ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಡಿಸೆಂಬರ್ ೦೭

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೧೨-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕ: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೨-೨೦೦೭ ರಂದು ೨೩೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಕೋರಮಂಡಲ್ ವಾಸಿ ಜಾಕ್ ಹರೀಶ್ (೧೯) ಬಿನ್ ಕುಮಾರ್ ಎಂಬುವರು ತಮ್ಮ ವಾಹನ ಸಂಖ್ಯೆ ಟಿ.ಎನ್-೨೦-ಎಡಿ-೧೨೧೨ ರಲ್ಲಿ ಕೆ.ಜಿ.ಎಫ್-ಬಂಗಾರಪೇಟೆ ಮುಖ್ಯ ರಸ್ತೆ ಪುಡ್ ಗೋಡನ್ ಹತ್ತಿರ ಹೋಗುತ್ತಿದ್ದರು. ಆ ಸಮಯದಲ್ಲಿ ಜಾಕ್ ಹರೀಶ್ ತಮ್ಮ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಯ ತಪ್ಪಿ ವಾಹನದಿಂದ ಕೆಳಗೆ ಬಿದ್ದು, ಹಣೆಯ ಮೇಲೆ ಗಾಯವಾಗಿ ಪ್ರಜ್ಞೆತಪ್ಪಿರುತ್ತಾರೆ ಇತ್ಯಾದಿ.
  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೨-೨೦೦೭ ರಂದು ೦೮೩೦ ಗಂಟೆ ಸಮಯದಲ್ಲಿ ಎಂದಿನಂತೆ ಬಂಗಾರಪೇಟೆ ತಾಲೂಕು ಘಟ್ಟಕಾಮದೇನಹಳ್ಳಿ ಗ್ರಾಮದ ವಾಸಿ ಶ್ರೀಮತಿ ನಾಗಮ್ಮ (೭೦) ಎಂಬುವರು ಕೆ.ಜಿ.ಎಫ್.ನ ಗಾಂಧಿ ವೃತ್ತದ ಬಳಿ ಇರುವ ದರ್ಭಾರ್ ಹೋಟೆಲ್ ಬಳಿ ಬಿಕ್ಷೆ ಬೇಡುತ್ತಿದ್ದರು. ಆ ಸಮಯದಲ್ಲಿ ಅಪರಿಚಿತ ಆಟೋ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶ್ರೀಮತಿ ನಾಗಮ್ಮನಿಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಹೋಗಿರುತ್ತಾರೆ. ಇದರ ಪರಿಣಾಮ ನಾಗಮ್ಮನ ಬಲ ಕಲಿನ ಮುಳೆಗೆ ಬಲವಾದ ಗಾಯವಾಗಿರುತ್ತದೆ ಇತ್ಯಾದಿ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೪

