪನ ಮಗಳಾದ ಶ್ರೀಮತಿ ಕಾಮಾಕ್ಷಾಮ್ಮ ಕೋಂ ಚಲಪತಿ(೨೫), ಅಜ್ಜಪ್ಪನಹಳ್ಳಿ ರವರನ್ನು ತನ್ನ ವಾಹನ ಟಿವಿಎಸ್ ಸಂಖ್ಯೆ ಕೆಎ-೦೧-ಹೆಚ್-೨೧೭೩ ನಲ್ಲಿ ಕುಳ್ಳರಿಸಿಕೊಂಡು ಹುಲೆಬೆಲೆಯಿಂದ ಬಂಗಾರಪೇಟೆ ಬರಲು ಹುಲೆಬೆಲೆಯಿಂದ ಸುಮಾರು ೧ ಕಿ.ಮೀ. ದೂರದಲ್ಲಿರುವ ಹನುಮಪ್ಪನ ಮನೆ ಸಮೀಪ ಬರುತ್ತಿರುವಾಗ ಅವರ ಹಿಂದೆ ಬರುತ್ತಿದ್ದ ಟ್ರಾಕ್ಟರ್ ಸಂಖ್ಯೆ ಕೆಎ-೩೬-ಟಿ-೩೦೮೭ ಟ್ರಾಲಿ ಸಂಖ್ಯೆ ಕೆಎ-೩೬-೩೦೮೮ರ ಚಾಲಕ ಟ್ರಾಕ್ಟರ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟಿ.ವಿ.ಎಸ್‌ಗೆ ಡಿಕ್ಕಿ ಹೊಡೆದು ರಾಜು ಮತ್ತು ಕಾಮಾಕ್ಷಾಮ್ಮ ಕೆಳೆಗೆ ಬಿದ್ದು ಕಾಮಾಕ್ಷಾಮ್ಮನ ಮೇಲೆ ಟ್ರಾಲಿ ಹರಿದು ತಲೆ ಜಜ್ಜಿ ಹೋಗಿ ಮೃತ ಪಟ್ಟಿರುತ್ತಾರೆ. ಟ್ರಾಕ್ಟರ್ ಚಾಲಕ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ.

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಕೃತ್ಯವು ಕೆ.ಜಿ.ಎಫ್ನ ಉರಿಗಾಂ ವೆಸೆಲಿನ್ ಬ್ಲಾಕ್ ನಲ್ಲಿ ಸಂಭವಿಸಿರುತ್ತದೆ. ದಿನಾಂ: -೦೩-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಮದಿಯಳಗನ್ ಬಿನ್ ಲೇಟ್ ವೆಡಿವೇಲ್, ವೆಸಲಿನ್ ಬ್ಲಾಕ್ ವಾಸಿ ಮತ್ತು ಅವರ ಮಾವ ಮುನಿಸ್ವಾಮಿ ಮತ್ತು ಅದೇ ಕೇರಿಯ ವಾಸಿಗಳಾದ ರಜನಿ, ರಾಜನ್ ಮತ್ತು ಚಂದರ್ ರವರುಗಳ ಮದ್ಯೆ ನೀರಿನ ಸಂರ್ಪಕ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದು, ಅದೇ ದಿನ ಸಂಜೆ ೧೬೩೦ ಗಂಟೆ ಸಮಯದಲ್ಲಿ ಮುನಿಸ್ವಾಮಿ ಮನೆಯ ಮುಂದೆ ನಿಂತ್ತಿರುವಾಗ ಸದರಿಯವರುಗಳು ಕೆಟ್ಟ ಮಾತುಗಳಿಂದ ಬೈದು, ಅಕ್ರಮತಡೆ ಮಾಡಿ, ಕೈಗಳಿಂದ ಹೊಡೆದಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧ ಪಕ್ಷಿನೋಟ ೧೮ನೇ ಮಾರ್ಚ್ ೨೦೦೮

