July 20, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣದ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕಿನ ಪಂತನಹಳ್ಳಿ ಗ್ರಾಮದ ಸರ್ವೆ ನಂ. ೫೪/೫೫ರ ಜಮೀನಿನಲ್ಲಿ ನಡೆದಿರುತ್ತದೆ. ದಿನಾಂಕ ೧೯-೦೭-೨೦೦೮ ರಂದು ಮದ್ಯಾಹ್ನ ೧೪೩೦ ಗಂಟೆಯಲ್ಲಿ ತಾತೇನಹಳ್ಳಿ ಗ್ರಾಮದ ವಾಸಿ ಶಂಕರಯ್ಯ (೪೦) ಬಿನ್ ಶ್ರೀನಿವಾಸ ಎಂಬುವರು ತನ್ನ ಹೀರೋಹೊಂಡಾ ಪ್ಯಾಸಿನ್ + ಸಂಖ್ಯೆ: ಕೆಎ-೦೮-ಕೆ-೩೩೮೭ ಅನ್ನು ಪಂತನಹಳ್ಳಿ ಗ್ರಾಮದ ಸರ್ವೆ ನಂ. ೫೪/೫೫ರ ತನ್ನ ಜಮೀನಿನಲ್ಲಿ ನಿಲ್ಲಿಸಿ, ಊಟ ಮಾಡಿಕೊಂಡು ಅಂದೇ ಮದ್ಯಾಹ್ನ ೧೫೦೦ ಗಂಟೆಗೆ ಬಂದು ನೋಡಿದಾಗ ಯಾರೋ ದುಷ್ಕರ್ಮಿಗಳು ಸದರಿ ಮೋಟಾರ್ ಸೈಕಲ್ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
No Comments » |
ಅಪರಾಧ |
Permalink
Posted by spkgf
July 19, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೯-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೦೭-೨೦೦೮ ರಂದು ಕೆ.ಜಿ.ಎಫ್. ರಾಬರ್ಟ್ಸನ್ಪೇಟೆ, ಸಿವಿಲ್ ಆಸ್ಪತ್ರೆ ಮುಂಭಾಗ, ರಾಮಸ್ವಾಮಿ ಬಿಲ್ಡಿಂಗ್ ಮನೆ ಸಂಖ್ಯೆ ೧೨೩೬ರ ವಾಸಿ ಶ್ರೀಮತಿ ರಾಜಮಣಿ ಕೋಂ ಲೇಟ್ ಗುಣಶೇಷನ್ ರವರು ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ೧೯೦೦ ಗಂಟೆಗೆ ವಾಪಸ್ಸು ಮನೆಗೆ ಬಂದು ಬೀಗ ತೆಗೆದು ಬೀರುವಿನ ಬೀಗ ನೋಡಲಾಗಿ ಬೀಗ ಕಾಣದೆ ಸ್ಟಾರ್ ಬೀಗದಿಂದ ಬೀರೂವನ್ನು ತೆಗೆದು ನೋಡಲಾಗಿ ಬೀರೂವಿನಲ್ಲಿ ಒಂದು ಚಿನ್ನದ ನಕ್ಲೇಸ್, ೨ ಎಲೆ ಚಿನ್ನದ ಚೈನು, ೧ ಚಿನ್ನದ ಬಲೆ ಸುಮಾರು ೪೫,೦೦೦/- ರೂಗಳ ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ೦೧
-
ಚಾಂಫಿಯನ್ರೀಫ್ಸ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೯-೦೭-೨೦೦೮ ರಂದು ಬೆಳಿಗ್ಗೆ ಚಾಂಪಿಯನ್ರೀಫ್ಸ್ ಪೊಲೀಸ್ ಠಾಣೆಯ ಪೇದೆ ೨೨೯ ಶ್ರೀ ಆರ್.ವೇಣು ರವರು ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿರುವಾಗ ವಿಕ್ಟರಿ ಚರ್ಚ, ಟೆನೆಂಟ್ ಸರ್ಕಲ್ ಕಡೆ ಗಸ್ತು ಮಾಡುತ್ತಿರುವಾಗ ೧೨೩೦ ಗಂಟೆ ಸಮಯದಲ್ಲಿ ಚಾಂಪಿಯನ್ ವರ್ಕ್ಶಾಫ್ ಹಿಂಬಾಗದಲ್ಲಿ ಕಾಸ್ಟನ್ ಬ್ಲಾಕ್ ಕಡೆ ಹೋಗುವ ತಾರ್ ರಸ್ತೆಯಲ್ಲಿ ಆಂಡ್ರಸನ್ಪೇಟೆ, ಟು-ಬ್ಲಾಕ್ ವಾಸಿಗಳಾದ ಸುರೇಶ್, ಮಣಿಧನ್ ಮತ್ತು ಇತರೆ ೨ ಜನ ಒಂದು ಕಬ್ಬಿಣ ಟ್ರಾಲಿಯಲ್ಲಿ ಒಂದು ಕಬ್ಬಿಣದ ಜಂಟಿಯಾಗಿರುವ ರೈಲು ಪಟ್ಟಿಯನ್ನು ಹಾಕಿಕೊಂಡು ಹೋಗುತ್ತಿದ್ದು, ಪೇದೆಯನ್ನು ನೋಡಿ ಓಡಲು ಪ್ರಯತ್ನಿಸಿದಾಗ ಅದರಲ್ಲಿ ಒಬ್ಬನ್ನು ಹಿಡಿದು ಠಾಣೆಗೆ ಕರೆತಂದಿರುತ್ತಾರೆ.
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೦೭-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಆಂಡ್ರಸನ್ಪೇಟೆಯ ಮಸ್ಕಾಂ ವಾಸಿಗಳಾದ ಶ್ರೀನಿವಾಸ, ನಾಗರಾಜ ಎಂಬುವರುಗಳು ಅದೇ ಕೇರಿಯ ದೇವರಾಜ್ ಬಿನ್ ಲೇಟ್ ರಾಮಸ್ವಾಮಿ ಸ್ವಾಧೀನಾನುಭವದಲ್ಲಿರುವ ಜಮೀನನ್ನು ಅಕ್ರಮವಾಗಿ ಉಳುಮೆ ಮಾಡಿಸುತ್ತಿದ್ದು ದೇವರಾಜ್ ರವರು ಕೇಳಿದಕ್ಕೆ ಶ್ರೀನಿವಾಸ ಮತ್ತು ನಾಗರಾಜ್ ರವರುಗಳು ಮೈಮೇಲೆ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧
-
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಅಬ್ಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೯-೦೭-೨೦೦೮ ರಂದು ೧೦೩೦ ಗಂಟೆ ಸಮಯದಲ್ಲಿ ಶ್ರೀ. ಎನ್.ಎನ್.ಪ್ರಸಾದ್, ಪಿ.ಎಸ್.ಐ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಬಂಗಾರಪೇಟೆ ತಾಲೂಕು ತಲ್ಲಗಟ್ಟೂರು ಗ್ರಾಮಕ್ಕೆ ಹೋಗಿ ನೋಡಲಾಗಿ ಅದೇ ಗ್ರಾಮದ ಚಂದ್ರಪ್ಪ ಎಂಬುವರು ೪ ಪ್ಲಾಸ್ಟೀಕ್ ಕ್ಯಾನುಗಳಲ್ಲಿ ೨೦ ಲೇಟರ್ ೪೦೦೦/-ರೂಗಳ ಬೆಲೆ ಬಾಳುವ ಕಾನೂನು ಬಾಹೀರವಾಗಿ ಸೇಂದಿಯನ್ನು ವಶಪಡಿಸಿಕೊಂಡಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
No Comments » |
Uncategorized |
Permalink
Posted by spkgf
July 18, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೦೭-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್., ಆಂಡ್ರಸನ್ಪೇಟೆಯ ಸುಸೈಪಾಳ್ಯ ವಾಸಿ ಪಾಪ ಮತ್ತು ಸುರೇಶ್ ಎಂಬುವರುಗಳು ಸಂಜಯ್ ಗಾಂಧಿ ನಗರ ವಾಸಿ ಚಂದರ್ @ ಚಂದ್ರಶೇಖರ್ ಎಂಬುವರೊಂದಿಗೆ ರಾಬರ್ಟ್ಸನ್ಪೇಟೆಯ ಆರ್.ಕೆ.ಮಾರ್ಕೆಟ್ ಬಳಿ ವಿನಾ ಕಾರಣ ಜಗಳ ತೆಗೆದು ಒಂದು ಸೋಡಾ ಬಾಟಲಿನಿಂದ ಚಂದರ್ ರವರ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.