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೨-೨೦೦೭ ರಂದು ೦೯೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಗಂಗಾಪುರ ಗ್ರಾಮದ ವಾಸಿ ಶ್ರೀಮತಿ ಮುನಿಯಮ್ಮ ಎಂಬುವರು ಹುಲ್ಲು ತರಲು ತನ್ನ ಜಮೀನಿಗೆ ಹೋಗಿದ್ದರು. ಆ ಸಮಯದಲ್ಲಿ ತಮ್ಮ ಜಮೀನಿನಲ್ಲಿರುವ ಹಾಳು ಬಿದ್ದಿರುವ ಬಾವಿಯಲ್ಲಿ ಯಾರೋ ಒಬ್ಬ ಹೆಂಗಸಿನ ಮೃತ ದೇಹವು ತೇಲುತ್ತಿರುವುದನ್ನು ನೋಡಿದರು. ಶ್ರೀಮತಿ ಮುನಿಯಮ್ಮ ತನ್ನ ಗಂಡನ ಅಣ್ಣನಾದ ವೆಂಕಟೇಶ್ ಎಂಬುವರಿಗೆ ವಿಷಯ ತಿಳಿಸಿದರು. ವೆಂಕಟೇಶ್ ರವರು ಬಾವಿ ಹತ್ತಿರ ಬಂದು ನೋಡಲಾಗಿ ವಿಷಯ ನಿಜವಾಗಿದ್ದು ಮೃತಳು ದಳವಾಯಿಹೊಸಹಳ್ಳಿ ಗ್ರಾಮದ ವಾಸಿ ವಸಂತ (೩೫) ಬಿನ್ ಚಿನ್ನಬ್ಬಯ್ಯ ಎಂಬುವುದು ತಿಳಿದು ಬಂದಿರುತ್ತದೆ ಇತ್ಯಾದಿ.
  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೨-೨೦೦೭ ರಂದು ೧೪೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು, ಬೆಮೆಲ್ ನಗರದ, ಕಾವೇರಿನಗರ ವಾಸಿ ಶ್ರೀ ಎಸ್..ಲೂಯಿಸ್ @ ಜಯ ಪ್ರಕಾಶಂ ಎಂಬುವರು ಮಲಮುತ್ರ ವಿಸರ್ಜನೆಗೆ ಬಾತ್ ರೂಂಗೆ ಹೋಗಿದ್ದರು. ಆ ಸಮಯದಲ್ಲಿ ಅವರು ಕುಸಿದುಬಿದ್ದ ಕಾರಣ ಆತನ ಮಗ ವಿನ್ಸೆಂಟ್ ಎಂಬುವರು ಬೆಮೆಲ್ ಮೆಡಿಕಲ್ ಸೆಂಟರ್‍ಗೆ ಕರೆತಂದರು. ವೈದ್ಯರು ಎಸ್..ಲೂಯಿಸ್ ರವರನ್ನು ಪರೀಕ್ಷಿಸಿ ಎದೆ ನೋವಿನಿಂದ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಇತ್ಯಾದಿ.
  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೨-೨೦೦೭ ರಂದು ಬೆಳಿಗ್ಗೆ ಬಂಗಾರಪೇಟೆ ವಿಜಯನಗರ ವಾಸಿ ಶ್ರೀಮತಿ ಪಿತಿಮುನ್ನಿಸಾ ಕೋಂ ನಜೀಮ್ ಅಹಮದ್ ಎಂಬುವರಿಗೆ ಆಕೆಯ ಪತಿ ನಜೀಮ್ ಅಹಮದ್ ರವರು ತನ್ನ ವಾಸದ ಮನೆ ಸಂಖ್ಯೆ ೪೪, ೧ನೇ ಟೈಪ್, ಬೆಮೆಲ್ ನಗರದಲ್ಲಿ ಮೃತಪಟ್ಟಿರುತ್ತಾರೆಂದು ಯಾರಿಂದಲೋ ತಿಳಿದುಬಂದಿರುತ್ತದೆ. ಆ ಸಮಯದಲ್ಲಿ ಶ್ರೀಮತಿ ಪಿತಿಮುನ್ನಿಸಾ ರವರು ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಾಗಿರುತ್ತದೆ. ಮೃತ ನಜೀಮ್ ಅಹಮದ್ ಎಂಬುವರಿಗೆ ೩-೪ ವರ್ಷಗಳಿಂದ ಜಠರಕ್ಕೆ ಸಂಬಂಧಿಸಿದಂತೆ ಕಾಯಿಲೆ ಮತ್ತು ಮಧ್ಯಪಾನ ಮಾಡುವ ಅಭ್ಯಾಸವಿದ್ದು, ಇದರಿಂದ ಮೃತ ಪಟ್ಟಿರಬಹುದೆಂತ ತಿಳಿಸಿರುತ್ತಾರೆ ಇತ್ಯಾದಿ.
  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೨-೨೦೦೭ ರಂದು ೧೦೧೫ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಸಂಜಯಗಾಂಧಿನಗರ ಜನತಾ ಹೌಸ್ ನ ವಾಸಿ ಶ್ರೀಮತಿ ರಾಣಿ ಕೋಂ ಲೇಟ್ ಸೀತಾರಾಂ ಠಾಣೆಗೆ ಹಾಜರಾಗಿ ತನ್ನ ಮಗನಾದ ಚಿನ್ನ ಎಂಬುವರು ದಿನಾಂಕ ೨೭-೧೨-೨೦೦೭ ರಂದು ೧೦೩೦ ಗಂಟೆಗೆ ತನ್ನ ಅಕ್ಕನ ಮನೆಗೆ ಹೋಗುವುದಾಗಿ ತನ್ನ ತಾಯಿಗೆ ತಿಳಿಸಿ ಹೋದವನು ಕೆನೆಡಿಸ್ ಲೈನಿನ ಸೈನಾಡ್ ದಿಬ್ಬದ ಮೇಲೆ ಈಚಲ ಮರಕ್ಕೆ ನೇಣುಹಾಕಿಕೊಂಡು ಮೃತ ಪಟ್ಟಿರುತ್ತಾರೆ ಎಂದು ದೂರು ನೀಡಿದರು. ಮೃತನಾದ ಚಿನ್ನನಿಗೆ ಮತ್ತು ಆತನ ಹೆಂಡತಿಗೆ ಸಂಸಾರದ ವಿಷಯದಲ್ಲಿ ವೈಮನಸ್ಯವಿದ್ದು ಮದ್ಯಪಾನ ಚಟಕ್ಕೆ ಬಲಿಯಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮೃತಪಟ್ಟಿರುತ್ತಾನೆ ಇತ್ಯಾದಿ.

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೦-೧೨-೨೦೦೭ ರಂದು ೧೦೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಮಾರಿಕುಪ್ಪಂ ರಾಜೇಶ್ ಕ್ಯಾಂಪ್ ವಾಸಿ ಪ್ರೇಮಕುಮಾರಿ (೧೫) ಬಿನ್ ಕುಮಾರ್ ಎಂಬುವರು ಸ್ನೇಹಿತರನ್ನು ನೋಡಲು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ. ಕಾಣೆಯಾದ ಹುಡುಗಿಯ ಚಹರೆ ಈ ರೀತಿ ಇರುತ್ತದೆ. ಎತ್ತರ ೫ ಅಡಿ, ಸಾದಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ, ಹಸಿರು ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ತಮಳು ಭಾಷೆ ಮಾತನಾಡುತ್ತಾರೆ ಇತ್ಯಾದಿ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply