-
ದಿನಾಂಕ ೨೪-೧೨-೨೦೦೭ ರಂದು ೧೨೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಶಾಂತಿನಗರ ವಾಸಿ ವೆಂಕಟಸುಬ್ಬಯ್ಯ ಎಂಬುವರು ತಮ್ಮ ಮನೆಯ ಒಳಗಡಯ ಕಿಟಕಿಯಲ್ಲಿ ೨೦೦೦/ ರೂ ಬೆಳೆಬಾಳುವ ಸೋನಿ ಎರಕ್ಸ್ನ ಮೊಬೈಲ್ ಸಿಮ್ ಸಂಖ್ಯೆ ೯೮೮೦೪೯೭೬೮೨ ಅನ್ನು ಇಟ್ಟಿದ್ದರು. ಆ ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿಯು ಮೊಬೈಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಠಾಣೆಯಲ್ಲಿ ದೂರು ನೀಡಿರುತ್ತಾರೆ. ಆ ಸಮುದಲ್ಲಿ ಪಿ.ಎಸ್.ಐ. ಅಪರಾಧ, ಬಂಗಾರಪೇಟೆ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಗಳಾದ ಮುಖ್ಯಪೇದೆ ೮೯ ಮುನಿಯಪ್ಪ ಮತ್ತು ಪೇದೆ ೫೬ ಶಿವಶಂಕರ ರೆಡ್ಡಿ ಎಂಬುವರುಗಳನ್ನು ಈ ಕೇಸಿನಲ್ಲಿ ಆರೋಪಿ ಹಾಗೂ ಮಾಲನ್ನು ಪತ್ತೆಮಾಡಲು ನೇಮಿಸಲಾಗಿತ್ತು. ಸದರಿ ಸಿಬ್ಬಂದಿಯವರು ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ಗಸ್ತಿನಲ್ಲಿದ್ದ ಸಮಯದಲ್ಲಿ ಆಂದ್ರಪ್ರದೇಶ ರಾಜ್ಯದ ವಿ.ಕೋಟೆ ವಾಸಿ ಮುರುಗನ್ (೩೫) ಎಂಬುವರು ಸೋನಿ ಎರಕ್ಸ್ನ ಮೊಬೈಲ್ ಅನ್ನು ರೂ. ೫೦೦/ ಗೆ ಮಾರುತ್ತಿದ್ದವರನ್ನು ಮಾಲಿನ ಸಮೇತ ದಸ್ತಗಿರಿಮಾಡಿ ಠಾಣೆಗೆ ಕರೆತಂದಿರುತ್ತಾರೆ. ವಿಚಾರಣೆಯ ಸಮಯದಲ್ಲಿ ಆರೋಪಿಯು ಸೋನಿ ಎರಕ್ಸ್ನ ಮೊಬೈಲ್ ಅನ್ನು ವೆಂಕಟಸುಬ್ಬಯ್ಯ ಎಂಬುವರ ಮನೆಯಲ್ಲಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಅರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.
This entry was posted on Tuesday, December 25th, 2007 at 12:20 pm and is filed under ಅಪರಾಧ. You can follow any responses to this entry through the RSS 2.0 feed.
You can leave a response, or trackback from your own site.