-
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೦೭-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್., ಸಂಜಯ್ ಗಾಂಧಿ ನಗರ ವಾಸಿ ಚಂದರ್ @ ಚಂದ್ರಶೇಖರ್ ಎಂಬುವರು ಆಂಡ್ರಸನ್ಪೇಟೆಯ ಸುಸೈಪಾಳ್ಯ ವಾಸಿ ಪಾಪ ಮತ್ತು ಸುರೇಶ್ ಎಂಬುವರೊಂದಿಗೆ ರಾಬರ್ಟ್ಸನ್ಪೇಟೆಯ ಆರ್.ಕೆ.ಮಾರ್ಕೆಟ್ ಬಳಿ ವಿನಾ ಕಾರಣ ಜಗಳ ತೆಗೆದು ಒಂದು ಬ್ಲೇಡಿನಿಂದ ಪಾಪ ಮತ್ತು ಸುರೇಶ್ ರವರಿಗೆ ಕೈಗಳ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
No Comments » |
ಅಪರಾಧ |
Permalink
Posted by spkgf
July 17, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೭-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ರಾಬರ್ಟ್ಸನ್ಪೇಟೆ, ೪ನೇ ಕ್ರಾಸ್, ಮನೆ ಸಂಖ್ಯೆ ೯೨೦ ವಾಸಿ ಶ್ರೀ ಶಾಹಿದ್ ಉಮ್ರಾನ್ ಎಂಬುವರು ತಮ್ಮ ಬೇಕರಿ ಅಂಗಡಿಯನ್ನು ಮುಚ್ಚಿಕೊಂಡು ಮನೆಗೆ ಹೋಗಿದ್ದು, ನಂತರ ದಿನಾಂಕ ೧೭-೦೭-೨೦೦೮ ರಂದು ಬೆಳಿಗ್ಗೆ ೦೭೦೦ ಗಂಟೆ ಸಮಯದಲ್ಲಿ ಬೇಕರಿ ಬಳಿ ಬಂದು ನೋಡಲಾಗಿ ಯಾರೋ ಕಳ್ಳರು ಷಟ್ಟರ್ ಡೋರ್ ಅನ್ನು ತೆಗೆದು ಅಂಗಡಿಯೊಳಗೆ ಪ್ರವೇಶ ಮಾಡಿ ಗಲ್ಲಾಪೆಟ್ಟಿಯಲ್ಲಿರುವ ಹಣ ಬಿಸ್ಕಟ್ಸ್, ಸೀಗರೇಟ್ ಹಾಗೂ ಆಹಾರ ಪದಾರ್ಥಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು ಸುಮಾರು ರೂ ೩,೨೦೦/- ಗಳಾಗಿರುತ್ತದೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೭-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ತಮ್ಮಸಂದ್ರ ವಾಸಿ ರೇಡಿಯೋ ಮುನಿಯಪ್ಪ ಎಂಬುವರು ೫, ೬ ಜನಗಳ ಗುಂಪು ಕಟ್ಟಿಕೊಂಡು ಜಮೀನು ತಕರಾರು ವಿಷಯದಲ್ಲಿ ಅದೇ ಗ್ರಾಮದ ಗೋವಿಂದಪ್ಪನನ್ನು ನವರ ಮನೆಯ ಮುಂದೆ ಬಂದು ಗೋವಿಂದಪ್ಪನನ್ನು ಕಟ್ಟ ಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಇತರೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಠ ಜಾತಿ ಪಂಗಡಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೭-೨೦೦೮ ರಂದು ಸುಮಾರು ೧೪೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ತಿಮ್ಮಸಂದ್ರ ವಾಸಿ ಶ್ರೀ ಮುನೇಪ್ಪ ಬಿನ್ ಲೇಟ್ ಗುಲ್ಪ್ಪ ರವರಿಗೆ ಸೇರಿದ ಹೊಸ ಸರ್ವೇ ಸಂಖ್ಯೆ ೧೮೬ ರಲ್ಲಿ ಅದೇ ಗ್ರಾಮದ ವಾಸಿ ಗೋವಿಂದಪ್ಪ ಎಂಬುವರು ಹರಿಜನ ವ್ಯಕ್ತಗೆ ಸೇರಿದ ಜಮೀನಿನಲ್ಲಿ ಅಧಿಕ್ರಮ ಪ್ರವೇಶ ಮಾಡಿ ದೌರ್ಜನ್ಯದಿಂದ ಬಿತ್ತನೆಮಾಡುತ್ತಿದ್ದು, ಮುನೇಪ್ಪ ರವರ ಪತ್ನಿ ಈ ವಿಷಯವಾಗಿ ಕೇಳಲಾಗಿ ಗೋವಿಂದಪ್ಪ ಕೆಟ್ಟ ಮಾತುಗಳಿಂದ ಜಾತಿ ನಿಂದನೆ ಮಾಡಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
No Comments » |
ಅಪರಾಧ |
Permalink
Posted by spkgf
July 15, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೫-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೭-೨೦೦೮ ರಂದು ೧೫೧೫ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಕೋರಮಂಡಲ್, ೭ ವೆಸಲಿನ್ ಬ್ಲಾಕ್ ವಾಸಿ ಶ್ರೀ ವಿವೇಕಾನಂದ (೨೨) ಮತ್ತು ಅವರ ಅಣ್ಣ ಬಾಬಾಜಿ ಎಂಬುವರುಗಳು ತಮ್ಮ ಬಜಾಜ್ ಡಿಸ್ಕವರ್ ಮೋಟಾರು ಸೈಕಲ್ ಸಂಖ್ಯೆ ಕೆಎ-೦೪-ಇಕೆ-೧೭೮೦ ರಲ್ಲಿ ಉರಿಗಾಂ ಕಡೆಯಿಂದ ರಾಬರ್ಟ್ಸನ್ಪೇಟೆ ಕಡೆ ಹೋಗುತ್ತಿದ್ದಾಗ ಹಿಂಭಾಗದಿಂದ ಟಾಟಾ ಸುಮೊ ಸಂಖ್ಯೆ ಕೆಎ-೩೬-ಎ-೫೫೫೬ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಓವರ್ ಟೇಕ್ ಮಾಡಿ ತಕ್ಷಣ ಟಾಟಾ ಸುಮೋ ವಾಹನದ ಚಾಲಕ ನಿಲ್ಲಿಸಿದ್ದರಿಂದ ಮೋಟಾರು ಸೈಕಲ್ ಟಾಟಾ ಸುಮೋಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿರುತ್ತಾರೆ.
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೩
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೇತಮಂಗಲ ಬಸ್ ನಿಲ್ದಾಣದ ಬಳಿ ಎಲೆಕ್ಟ್ರಿಕಲ್ ಅಂಗಡಿ ಬಳಿ ನಡೆದಿರುತ್ತದೆ. ದಿನಾಂಕ ೧೪-೦೭-೨೦೦೮ ರಂದು ೨೦೩೦ ಗಂಟೆ ಸಮಯದಲ್ಲಿ ಬೇತಮಂಗಲ, ಹಳೇ ಬಡಾವಣೆ ವಾಸಿ ಶ್ರೀ ಅಬ್ಬಾಸ್ ಬಿನ್ ಈಸಾಬೇಗ್ ಎಂಬುವರು ತನ್ನ ಎಲೆಕ್ಟ್ರಿಕಲ್ ಅಂಗಡಿಯಲ್ಲಿದ್ದಾಗ ಬೇತಮಂಗಲ ನ್ಯೂಟೌನ್ ವಾಸಿ ಮೂರ್ತಿ @ ಕೃಷ್ಣಮೂರ್ತಿ ಎಂಬುವನು ಅಬ್ಬಾಸ್ ಬಳಿ ಬಂದು ಒಂದು ವಿದ್ಯುತ್ ಬಲ್ಬ್ ಬೇಕೆಂದು ಕೇಳಿ ಅದಕ್ಕೆ ಅಬ್ಬಾಸ್ ಬಲ್ಬ್ ನ್ನು ನೀಡಿ ಹಣ ಕೊಡುವಂತೆ ಕೇಳಿದಾಗ ಕೃಷ್ಣಮೂರ್ತಿ ಹಣವಿಲ್ಲವೆಂದು ತಿಳಿಸಿ ನಂತರ ಅಬ್ಬಾಸ್ ಸಾಲ ನೀಡುವುದಿಲ್ಲವೆಂತ ಹೇಳಿ ಬಲ್ಬ್ ಅನ್ನು ತೆಗೆದುಕೊಂಡಾಗ ಕೃಷ್ಣಮೂರ್ತಿ ಅಬ್ಬಾಸ್ ರವರನ್ನು ಮುಷ್ಟಿಯಿಂದ ಮುಖದಮೇಲೆ ಗುದ್ದಿರುತ್ತಾನೆ.
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೇತಮಂಗಲ ಬಸ್ ನಿಲ್ದಾಣದ ಬಳಿ ಎಲೆಕ್ಟ್ರಿಕಲ್ ಅಂಗಡಿ ಬಳಿ ನಡೆದಿರುತ್ತದೆ. ದಿನಾಂಕ ೧೪-೦೭-೨೦೦೮ ರಂದು ೨೦೩೦ ಗಂಟೆ ಸಮಯದಲ್ಲಿ ಬೇತಮಂಗಲ ನ್ಯೂಟೌನ್ ವಾಸಿ ಮೂರ್ತಿ @ ಕೃಷ್ಣಮೂರ್ತಿ ಎಂಬುವನು ಬೇತಮಂಗಲ, ಹಳೇ ಬಡಾವಣೆ ವಾಸಿ ಶ್ರೀ ಅಬ್ಬಾಸ್ ಬಿನ್ ಈಸಾಬೇಗ್ ಎಂಬುವರ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಒಂದು ಬಲ್ಬ್ ತೆಗೆದುಕೊಂಡು ಮನೆಯಲ್ಲಿ ನೋಟಲಾಗಿ ಬಲ್ಬ್ ಉರಿಯದೆ ಇದ್ದು ಬೇರೆ ಬಲ್ಬ್ ಅನ್ನು ಕೊಡಬೇಕೆಂದು ಕೇಳಿದಾಗ ಅಬ್ಬಾಸ್ ಎಂಬುವನು ಕೃಷ್ಣಮೂರ್ತಿ ರವರ ಬಾಯಿಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.
-
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಆಂಡ್ರಸನ್ಪೇಟೆಯ, ಓ.ಡ್ಯಾನಿಯಲ್ ರಸ್ತೆ, ಮಾರ್ಕೆಟ್ ಮುಂಭಾಗ ನಡೆದಿರುತ್ತದೆ. ಬಂಗಾರಪೇಟೆ ತಾಲೂಕು ವಿಲೇಜ್ ಮಾರಿಕುಪ್ಪಂ ವಾಸಿ ಶ್ರೀ ಪ್ರಕಾಶ್ ಎಂಬುವರು ಆಂಡ್ರಸನ್ಪೇಟೆಯ ವಾಸಿ ರಮೇಶ್ ಬಿನ್ ನಾರಾಯಣ್ ರವರಿಗೆ ಟ್ರಾಕ್ಟರ್ ನಲ್ಲಿ ಮರಳು ಹೊಡೆದಿದ್ದು, ಅದರ ಬಾಕಿ ೭೫೦೦/- ರೂಗಳು ರಮೇಶ್ ಕೊಡಬೇಕಾಗಿದ್ದು, ದಿನಾಂಕ ೧೫-೦೭-೨೦೦೮ ರಂದು ೦೮೪೫ ಗಂಟೆ ಸಮಯದಲ್ಲಿ ರಮೇಶ್ ಓ.ಡ್ಯಾನಿಯಲ್ ರಸ್ತೆಯಲ್ಲಿ ಮಾರ್ಕೆಟ್ ಮುಂಬಾಗ ನಿಂತಿದ್ದಾಗ ಪ್ರಕಾಶ್ ಬಾಕಿ ಹಣ ರಮೇಶ್ ರವರನ್ನು ಕೇಳಿದಾಗ ”ನನ್ನ ಮಗನೆ ಎಲ್ಲರ ಮುಂದೆ ಸಾಲ ಕೇಳುತ್ತೀಯ ಎಂದು ಪ್ರಕಾಶ್ ರವರೊಂದಿಗೆ ಜಗಳ ಮಾಡಿ ಒಂದು ಕಲ್ಲಿನಿಂದ ಪ್ರಕಾಶ್ ತಲೆಯ ಬಲಭಾಗಕ್ಕೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
No Comments » |
ಅಪರಾಧ |
Permalink
Posted by spkgf
July 12, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೨
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೦೭-೨೦೦೮ ರಂದು ಸಂಜೆ ೧೭೩೦ ರಂದು ಬಂಗಾರಪೇಟೆ ತಾಲೂಕಿನ ಕೀಲುಕೊಪ್ಪ ಗ್ರಾಮದ ವಾಸಿಗಳಾದ ಶ್ರೀ ತ್ಯಾಗರಾಜ್ ಬಿನ್ ಮುನಿಯಪ್ಪ ಮತ್ತು ನಾರಾಯಣಪ್ಪ ಬಿನ್ ಮುನಿಸ್ವಾಮಿ ಎಂಬುವರುಗಳು ಮೋಟಾರ್ ಸೈಕಲ್ ಸಂಖ್ಯೆ: ಕೆಎ-೦೭-ಜೆ-೫೩೩೪ರಲ್ಲಿ ಬಂಗಾರಪೇಟೆ ಪಟ್ಟಣದಲ್ಲಿನ ಸಹರಾ ನರ್ಸಿಂಗ್ ಹೋಂ ಮುಂದೆ ಹೋಗುತ್ತಿದ್ದಾಗ ಕ್ಯಾಂಟರ್ ನಂ. ಕೆಎ-೧೯-೯೬೧೨ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದ ಪ್ರಯುಕ್ತ ತ್ಯಾಗರಾಜ್ ಮತ್ತು ನಾರಾಯಣಪ್ಪ ರವರುಗಳಿಗೆ ರಕ್ತಘಾಯಗಳಾಗಿರುತ್ತವೆ.
ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೦೭-೨೦೦೮ ರಂದು ೧೮೧೫ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ಕೆ.ಜಿ.ಎಫ್. ನಗರದ ಕೆನಡೀಸ್ ಲೈನ್ ವಾಸಿಯಾದ ಸರವಣನ್ ಎಂಬುವರ ಮಗ ಓಂ ಪ್ರಕಾಶ್ (೧೩) ರವರು ಉರಿಗಾಂ ಬಳಿಯಿರುವ ಸುಭಾಷಿಣಿ ಸರ್ಕಲ್ ಬಳಿ ನಡೆದು ಹೋಗುತ್ತಿದ್ದಾಗ ಅಕ್ರಂ ಬಿನ್ ಸುಕುರ್ಸಾಬ್ (೨೮) ರವರು ಮಿನಿ ಬಸ್ ಸಂಖ್ಯೆ: ಕೆಎ-೦೬-ಎ-೧೯೪೮ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಓಂ ಪ್ರಕಾಶ್ ಎಂಬ ಹುಡುಗನಿಗೆ ಡಿಕ್ಕಿ ಹೊಡೆದು ರಕ್ತಘಾಯಪಡಿಸಿರುತ್ತಾನೆ.
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕಿನ ಕೆ.ಜಿ.ಎಫ್. ನಗರದ ಇಂಗ್ಲೀಷ್ ಮೆಸ್ ಕ್ವಾಟರ್ಸ್, ಮಾರಿಕುಪ್ಪಂನಲ್ಲಿ ನಡೆದಿರುತ್ತದೆ. ದಿನಾಂಕ ೧೧-೦೭-೨೦೦೮ ರಂದು ೨೨೧೫ ಗಂಟೆಯಲ್ಲಿ ಪ್ರೇಮ್ಕುಮಾರ್ (೨೪) ಬಿನ್ ಪ್ರಭಾಕರ್ ಹೆನ್ರಿ, ಇಂಗ್ಲೀಷ್ ಮೆಸ್ ಕ್ವಾರ್ಟರ್ಸ್ ರವರು ಹಳೆ ವೈಷಮ್ಯದಿಂದ ಶ್ರೀ ದೇವನ್ಬು (೬೩) ಬಿನ್ ಸಾಮಿಯಲ್ ಮತ್ತು ಸೆಲೋಮಿಯ ಬಳಿ ಜಗಳ ವಾಡಿ ಒಂದು ಚಾಕುವಿನಿಂದ ದೇವನ್ಬು ಮತ್ತು ಸೆಲೋಮಿಯ ರವರುಗಳಿಗೆ ತಿವಿದು ರಕ್ತಘಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾನೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
No Comments » |
ಅಪರಾಧ |
Permalink
Posted by spkgf
July 10, 2008
A SPECIAL TRAIN to create awareness on H.I.V. and AIDS and to remove myths and misconceptions of H.I.V. and AIDS is arriving on 21st July 2008 at Bangarpet Railway Station, in Kolar District, Karnataka, and will leave on 22nd July 2008. There is an exhibition in Coach No. 1 to 3. All are required to utilise this golden opportunity to know more about H.I.V. and AIDS.
No Comments » |
ಪೊಲೀಸ್ ಕಲ್ಯಾಣ ಕಾರ್ಯ |
Permalink
Posted by spkgf
July 10, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೦-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೬-೨೦೦೮ ರಂದು ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರಾದ ಶ್ರೀ ಎಂ.ವಿ.ಆನಂದ್ ರವರು ಆಹಾರ ದಾನ್ಯಗಳನ್ನು ತನ್ನ ಸಹಾಯಕನಾಗಿದ್ದ ಚಿನ್ನಪ್ಪ ರವರ ಮುಖಾಂತರ ಸಾರ್ವಜನಿಕರಿಗೆ ವಿತರಿಸಿ ಮಾರಾಟ ಮಾಡಿ ೨೦ ಸಾವಿರ ರೂಗಳನ್ನು ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿ ಶೆಲ್ಪ ಮೇಲೆ ಇಟ್ಟು ಅಂಗಡಿಯ ಬಾಗಿಲನ್ನು ಮುಚ್ಚಿ ಬೀಗವನ್ನು ಹಾಕಿಕೊಂಡು ಹೋಗಿ ದಿನಾಂಕ ೦೨-೦೭-೨೦೦೮ ರಂದು ೧೮೦೦ ಗಂಟೆ ಸಮಯದಲ್ಲಿ ಬಂದು ನೋಡಲಾಗಿ ಅಂಗಡಿ ಬೀಗ ಹಾಕಿದಂತೆ ಇದ್ದು, ನಂತರ ಮನೆಗೆ ಹೋಗಿ ಮರುದಿನ ಅಂಗಡಿಯ ಬಳಿ ಹೋಗಿ ನೋಡಲಾಗಿ ರಾತ್ರಿ ಯಾರೋ ಕಳ್ಳರು ಅಂಗಡಿಯ ಬಾಗಿಲು ಮುರಿದು ೨೦,೦೦೦/- ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೨
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೦೭-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ (ಬಂಗಾರಪೇಟೆ ತಾಲೂಕು ಸ್ವರರ್ಣಕುಪ್ಪಂ ಗ್ರಾಮದ ವಾಸಿ) ಸರ್ಕಾರಿ ಬಸ್ ಸಂಖ್ಯೆ ಕೆ-೦೭-ಎಫ್-೯೬೩ ರ ಚಾಲಕ ತನ್ನ ವಾಹನವನ್ನು ಬೂದಿಕೋಟೆಯಿಂದ ಬಂಗಾರಪೇಟೆಗೆ ಬರುವಾಗ ಆನಂದಗಿರಿ ಗ್ರಾಮದ ಬಳಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮುನಯ್ಯ ರವರ ಜಮೀನಿನ ಬಳಿ ಮೋರಿಗೆ ಹಾಕಿರುವ ಸಿಮೆಂಟ್ ಪೈಪುಗಳಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಬಸ್ಸಿನಲ್ಲಿದ್ದ ೧೦ ಮಂದಿ ಶಾಲಾ ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ.
