ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮೋಸ / ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈಗ್ಗೆ ಸುಮಾರು ಎರಡು ವರ್ಷಗಳ ಹಿಂದೆ ಬಂಗಾರಪೇಟೆ ತಾಲೂಕು ವಿರುಪಾಕ್ಷಪುರ ಗ್ರಾಮದ ವಾಸಿ ಶಂಕರ ಎಂಬುವರು ಬೆಂಗಳುರಿನ ಕೆ.ಆರ್.ಪುರಂ, ಚಿಕ್ಕದೇವಸಂದ್ರದ ವಾಸಿ ಶ್ರೀ ಮುನಿಯಪ್ಪ (೩೩) ಬಳಿ ಕಾರಿನ ಚಾಲಕ ಕೆಲಸ ಮಾಡಿಕೊಂಡಿದ್ದು ನಂತರ ಕೆಲಸ ಬಿಟ್ಟು ಮುನಿಯಪ್ಪ ಜೊತೆ ಸಂಪರ್ಕವಿಟ್ಟುಕೊಂಡಿದ್ದು ಜಮೀನು ಕೊಡಿಸುವುದಾಗಿ ಶಂಕರ ರವರ ಗ್ರಾಮಕ್ಕೆ ಬರಮಾಡಿಕೊಂಡು ತನ್ನ ಜಮೀನು ಮಾರಾಟ ಮಾಡುವುದಾಗಿ ನಂಬಿಸಿ ದಿನಾಂಕ: 25.03.2008 ರಂದು ಕಮ್ಮಸಂದ್ರ ಗ್ರಾಮಕ್ಕೆ ಬರಮಾಡಿಕೊಂಡು ಶಂಕರ ರವರ ಸ್ನೇಹಿತ ಮಂಜು @ ದನಶೇಖರ್ ರವರ ಜೊತೆ ಬಂದು ಪಿರ್ಯಾದಿಗೆ ಜಮೀನಿನ ದಾಖಲಾತಿಗಳು ಇನ್ನೂ ತಯಾರಾಗಿಲ್ಲ ನೀವು ನನ್ನ ಸ್ನೇಹಿತನ ಬಳಿ ಬಂಗಾರದ ನಾಣ್ಯಗಳಿವೆ ಕೊಡಿಸುತ್ತೇನೆ ನಾಳೆ 3 ಲಕ್ಷ ಹಣವನ್ನು ತನ್ನಿ ಎಂತ ಹೇಳಿದ್ದು, ದಿನಾಂಕ:26.03.2008 ರಂದು ಮದ್ಯಾಹ್ನ 2.00 ಗಂಟೆಗೆ ಕಮ್ಮಸಂದ್ರ ಗ್ರಾಮದ ಬಳಿ ಬರಲಾಗಿ ಶಂಕರ ರವರು ಸೀಮಲಬಂಡಹಳ್ಳಿ ಗ್ರಾಮದ ಹೊರವಲಯಕ್ಕೆ ಕರೆದುಕೊಂಡು ಹೋಗಿದ್ದು ಆರೋಪಿಗಳು ಪಿರ್ಯಾದಿಗೆ ಜಮೀನು ಕೊಡಿಸುವ ನೆಪದಲ್ಲಿ ಮತ್ತು ಚಿನ್ನದ ನಾಣ್ಯಗಳನ್ನು ಕೊಡಿಸುವುದಾಗಿ ಅಮಿಷ ತೋರಿಸಿ 3,00,000/-ರೂಗಳನ್ನು ತೆಗೆದುಕೊಂಡು ಮೋಸ ಮಾಡಿರುತ್ತಾರೆ ಇತ್ಯಾದಿ. ಆದ್ದರಿಂದ ಈ ಪ್ರಥಮ ವರ್ತಮಾನ ವರದಿ.
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಪಿ.ಎಸ್.ಐ ಬಂಗಾರಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತ ಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಬಂಗಾರಪೇಟೆ ತಾಲೂಕು ಸೂಲಿಕುಂಟೆ ಗ್ರಾಮದ ಬಳಿ ಹಿಣಸೇಮರದ ಕೆಳಗೆ ಹಣವನ್ನು ಪಣಕ್ಕಿಟ್ಟು ಅಂದರ್ ಬಾಹರ್ ಆಡುತ್ತಿದ್ದ ಅದೇ ಗ್ರಾಮದ ಮಾರ್ಕೊಂಡಪ್ಪ, ನಾರಾಯಣಪ್ಪ ಮತ್ತು ಇತರೆ ೬ ಜನರನ್ನು ಮತ್ತು ಪಣಕ್ಕಿಟ್ಟಿದ್ದ ಹಣ ರೂ ೧೦೨೦/- ಗಳನ್ನು ಮೋಟಾರು ವಾಹನವನ್ನು ವಶಕ್ಕೆ ಪಡೆದಿಕೊಂಡಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