March 18, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಪೆದ್ದಪಲ್ಲಿ ಗ್ರಾಮದಲ್ಲಿ ಈ ಕತ್ಯ ಸಂಭವಿಸಿರುತ್ತದೆ. ಪೆದ್ದಪಲ್ಲಿ ಗ್ರಾಮದ ವಾಸಿ ಶ್ರೀಮತಿ. ಸುನಂದಮ್ಮ ಕೋಂ ಬ್ಯಾಟಪ್ಪ(೪೦) ಎಂಬುವರು ಬ್ಯಾಟಪ್ಪರವರೊಂದಿಗೆ ೨೦ ವರ್ಷಗಳ ಹಿಂದೆ ಮದುವೆಯಾಗಿದ್ದು, ಬ್ಯಾಟಪ್ಪ ೧ ವರ್ಷದಿಂದ ಸುನಂದಮ್ಮನಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸುತ್ತಿದ್ದು, ದಿನಾಂಕ ೧೫-೦೩-೨೦೦೮ ರಂದು ಸುನಂದಮ್ಮ ರವರು ಅದೇ ಗ್ರಾಮದ ವಾಸಿ ಚಿಕ್ಕಮುನಿವೆಂಕಟಪ್ಪ ರವರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿರುವಾಗ ಬ್ಯಾಟಪ್ಪ ರವರು ಕೆಟ್ಟಮಾತುಗಳಿಂದ ಬೈದು ತಲೆ ಜುಟ್ಟನ್ನು ಹಿಡಿದು ಎಳೆದಾಡಿ ಕೆಳಕ್ಕೆ ಬೀಳಿಸಿ ದೊಣ್ಣೆಯಿಂದ ಹೊಡೆದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ:

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಕೃತ್ಯವು ಬಂಗಾರಪೇಟೆ ಪಟ್ಟಣದ ಶೇಷಾಚಲಂ ಮೊದಲಿಯಾರ್ ರಸ್ತೆಯಲ್ಲಿರುವ ಕಛೇರಿಯಲ್ಲಿ ಸಂಭವಿಸಿರುತ್ತದೆ. ದಿನಾಂ: ೧೭-೦೩-೨೦೦೮ ರಂದು ೧೬೩೦ ಗಂಟೆ ಸಮಯದಲ್ಲಿ ಈಶ್ವರಪ್ಪ ಬಿನ್ ಚಿಕ್ಕಚಿನ್ನಪ್ಪ, ಗ್ರಾಮ ಸಹಾಯಕ, ಅಮರಾವತಿ ನಗರ ಬಂಗಾರಪೇಟೆ ರವರು ಮತ್ತು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಶ್ರೀ. ಶಿವಣ್ಣ ರವರು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬಾಬು @ ಮನಿರಾಜು(೪೦) ಅತ್ತಿಗಿರಿ ಗ್ರಾಮ ಬಂಗಾರಪೇಟೆ ಎಂಬುವರು ವಿನಾಕಾರಣ ಜಗಳ ತೆಗೆದು ಕೈಗಳಿಂದ ಹೊಡೆದು, ಕಲ್ಲಿನಿಂದ ಹೊಡೆದಿದ್ದು, ಕೈ ಬೆರಳಿಗೆ ರಕ್ತಗಾಯಗಳಾಗಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧ ಪಕ್ಷಿನೋಟ ೧೭ನೇ ಮಾರ್ಚ್ ೨೦೦೮

March 17, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.ಬಂಗಾರಪೇಟೆ ತಾಲೂಕು ಕಾಮಸಮುದ್ರಂನ ಎ.ಕೆ. ಕಾಲೋನಿಯಲ್ಲಿ ಈ ಕತ್ಯ ಸಂಭವಿಸಿರುತ್ತದೆ. .ಕೆ. ಕಾಲೋನಿ, ಕಾಮಸಮುದ್ರಂ ವಾಸಿ ಶ್ರೀಮತಿ. ಲಕ್ಷ್ಮಿ(೨೫) ರವರನ್ನು ಅದೇ ಕಾಲೋನಿಯ ಮಂಜುನಾಥ್ ರವರೊಂದಿಗೆ ಒಂದೂವರೆ ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಸಮಯದಲ್ಲಿ ನಗದು ರೂ. ೫೦೦೦೦/- ಚಿನ್ನದ ಒಡವೆಗಳು, ದ್ವಿಚಕ್ರ ವಾಹನ ಮುಂತಾದವುಗಳನ್ನು ವರದಕ್ಷಿಣೆಯಾಗಿ ನೀಡಿದ್ದು, ಮತ್ತಷ್ಟು ಹಣ ತರುವಂತೆ ಮಂಜುನಾಥ, ನಾರಾಯಣಪ್ಪ ಮತ್ತು ಮುನಿಯಮ್ಮ ರವರುಗಳು ಎರಡನೇ ಮಗುವಿಗೆ ಗರ್ಭಿಣಿಯಾದಾಗ ಮತ್ತೆ ವರದಕ್ಷಿಣೆ ಕಿರುಕುಳ ನೀಡಿ ಹೊಡೆದು, ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾದಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ ಈ ಕೃತ್ಯವು ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆ ಹುದುಕುಳ ಗ್ರಾಮದ ವೃತದ ಬಳಿ ಸಂಭವಿಸಿರುತ್ತದೆ. ಶ್ರೀನಿವಾಸ್ ಬಿನ್ ನಾರಾಯಣಪ್ಪ(೧೯) ಕೋಡಿಕಣ್ಣೂರು ಗ್ರಾಮ ರವರು ತನ್ನ ಮೊಟಾರ್ ಸೈಕಲ್ ಸಂಖ್ಯೆ ಕೆಎ-೦೫-ಇಎಸ್-೬೭೪೭ ರಲ್ಲಿ ಕೋಲಾರ ಕಡೆಯಿಂದ ಬರುತ್ತಿದ್ದಾಗ ರವಿ ಬಿನ್ ತ್ಯಾಗರಾಜ್, ಕಾಮಸಮುದ್ರಂ ರವರು ತನ್ನ ವಾಹನ ಸಂಖ್ಯೆ ಕೆಎ-೦೧-ಇಜಿ-೧೪೪೯ ಅನ್ನು ಬಂಗಾರಪೇಟೆ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದರಿಂದ ರಕ್ತಗಾಯಗಳಾಗಿರುತ್ತವೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಪ್ ಉರಿಗಾಂ ಠಾಣೆಯ ಸರಹದ್ದು, ಕೋರಮಂಡಲ್, ಉರಿಗಾಂನಲ್ಲಿ ಸಂಭವಿಸಿರುತ್ತದೆ. ಮನೆ ಸಂಖ್ಯೆ ೭೦೮ ಹಳೇ ಅಸೈ ಆಫೀಸರ್ ವಸತಿಗೃಹಗಳ ವಾಸಿ ರಾಜಾರಾಂ ಬಿನ್ ಲೇಟ್ ಬಲರಾಮನ್(೫೦) ರವರು ದಿನಾಂಕ ೧೬-೦೩-೨೦೦೮ ರಂದು ೧೮೦೦ ಗಂಟೆಯಲ್ಲಿ ತನ್ನ ಮನೆಯಿಂದ ಹೊರಗೆ ಬಂದಾಗ ಅದೇ ವಸತಿಗೃಹಗಳ ವಾಸಿಗಳಾದ ಮಾಲಾ, ಶಿವಕುಮಾರ್ ಮತ್ತು ಜ್ಯೋತಿ ರವರುಗಳು ಉದ್ದೇಶಪೂರ್ವಕವಾಗಿ ನೀರಿನ ಪೈಪು ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಗಲ್ಲಾಪಟ್ಟಿಯನ್ನು ಹಡಿದು ಎಳೆದಾಡಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಧಿಸಿದಂತೆ ಅಪರಾದ ಪ್ರಕರಣವು ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಅತ್ತಿಗಿರಿ ಗ್ರಾಮ ಸರ್ವೆ ನಂ ೪೫/೦೨ರ ಜಮೀನಿನಲ್ಲಿ ಸಂಭವಿಸಿರುತ್ತದೆ. ಅತ್ತಿಗಿರಿ ಗ್ರಾಮದ ವಾಸಿ ವೆಂಕಟಪ್ಪ ಬಿನ್ ಮುನಿಸ್ವಾಮಿ ರವರು ದಿನಾಂಕ ೧೭-೦೩-೨೦೦೮ ರಂದು ೧೦೩೦ ಗಂಟೆ ಸಮಯದಲ್ಲಿ ಅತ್ತಿಗಿರಿ ಗ್ರಾಮದ ಸರ್ವೆ ನಂ ೪೫/೨ ರಲ್ಲಿ ಕೊಳವೆ ಬಾವಿ ಹಾಕಿಸಲು ಹೋದಾಗ ಅದೇ ಗ್ರಾಮದ ವಾಸಿಗಳಾದ ಮುನಿರಾಜು, ಚಂದ್ರಶೇಖರ್, ಮುನಿಯಪ್ಪ ಮತ್ತು ನಾರಾಯಣಪ್ಪ ರವರುಗಳು ಉದ್ದೇಶಪೂರ್ವಕವಾಗಿ ಅಕ್ರಮ ತಡೆ ಮಾಡಿ, ವೆಂಕಟಪ್ಪ ರವರಿಗೆ ತಲೆಯ ಹೊಡದು ರಕ್ತಗಾಯ ಪಡಿಸಿರುತ್ತಾರೆ. ಜಗಳ ಬಿಡಿಸಲು ಬಂದ ಸುರೇಶ್ ಮತ್ತು ಹರೀಶ್ ಎಂಬುವರುಗಳಿಗೆ ದೊಣ್ಣೆಯಿಂದ ಮತ್ತು ಇಟ್ಟಿಗೆ ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧ ಪಕ್ಷಿನೋಟ ೧೬ನೇ ಮಾರ್ಚ್ ೨೦೦೮

March 16, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೨

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಕೆ.ಜಿ.ಎಫ್ನಗರದ ಬಿ.ಜಿ.ಎಂ.ಎಲ್. ಸ್ವರ್ಣಭವನದ ಹತ್ತಿರ ಕೃತ್ಯವು ಸಂಭವಿಸಿರುತ್ತದೆ. ದಿನಾಂಕ ೧೫-೦೩-೨೦೦೮ ರಂದು ೧೧೦೦ ಗಂಟೆಯ ಸಮಯದಲ್ಲಿ ಶ್ರೀ. ರಂಗನ್ ಬಿನ್ ಲೇಟ್ ಚೆನ್ನಪ್ಪ, ಎಕ್ಸ್‌ಎಲ್ ಸೆಕ್ಯೂರಿಟಿ ಮ್ಯಾನೇಜರ್ರವರು ಸ್ವರ್ಣಭವನದಲ್ಲಿ ಇಂಚಾರ್ಜ್ಮ್ಯಾನೇಜರ್ಸೈಯದ್ ಮಹ್ಮದ್ ರವರನ್ನು ಬೇಟಿ ಮಾಡಿಕೊಂಡು ಮುಖ್ಯದ್ವಾರದ ಹೊರಭಾಗಿಲಿನಲ್ಲಿ ನಿಂತಿದ್ದಾಗ ಗೋಪಿನಾಥ್ ಬಿನ್ ಲೇಟ್ ರಾಜಗೋಪಾಲ್, ಉರಿಗಾಂ ಎಂಬವರು ಕೆಟ್ಟ ಮಾತುಗಳಿಂದ ಬೈದು, ರಂಗನ್ ರವರ ಕುತ್ತಿಗೆಯ ಪಟ್ಟಿಯನ್ನು ಹಿಡಿದುಕೊಂಡು ತನ್ನ ಬಳಿ ಇದ್ದ ಚಾಕುವನ್ನು ತೋರಿಸಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಬಂಗಾರಪೇಟೆ ಪಟ್ಟಣದ ಶಿವಪ್ಪ ಕಾಂಪೌಂಡ್, ಬೋವಿನಗರದಲ್ಲಿ ಕೃತ್ಯವು ಸಂಭವಿಸಿರುತ್ತದೆ. ದಿನಾಂಕ ೧೪-೦೩-೨೦೦೮ ರಂದು ೦೭೦೦ ಗಂಟೆಯ ಸಮಯದಲ್ಲಿ ಶಿವಪ್ಪ ಕಾಂಪೌಂಡ್ ವಾಸಿ ಜಗನ್ನಾಥ್(೩೦) ಎಂಬುವರು ತನ್ನ ಪತ್ನಿ ಶಾಂತಮ್ಮನಿಗೆ ಮನೆ ಕೆಲಸಗಳಿಗೆ ಹೋಗಬೇಡವೆಂಬ ವಿಚಾರದಲ್ಲಿ ಜಗಳ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಯಾವುದೊ ವಿಷಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧ ಪಕ್ಷಿನೋಟ ೧೫ನೇ ಮಾರ್ಚ್ ೨೦೦೮

March 15, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್. ಗೌತಮ್ ನಗರದ ೮ನೇ ಅಡ್ಡ ರಸ್ತೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೬-೦೨-೨೦೦೮ ರಂದು ೦೯೩೦ ಗಂಟೆ ಸಮಯದಲ್ಲಿ ಗೌತಮ್ ನಗರ ವಾಸಿ ಕುಮಾರಿ ಮನೋಹರಿ ಎಂಬುವರು ತನ್ನ ಮನೆಯಿಂದ ಎಂದಿನಂತೆ ಗೋಣಮಾಕನಹಳ್ಳಿ ಸರ್ಕಾರಿ ಹೈಸ್ಕೂಲ್‌ಗೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ ೨೦೩೦ ಗಂಟೆಗೆ ಮನೆಗೆ ಬಂದಾಗ ತನ್ನ ಅಕ್ಕ ವಸಂತ ಮನೆಯಲ್ಲಿ ಇಟ್ಟಿದ್ದ ರೂ. ೪೮೦೦೦/- ಬೆಲೆ ಬಾಳುವ ಚಿನ್ನದ ಕತ್ತಿನ ಚೈನ್ ಕಾಣೆಯಾಗಿದೆ ಎಂದು ತಿಳಿಸಿದ್ದು, ಮನೋಹರಿ ಮನೆಯಲ್ಲಿ ಎಷ್ಟು ಹುಡುಕಾಡಿದರೂ ಚೈನು ಸಿಕ್ಕಿರುವುದಿಲ್ಲ. ತನ್ನ ಮನೆಯಲ್ಲಿ ಮನೆ ಕೆಲಸ ಮಾಡುತ್ತಿರುವ ಶ್ರೀಮತಿ ಕವಿತ ಎಂಬುವರು ಚೈನನ್ನು ಕದ್ದಿರಬಹುದೆಂದು ಸಂಶಯ ಪಟ್ಟು ಕ್ರಮ ಜರುಗಿಸಲು ದೂರು ನೀಡಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ೦೧

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮೋಸ ವಂಚನೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಬೆತ್ತಲಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಬೆತ್ತಲಹಳ್ಳಿ ಗ್ರಾಮದ ವಾಸಿ ಶ್ರೀರಾಮ ಬಿನ್ ಕೃಷ್ಣಪ್ಪ ಎಂಬುವರಿಗೂ ಮತ್ತು ಅದೇ ಗ್ರಾಮದ ವಾಸಿಗಳಾದ ನಾಗಭೂಷಣ ಮತ್ತು ಶಿವರಾಜ್ ಎಂಬುವರುಗಳ ಮದ್ಯೆ ಜಮೀನಿನ ಬದು ವಿಚಾರದಲ್ಲಿ ಮೊದಲಿನಿಂದಲೂ ವೈಷಮ್ಯಗಳಿದ್ದು ದಿನಾಂಕ ೦೯-೦೩-೨೦೦೮ ರಂದು ೦೭೦೦ ಗಂಟೆ ಸಮಯದಲ್ಲಿ ಶ್ರೀರಾಮ ರವರ ರೇಷ್ಮೆ ಬೆಳೆಗೆ ನಾಗಭೂಷಣ ಮತ್ತು ಶಿವರಾಜ್ ರವರುಗಳು ಯಾವುದೋ ಕ್ರಿಮನಾಶಕ ಔಷದಿಯನ್ನು ಹಾಕಿದ್ದು, ರೇಷ್ಮೆ ಸೊಪ್ಪನ್ನು ಹುಳುಗಳನ್ನ ತಿಂದು ಸಾವನ್ನಪ್ಪಿರುತ್ತವೆ. ಇದರಿಂದ ಸುಮಾರು ೧೫೦೦೦/-ಗಳು ನಷ್ಟವಾಗಿರುತ್ತದೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿ ಗಲಾಟೆ ಮಾಡಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಬಡಮಾಕನಹಳ್ಳಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೪-೦೩-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಬಡಮಾಕನಹಳ್ಳಿ ಗ್ರಾಮದ ವಾಸಿ ಶ್ರೀಮತಿ ವೆಂಕಟಲಕ್ಷ್ಮಮ್ಮ ಕೋಂ ಪ್ರಸಾದ್‌ಪ್ಪ(೫೦) ಎಂಬುವರು ಒಬ್ಬರೆ ಮನೆಯಲ್ಲಿರುವಾಗ ನೀಲಕಂಠಪುರದ ಗ್ರಾಮದ ಕೃಷ್ಣಪ್ಪ, ಮುನಿಯಪ್ಪ ಮತ್ತು ತಿಮ್ಮಸಂದ್ರ ಗ್ರಾಮದ ವೆಂಕಟೇಶಪ್ಪ ರವರುಗಳು ವೆಂಕಟಲಕ್ಷ್ಮಮ್ಮ ರವರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಆಕೆಯ ಗಂಡನನ್ನು ಕೆಟ್ಟ ಮಾತುಗಳಿಂದ ಬೈದು, ಆಕೆಯನ್ನು ಕೆಳಕ್ಕೆ ತಳ್ಳಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ, ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ಉರಿಗಾಂ ಇನ್‌ಪ್ಯಾಂಟ್ ಜೀಸಸ್ ಚೆರ್ಚ್ ಹತ್ತಿರ ಮನೆ ಸಂಖ್ಯೆ ೪೦ ರಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಮನೆ ಸಂಖ್ಯೆ ೪೦ರ ವಾಸಿ ಕು: ರಾಗಿಣಿ ಬಿನ್ ಜಯಪಾಲ್(೨೩) ಎಂಬುವರಿಗೆ ಅನೇಕ ಬಾರಿ ಹೊಟ್ಟೆ ನೋವು ಬರುತ್ತಿದ್ದು, ದಿನಾಂಕ ೧೪-೦೩-೨೦೦೮ ೨೦೦೦ ಯಿಂದ ೨೧೦೦ರ ಮದ್ಯೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಾರಿ ಹೊಟ್ಟೆ ನೋವು ಬಂದಿದ್ದು, ನೋವು ತಳಲಾರದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನ ಮನೆಯ ಸ್ನಾನದ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ.

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆಗೆ ಸಂಬಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೃತ್ಯವು ಬಂಗಾರಪೇಟೆಯ ರಾಮಕೃಷ್ಣ ಕಾಲೋನಿಯಲ್ಲಿ ಸಂಭವಿಸಿರುತ್ತದೆ. ದಿನಾಂಕ ೦೬-೦೩-೨೦೦೮ ರಂದು ೦೯೦೦ ಗಂಟೆ ಸಮಯದಲ್ಲಿ ರಾಮಕೃಷ್ಣ ಕಾಲೋನಿ ವಾಸಿ ಶ್ರೀ. ನಾರಾಯಸ್ವಾಮಿ ಎಂಬುವರ ಮಗಳಾದ ಕು: ಪಿ.ಎನ್ ಜ್ಯೋತಿ (೨೨) ಎಂಬುವರು ತನ್ನ ಮನೆಯಿಂದ ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧ ಪಕ್ಷಿನೋಟ ೧೪ನೇ ಮಾರ್ಚ್ ೨೦೦೮

March 14, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೪-೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ಬೆಮೆಲ್ ನಗರ ಪೊಲೀಸ್ ಠಾಣೆಯ ಸರಹದ್ದು ಡಿ.ಕೆ. ಹಳ್ಳಿ ಮುಖ್ಯ ರಸ್ತೆಯಲ್ಲಿರುವ ಗಣೇಶನ ದೇವಸ್ಥಾನದಲ್ಲಿ ಕೃತ್ಯವು ಸಂಭವಿಸಿರುತ್ತದೆ. ದಿನಾಂಕ ೧೩-೦೩-೨೦೦೮ ರಂದು ರಾತ್ರಿ ಯಾರೋ ಕಳ್ಳರು ಬೆಮೆಲ್ನಗರದ ಡಿ.ಕೆ.ಯಳ್ಳಿ ರಸ್ತೆಯಲ್ಲಿರುವ ಮಹಾ ಗಣಪತಿ ದೇವಸ್ಥಾನದ ಉತ್ತರದ ಕಡೆಯಿರುವ ಬಾಗಿಲಿನ ಚಿಲಕವನ್ನು ಯಾವುದೋ ಆಯುಧದಿಂದ ಕಿತ್ತು ದೇವರುಗಳ ಮೇಲಿದ್ದ ಬಂಗಾರದ ಮತ್ತು ಬೆಳ್ಳಿಯ ಒಡವೆಗಳು ಹಾಗೂ ನಗದು ೪೯೫೦/- ಒಟ್ಟು ೭೪೯೦೦/- ಬೆಲೆಬಾಳುವ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯ ಸರಹದ್ದು ತಹಸೀಲ್ದಾರ್ ಕಛೇರಿಯಲ್ಲಿ ಕೃತ್ಯವು ಸಂಭವಿಸಿರುತ್ತದೆ. ದಿನಾಂಕ ೧೩-೦೩-೨೦೦೮ ರಂದು ಮದ್ಯಾಹ್ನ ೧೩೨೦ ಗಂಟೆಯ ಸಮಯದಲ್ಲಿ ಶ್ರೀಮತಿ. ದಾಕ್ಷಾಯಿಣಿ, ವಿಶೇಷ ತಹಸೀಲ್ದಾರ್ರವರು ಕಛೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ಸತ್ಯನಾರಾಯಣ ಮತ್ತು ಸ್ವಾಮಪ್ಪ ಎಂಬುವರುಗಳು ಕಛೇರಿಗೆ ಬಂದು ಉದ್ದೇಶ ಪೂರ್ವಕವಾಗಿ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗ ನಾಪತ್ತೆಗೆ ಸಂಬಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೃತ್ಯವು ಮಾಗೊಂದಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೧-೦೩-೨೦೦೮ ರಂದು ೧೮೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದ ವಾಸಿ ಶ್ರೀ. ಶ್ರೀರಾಮರೆಡ್ಡಿ ರವರ ಮಗನಾದ ಶ್ರೀ. ದಿನೇಶ್ (೧೪) ಎಂಬುವನು ಬಂಗಾರಪೇಟೆಗೆ ಒಂದು ಆಟೋ ರಿಕ್ಷಾದಲ್ಲಿ ಹೋದವನು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧ ಪಕ್ಷಿನೋಟ ೧೩ನೇ ಮಾರ್ಚ್ ೨೦೦೮

March 13, 2008

.