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೯-೦೭-೨೦೦೮ ರಂದು ಬೆಳಿಗ್ಗೆ ಪಿಚ್ಚಹಳ್ಳಿ ಗ್ರಾಮದ ವಾಸಿ ಶ್ರೀ ಗೋವಿಂದಪ್ಪ ಎಂಬುವರು ತಮ್ಮ ಟಿವಿಎಸ್ ಸೂಪರ್ ಎಕ್ಸ್ ಎಲ್ ವಾಹನದಲ್ಲಿ ಬೂದಿಕೋಟೆ ಸರ್ಕಲ್ ಬಳಿ ಬರುತ್ತಿರುವಾಗ ಎದರುಗಡೆಯಿಂದ ಲಾರಿ ಸಂಖ್ಯೆ ಕೆಎ-೦೧-ಬಿ-೮೩ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗೋವಿಂದಪ್ಪನವರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಗೋವಿಂದಪ್ಪನವರಿಗೆ ರಕ್ತಗಾಯವಾಗಿರುತ್ತದೆ.
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೭-೨೦೦೮ ರಂದು ೦೯೦೦ ಗಂಟೆ ಸಮಯದಲ್ಲಿ ರಾಬರ್ಟ್ಸನ್ಪೇಟೆ, ಮಿನಿ ಇಬ್ರಾಹಿಂ ರಸ್ತೆಯ ವಾಸಿ ಶ್ರೀ ಅಪ್ಜಲ್ ಫಾಷ ಎಂಬುವರು ಮಿನಿ ಇಬ್ರಾಹಿಂ ರಸ್ತೆಯಲ್ಲಿರುವ ಓಂ ಶಕ್ತಿ ಸೈಕಲ್ ಷಾಫ್ ಬಳಿಯಿರುವಾಗ ಅದೇ ಕೇರಿಯ ಅಮಾನ್ ಎಂಬುವನು ಅಪ್ಜಲ್ ರವರ ಬಲ ಅಂಗೈಯಲ್ಲಿ ಬಲವಂತವಾಗಿ ಯಾವುದೋ ಕೆಮಿಕಲ್ ಉಂಡೆ ಇಟ್ಟು ಕೈಗಳಿಂದ ಹಿಡುದುಕೊಂಡು, ಇದರಿಂದ ಅಪ್ಜಲ್ ಬಲ ಅಂಗೈಯಲ್ಲಿ ಬೊಂಬ್ಬೆಗಳು ಬಂದಿದ್ದು, ಅಪ್ಜಲ್ ರವರು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಕ್ಕೆ ಅಮಾನ್ ರವರು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಇತರೆ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಭಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೯-೦೭-೨೦೦೮ ರಂದು ೧೩೧೫ ಸಮಯದಲ್ಲಿ ಪಿ.ಐ, ಅಭಕಾರಿ, ಕೆ.ಜಿ.ಎಫ್. ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಕದಿರೇನಹಳ್ಳಿ ಗ್ರಾಮದ ಪುಷ್ಪಮ್ಮ ರವರು ತಮ್ಮ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮಾರಟ ಮಾಡುತ್ತಿದ್ದಾ ೨೧ ಬಾಟಲ್ ರಾಜ ವಿಸ್ಕಿ, ೮ ಬಾಟಲ್ ಸುಪರ್ ಜಾಕ್ ಮತ್ತು ೪ ಬಾಟಲ್ ಬೀರ್ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
No Comments » |
ಅಪರಾಧ |
Permalink
Posted by spkgf
July 9, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೯-೦೭-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೭-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಬೇತಮಂಗಲ ವಾಸಿ ಶ್ರೀ ಮುನಯ್ಯ (೪೯) ಬಿನ್ ಗಟ್ಟಪ್ಪ ಎಂಬುವರು ತನ್ನ ಮನೆಯಿಂದ ಹೊಸ ಬಡಾವಣೆಯ ವಾಸಿಯೊಬ್ಬರ ಮರಣದ ಪ್ರಯುಕ್ತ ನೋಡಿಕೊಂಡು ಬರಲು ಕಾಂತ್ ರಾಜ್ ಕಟ್ಟಿಗೆ ಮಂಡಿಯ ಬಳಿ ಹೋಗುತ್ತಿರುವಾಗ ಅಪ್ಪಿ ಆಟೋ ಸಂಖ್ಯೆ ಕೆಎ-೦೮-೩೨೩೦ ರ ಚಾಲಕನಾದ ಮಂಜು ಎಂಬುವನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪ್ರಯುಕ್ತ ಮುನಯ್ಯ ಕೆಳಕ್ಕೆ ಬಿದ್ದಾಗ ಮೂಗಿನಲ್ಲಿ ರಕ್ತಗಾಯವಾಗಿರುತ್ತದೆ.
-
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೭-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ತಮಿಳಿನಾಡಿನ ವೇಲೂರು, ತಿರುನಗರದ ವಾಸಿ ಶ್ರೀ ಎನ್.ರವಿ ಬಿನ್ ನರಸಿಂಹನ್ ಕುಪ್ಪಂನಿಂದ ರಾಬರ್ಟ್ಸನ್ಪೇಟೆ ಕಡೆ ಬರುತ್ತಿರುವಾಗ ಸುಮತಿ ಜೈನ್ ಶಾಲೆಯ ಮುಂಭಾಗ ರಸ್ತೆಯಲ್ಲಿ ಬರುತ್ತಿದ್ದಾಗ ಎದುರುಗಡೆ ಇಂಡಿಕಾ ಕಾರು ಸಂಖ್ಯೆ ಟಿಎನ್-೦೯-ಎಎ-೯೫೨೯ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಾರುತಿ ಎಸ್ಟೀಂ ಸಂಖ್ಯೆ ಟಿಎನ್-೦೪-ಡಬ್ಯೂ-೦೮೭೪ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಕಾರಿನ ಬಲಭಾಗ ಇರುವ ಎರಡೂ ಡೋರ್ಗಳು ಪೂರ್ಣವಾಗಿ ಜಖಂಗೊಂಡಿರುತ್ತೆ.
-ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ೦೧
-
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕಿನ ಬೈನೇಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ. ದಿನಾಂಕ ೦೯-೦೭-೨೦೦೮ ರಂದು ಬೆಳಿಗ್ಗೆ ೦೯೩೦ ಗಂಟೆ ಸಮಯದಲ್ಲಿ ಆಂಧ್ರಪ್ರದೇಶದ ವಿಜಿಲಾಪುರದ ವಾಸಿ ಶ್ರೀಮತಿ ಗಿರಿಜಾ ರವರು ಆಷಾಡ ಮಾಸದ ಪ್ರಯುಕ್ತ ತವರು ಮನೆಗೆ ಬಂದಿದ್ದು, ಶ್ರೀ ವೇಣುಗೋಪಾಲ್ (೨೬) ಬಿನ್ ಮುನಿಸ್ವಾಮಪ್ಪ ಎಂಬುವರು ತನ್ನ ಹೆಂಡತಿ ಶ್ರೀಮತಿ ಗಿರಿಜಾ ರವರನ್ನು ತನ್ನ ಜೊತೆಗೆ ಕಳುಹಿಸಿಕೊಡಲು ತನ್ನ ಅತ್ತೆಯವರಿಗೆ ಕೇಳಿದ್ದು, ಕಳುಹಿಸಿಕೊಡದಿದ್ದಕ್ಕೆ ಜಿಗುಪ್ಸೆಗೊಂಡು ಅತ್ತೆಯ ಮನೆಯಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾನೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೦೭-೨೦೦೮ ರಂದು ೬೩೦ ಗಂಟೆ ಸಮಯದಲ್ಲಿ ರಾಬರ್ಟ್ಸನ್ಪೇಟೆಯ ಸುಮತಿನಗರ, ೫ನೇ ಕ್ರಾಸ್ನ ವಾಸಿ ಶ್ರೀ ವೆಂಕಟಸುಬ್ರಮಣ್ಯಂ ಎಂಬುವರು ಕೃಷ್ಣಗಿರಿಯಲ್ಲಿರುವ ಆರ್ಕನ್ ಗ್ರಾನೈಟ್ಸ್ ನ ಬ್ರಾಂಚ್ ಆಫೀಸ್ಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದುಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
No Comments » |
ಅಪರಾಧ |
Permalink
Posted by spkgf