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ೦೧

  • ಕಾಮಸಮುದ್ರಂ ಪೊಲೀಸ್ ಠಾಣೆಯ ಸರಹದ್ದು ದೊಡ್ಡೇರಿ ಹೊಸಮನೆಗಳು ಗ್ರಾಮದ ಶ್ರೀಮತಿ ಕೆ ಆರ್‍. ಶಿಲ್ಪ ಕೋಂ ವೇಲು ೧೯ ವರ್ಷ ಎಂಬುವರನ್ನು ವೇಲು ಎಂಬುವನಿಗೆ  ಮದುವೆ ಮಾಡಿಕೊಟ್ಟಿದ್ದು  ಈಗ್ಗೆ ಸುಮಾರು ತಿಂಗಳಿಂದ ಗಂಡ, ಅತ್ತೆ ಮತ್ತು ಮಾವ ಸೇರಿಕೊಂಡು ಬೇರೆ ಕಡೆ ಮದುವೆ ಮಾಡಿಕೊಂಡಿದ್ದರೆ ನಮಗೆ ೧೨  ಸವರನ್ ಬಂಗಾರದ ಒಡವೆಗಳು ಒಂದು ಗಾಡಿ  ಕೊಡುತ್ತಿದ್ದರು ನಿನ್ನನ್ನು ಮದುವೆ ಮಾಡಿಕೊಂಡು  ನಮಗೆ ಏನು ಸಿಗಲಿಲ್ಲ  ಎಂದು ಆಗಾಗ ಹೊಡೆದು ಕೆಟ್ಟ ಮಾತುಗಳಿಂದ ಬೈದು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದು ದಿನಾಂಕ ೧೧.೦೩.೨೦೦೮ ರಂದು ಸಂಜೆ ಸುಮಾರು .೩೦ ಗಂಟೆಯಲ್ಲಿ ತನ್ನ ತೋಟದ ಗುಡಿಸಿಲಲ್ಲಿ ಯಾವುದೋ ವಿಷವನ್ನು ಸೇವಿಸಿ ಅತ್ಮಹತ್ಯ ಮಾಡಿಕೊಂಡು ಮೃತಪಟ್ಟಿರುತ್ತಾಳೆ.

 ರಸ್ತೆ ಅಪಘಾತಗಳು: ಇಲ್ಲ-

ಮಾರಣಾಂತಿಕ: ಇಲ್ಲ-

ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

  • ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯ ಸರಹದ್ದು ಟೇಲಿಪೋನ್ ಎಕ್ಸ್ ಚೆಂಜ್ ಸವೀಪ ಕಳವು ಮಾಡಲು ಪ್ರಯತ್ನಸುತ್ತಿದ್ದ  ಫರೋಕ್ ಬಿನ್ ಮಹೀದ್ದಿನ್ ೪೪ ವರ್ಷ ಭಾರತಿ ಪುರಂ ಆಂಡ್ರಸನ್ ಪೇಟೆ ಎಂಬುವರನ್ನು  ದಿನಾಂಕ ೧೨/೧೩.೦೩.೨೦೦೮ ರಂದು ರಾತ್ರಿ ೧೨.೩೦ ಗಂಟೆಯ ಸಮಯದಲ್ಲಿ ಶ್ರೀ. ಟಿ ಕೃಷ್ಣಪ್ಪ, ಎಎಸ್ ಮತ್ತು ಮುಖ್ಯೆ ಪೇದೆ ೩೫ ರವರು ರಾತ್ರಿ ಗಸ್ತು ಮಾಡುವಾಗ ಟೆಲಿಪೋನ್ ಎಕ್ಸ್ ಚೆಂಜ್ ಬಳಿ ಕಳವು ಮಾಡುವ ಉದ್ದೇಶದಿಂದ ಹೊಂಚುಹಾಕುತ್ತಿದ್ದು, ಇವರನ್ನು ನೋಡಿ ಓಡಲು ಪ್ರಯತ್ನಿಸಿದಾಗ ಹಿಡಿದು ಪ್ರಶ್ನಿಸಲಾಗಿ ಸರಿಯಾದ ಉತ್ತರ ನೀಡದೇ ಕಾರಣ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಕಳುಹಿಸಿರುತ್ತಾರೆ. 

  ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  • ಮಾರಿಕುಪ್ಪಂ ಪೊಲೀಸ್ ಠಾಣೆಯ ಸರಹದ್ದು  ಪ್ರಾಂಕ್ ಆಂಡ್ ಕೋ ಮಾರಿಕುಪ್ಪಂನ ವಾಸಿ ಸೌಂದರ್ರಾಜ್ ದಿನಾಂಕ ೧೨.೦೨.೨೦೦೮ ರಂದು ರಾತ್ರಿ ತನ್ನ ಮನೆಯಲ್ಲಿ ಕುಡಿದು ಅಮಲಿನಲ್ಲಿ ಮಲಗಿದ್ದಾಗ ಆಕಸ್ಮಿಕ ಬೆಂಕಿ ದೀಪ ಕೆಳಗೆ ಬಿದ್ದು ಕೈಗಳಿಗೆ ಮತ್ತು ಬಟ್ಟೆಗಳಿಗೆ ಬೆಂಕಿ ಅಂಟೆಕೊಂಡುಬೆಂಗಳೂರಿನ ವಿಕ್ಟೋರಿಯ ಅಸ್ಪತ್ರೆಯಲ್ಲಿ  ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ ೧೯.೦೨.೨೦೦೮ ರಂದು ಮೃತಪಟ್ಟಿರುತ್ತಾರೆಂದು ವರದಿಯ ಮೇರೆಗೆ  ದಿನಾಂಕ ೧೩.೦೩.೨೦೦೮ ರಂದು ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಕಾಣೆ ಪ್ರಕರಣಗಳು: ೦೨

  • ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯ ಸರಹದ್ದು ಗೊಲ್ಲಹಳ್ಳಿ ಗ್ರಾಮ ಶ್ರೀಮತಿ ಸುಗುಣ ಕೋಂ ಶ್ರೀನಿವಾಸ ೩೮ ವರ್ಷ, ಎಂಬುವಳ ಮಗಳಾದ ಕುಮಾರಿ ರಮ್ಯಾ ಬಿನ್. ಶ್ರೀನಿವಾಸ, ೧೫ ವಷð ೧೦ ನೇ ತರಗತಿ ವ್ಯಾಸಂಗ ಎಂಬುವಳು ತನ್ನ ಮನೆಯಿಂದ ಹೊರಗೆ ಹೋದವಳು ಮತ್ತೆ ಮನೆಗೆ ವಾಪಸ್ಸು ಬಂದಿರುವುದಿಲ್ಲವೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
  • ಬಂಗಾರುಪೇಟೆ ಪೊಲೀಸ್ ಠಾಣೆಯ ಸರಹದ್ದು ಮರಗಲ್  ಗ್ರಾಮದ  ಶ್ರೀ ರಾಜಣ್ಣ ಬಿನ್ ಮುನಿಸ್ವಾವಿ ೪೫ ವರ್ಷ, ಎಂಬುವರ ಮಗಳಾದ ಕುಮಾರಿ  ಸ್ವರ್ಣರೇಖಾ ಎಂಬುವಳು ವಿಜಯನಗರ ಬಂಗಾರಪೇಟೆಯ ತನ್ನ ತಮ್ಮನಾದ ಆನಂದ ಎಂಬುವರ ಮನೆಯಲ್ಲಿ ವಾಸವಾಗಿದ್ದು  ದಿನಾಂಕ ೧೨.೦೩.೨೦೦೮ ರಂದು ರಾತ್ರಿ ೧೨. ಗಂಟೆಯ ಸಮಯದಲ್ಲಿ ಮನೆಯಿಂದ ಹೊರಗೆ ಹೋದವಳು ಮತ್ತೆ ಮನೆಗೆ ವಾಪಸ್ಸು ಬಂದಿರುವುದಿಲ್ಲವೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ-ಪ್ರಕರಣಗಳು: ತಿಳಿದು ಬಂದಿಲ್ಲ-

ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೨ ನೇ ಮಾರ್ಚ್ ೦೮

March 13, 2008

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ೦೧

  •   ಮಾರಿಕುಪ್ಪಮ ಪೊಲೀಸ್ ಠಾಣೆಯ ಸರಹದ್ದಿನ ಘಟ್ಟಮಾದಮಂಗಲ ಗ್ರಾಮದ ಶ್ರೀಮತಿ ಪಾಪಮ್ಮ ಕೋಂ ರಾಮಪ್ಪ  ಎಂಬುರ ಮೊಮ್ಮಗಳಾದ ಕುಮಾರಿ ಗೀತಾಂಜಲಿ  ಎಂಬ ಹುಡುಗಿ ದಿನಾಂಕ: ೦೯.೦೩.೨೦೦೮ ರಂದು ಮದ್ಯಾಹ್ನ .೦೦ ಗಂಟೆಯ ಸಮಯದಲ್ಲಿ ಹಸ್ಸುಗಳನ್ನು ಕಾಡಿನ ಕಲ್ಲು ಗುಡ್ಡೆಗಳಲ್ಲಿ ಮೇಯಿಸುವಾಗ ಆದೇ ಗ್ರಾಮದ ವಾಸಿ ವೆಂಕಟರಾಮಪ್ಪ ಎಂಬುನು ಹಠ ಸಂಭೋಗ ಮಾಡಿರುತ್ತಾನೆಂಬ  ಪ್ರಕರಣ  ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ.

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ 

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.